Saturday 1 November 2014

dhammapada/yamaka vagga/1:10/the story of chunda butcher

ಪಾಪಿಯು ಇಹಪರಗಳೆರಡರಲ್ಲೂ ದುಃಖಿಸುತ್ತಾನೆ
ಇಲ್ಲಿಯೂ ಶೋಕಿಸುತ್ತಾನೆ, ಮುಂದೆ ಪರಲೋಕದಲ್ಲಿಯೂ ಶೋಕಿಸುತ್ತಾನೆ. ಪಾಪಿಯು ಉಭಯ ಸ್ಥಿತಿಗಳೆರಡರಲ್ಲೂ ಶೋಕಿಸುತ್ತಾನೆ. ತನ್ನ ಪಾಪಕೃತ್ಯಗಳನ್ನು ನೆನೆಯುತ್ತ ಶೋಕಿಸುತ್ತಾನೆ ಮತ್ತು ನರಳುತ್ತಾನೆ.  (15)
ಗಾಥ ಪ್ರಸಂಗ 1:10
ಕಸಾಯಿಯವನ ಶೋಕ ಪಶ್ಚಾತ್ತಾಪ (ಚುಂದ)

                ವೇಲುವನ ವಿಹಾರದ ಸಮೀಪದಲ್ಲಿ ಚುಂದನೆಂಬ ಅತಿಕ್ರೂರ ಕಸಾಯಿಯವನಿದ್ದನು. ಆತ ಸದಾ ಪ್ರಾಣಿಗಳ ಹತ್ಯೆ ಮಾಡುತ್ತಿದ್ದನು. ಆತ ತನ್ನ ಜೀವನ ಕಾಲದಲ್ಲಿ ಹತ್ಯೆಗಳು ಮಾಡುತ್ತಿದ್ದನೆ ಹೊರತು ಬೇರೆ ಯಾವ ಪುಣ್ಯ ಕಾರ್ಯಗಳನ್ನು ಮಾಡಲಿಲ್ಲ
.
                ಒಂದುದಿನ ಆತನು ಹುಚ್ಚಿಗೆ ಬಲಿಯಾದನು. ಆತನು ಬದುಕ್ಕಿದ್ದಂತೆಯೇ ನರಕಾಗ್ನಿಯ ಶಾರೀರಿಕ ಪೀಡೆಯನ್ನು ಅನುಭವಿಸತೊಡಗಿದನು. ಆತನ ಪಾಪಕೃತ್ಯಗಳ ಫಲವನ್ನು ಅನುಭವಿಸತೊಡಗಿದನು. ಆತನು ಹಂದಿಯು ಹತ್ಯೆಗೀಡಾಗುವಾಗ ನರಳುವಂತೆ ಮನೆಯಲ್ಲಿ ಹೊರಳಾಡಿ ನರಳಿದನು. ಆತನ ನರಳಾಟ, ಕಿರುಚಾಟಕ್ಕೆ ಹತ್ತರದ ಮನೆಗಳವರು ಏಳು ದಿನಗಳ ಕಾಲ ನಿದ್ರಿಸಲಿಲ್ಲ. ನಂತರ ಆತನು ಮರಣ ಹೊಂದಿ ನರಕದಲ್ಲಿ ಹುಟ್ಟಿದನು.

                ಈ ವಿಷಯವು ಭಿಕ್ಷುಗಳಲ್ಲಿ ಚಚರ್ೆಯ ವಿಷಯವಾಯಿತು. ಭಗವಾನರಲ್ಲಿ ಈ ವಿಷಯ ಕೇಳಿದಾಗ ಭಿಕ್ಷುಗಳೇ, ಆತನ ಪಾಪವು ಫಲ ನೀಡಿದೆ, ಆತ ಜೀವಿಸಿದ್ದರೂ ಇದೇರೀತಿ ನರಳುತ್ತಿದ್ದನು. ಈಗ ಆತನು ನರಕದಲ್ಲಿ ಉದಯಿಸಿದ್ದಾನೆ ಎಂದು ಹೇಳಿ ಮೇಲಿನ ಗಾಥೆಯನ್ನು ಹೇಳಿದರು.

No comments:

Post a Comment