Saturday 15 November 2014

dhammapada/yamaka vagga/1:11/upasaka dhammika story

 ಪುಣ್ಯಶಾಲಿಯು ಇಹಪರಗಳೆರಡರಲ್ಲೂ ಸುಖಿಸುತ್ತಾನೆ
ಇಲ್ಲಿಯೂ ಸಂತೋಷಿಸುತ್ತಾನೆ, ಮುಂದೆ ಪರಲೋಕದಲ್ಲಿಯೂ ಸಂತೋಷಿಸುತ್ತಾನೆ. ಪುಣ್ಯಶಾಲಿಯು ಉಭಯ ಸ್ಥಿತಿಗಳೆರಡರಲ್ಲೂ ಸಂತೋಷಿಸುತ್ತಾನೆ. ತನ್ನ ಪುಣ್ಯ ಕಾರ್ಯಗಳನ್ನು ನೆನೆಯುತ್ತ ಸಂತೋಷಿಸುತ್ತಾನೆ ಮತ್ತು ನಲಿಯುತ್ತಾನೆ.        (16)

ಗಾಥ ಪ್ರಸಂಗ 1:11
ಉಪಾಸಕ ಧಮ್ಮಿಕನ ಆನಂದಬಾಷ್ಪ
          ಶ್ರಾವಸ್ತಿಯಲ್ಲಿ ಧಮ್ಮಿಕನೆಂಬ ಶ್ರದ್ಧೋಪಾಸಕನಿದ್ದನು. ಆತನು ಪ್ರತಿದಿನ ಭಿಕ್ಷುಗಳಿಗೆ ದಾನ ನೀಡುತ್ತ ಮತ್ತು ಶೀಲ ಪಾಲಿಸುತ್ತಾ ಇದ್ದನು. ಆತನಿಗೆ ಏಳು ಗಂಡು ಮತ್ತು ಏಳು ಹೆಣ್ಣು ಮಕ್ಕಳಿದ್ದರು. ಅವರು ಸಹಾ ಆತನಂತೆಯೇ ದಾನ, ಶೀಲಗಳ ಸದ್ಗುಣಗಳಲ್ಲಿ ತಲ್ಲೀನರಾಗಿದ್ದರು. ಧಮ್ಮಿಕನಿಗೆ 500 ಜನ ಉಪಾಸಕ ಹಿಂಬಾಲಕರಿದ್ದರು.
          ಒಂದುದಿನ ಧಮ್ಮಿಕ ರೋಗಗ್ರಸ್ತನಾಗಿ, ಸಾವಿನ ದವಡೆಯಲ್ಲಿದ್ದನು. ಆತನು ಸಂಘಕ್ಕೆ ಪವಿತ್ರ ಗ್ರಂಥಗಳ ಪಠಣೆ ಮಾಡುವಂತೆ ಕೇಳಿಕೊಂಡಾಗ, ಭಿಕ್ಷುಗಳು ಆತನ ಹಾಸಿಗೆಯ ಪಕ್ಕದಲ್ಲಿ ಮಹಾ ಸತಿಪಟ್ಠಾನ ಸುತ್ತದ ಪಠನೆ ಮಾಡತೊಡಗಿದರು. ಆಗ ಆರು ಸುಗತಿಯ ಲೋಕದಿಂದ ಆರು ರಥಗಳು ಆಯಾ ಲೋಕಕ್ಕೆ ಆಹ್ವಾನ ನೀಡಲು ಬಂದವು. ಆದರೆ ಧಮ್ಮಿಕನು ಸುತ್ತದ ಪಠಣಕ್ಕೆ ಅಡ್ಡಿಯಾಗಬಹುದೆಂದು ಆ ರಥಗಳಿಗೆ ನಿಲ್ಲಿರಿ ಎಂದನು. ಆದರೆ ಪಠಣ ಮಾಡುತ್ತಿದ್ದ ಭಿಕ್ಷುಗಳು ತಮಗೆ ಹೇಳುತ್ತಿರಬಹುದೆಂದು ಅಷ್ಟಕ್ಕೆ ನಿಲ್ಲಿ ಹೊರಟರು.
          ಸ್ವಲ್ಪಕಾಲನಂತರ ಧಮ್ಮಿಕ ತನ್ನ ಮಕ್ಕಳಿಗೆ ಸುಗತಿಯ ಕಥೆಗಳ ಬಗ್ಗೆ ಹೇಳಿದರು. ಅವರು ರಥದ ಆಯ್ಕೆಗಾಗಿ ಹಾರವೊಂದನ್ನು ಆ ಕಡೆ ಎಸೆಯುವಂತೆ ಮಕ್ಕಳಿಗೆ ಹೇಳಿದರು. ಅದರಂತೆ ಆ ಹಾರವು ಗಾಳಿಯಲ್ಲಿ ನಿಂತಂತೆ ಕಾಣಿಸಿ ನಂತರ ಮೇಲ್ಬಾಗಕ್ಕೆ ಚಲಿಸಿತು. ವಾಸ್ತವವಾಗಿ ಅದು ರಥದ ಚಕ್ರಕ್ಕೆ ಸಿಲುಕಿತ್ತು. ಆಗ ಮಕ್ಕಳಿಗೆ ಹೀಗೆ ಹೇಳಿದನು. ನಾನು ತುಸಿತಾ ದೇವಲೋಕ್ಕೆ ಹೊರಡುತ್ತಿರುವೆನು. ನೀವು ಕ್ಷೊಭೆಗೆ ಒಳಗಾಗದಿರಿ. ನನ್ನಂತೆ ಸುಗತಿ ಬಯಸುವುದಾದರೆ ನೀವು ದಾನಶೀಲ ಪಾಲಿಸಿ ಎಂದು ಹೇಳಿ ಸುಗತಿಯಲ್ಲಿ ಹುಟ್ಟಿದರು.

          ಹೀಗೆ ಶೀಲವಂತರು ಇಲ್ಲಿ ಮತ್ತು ಮುಂದೆಯೂ ಸುಖವಾಗಿ ಇರುತ್ತಾರೆ. ಈ ವಿಷಯ ಭಗವಾನರ ಬಳಿಗೆ ಬಂದಾಗ ಭಗವಾನರು ಸಹಾ ಆತನು ತುಸಿತಾದಲ್ಲಿ ಹುಟ್ಟಿರುವನೆಂದು ತಿಳಿಸಿ ಮೇಲಿನ ಗಾಥೆ ನುಡಿದರು.

No comments:

Post a Comment