Wednesday 27 May 2015

dhammapada/lokavagga/13.11/kaala

ಸರ್ವಲೋಕಾಧಿಪತಿಗಿಂತ ಸೋತಪತ್ತಿ ಫಲ ಶ್ರೇಷ್ಠವಾದುದು
ಇಡೀ ಪೃಥ್ವಿಗೆ ಚಕ್ರವತರ್ಿಯಾಗುವುದಕ್ಕಿಂತ ಸ್ವರ್ಗಕ್ಕೆ ಹೋಗುವುದಕ್ಕಿಂತಲೂ ಸರ್ವಲೋಕಾಧಿಪತಿಯಾಗುವುದಕ್ಕಿಂತಲೂ ಸೋತಪತ್ತಿಫಲ ಶ್ರೇಷ್ಠವಾದದ್ದು.      (178)
ಗಾಥ ಪ್ರಸಂಗ 13:11
ಅನಾಥಪಿಂಡಿಕನ ಮಗ ಕಾಲನ ಕಥೆ


                ಅನಾಥಪಿಂಡಿಕನ ಮಗನಾದ ಕಾಲನು ಬುದ್ಧ ಭಗವಾನರಿಂದ ಮತ್ತು ಭಿಕ್ಷುಗಳಿಂದ ದೂರವೇ ಇದ್ದನು. ಹೀಗೆ ಆದರೆ ಭವಿಷ್ಯದಲ್ಲಿ ಮಗನಿಗೆ ಹಿತವಿರಲಾರದೆಂದು ಅನಾಥಪಿಂಡಿಕನು ಮಗನನ್ನು ಸರಿದಾರಿಗೆ ತರಲೆಂದು ಉಪಾಯವೊಂದನ್ನು ಮಾಡಿದನು. ಅದೇನೆಂದರೆ ಒಂದುದಿನ ಶೀಲ ಪಾಲಿಸಿದರೆ ನೂರು ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿದನು. ಅದನ್ನು ಆತನು ಪಾಲಿಸಿದ ನಂತರ, ಒಂದು ಗಾಥೆಯನ್ನು ನೆನಪಿನಲ್ಲಿಟ್ಟುಕೊಂಡು ಬಂದು ಹೇಳಿದರೆ ಸಾವಿರ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿದನು.


                ಹೀಗಾಗಿ ಆ ಯುವಕನು ಧಮ್ಮವನ್ನು ಆಲಿಸಲು ಬುದ್ಧ ಭಗವಾನರ ಬಳಿಗೆ ಬಂದನು. ಆದರೆ ಧಮ್ಮವನ್ನು ಅರಿಯುವ ಬದಲು ಕೇವಲ ಒಂದು ಗಾಥೆಯನ್ನು ನೆನಪಿನಲ್ಲಿಡಲು ಪ್ರಯತ್ನಿಸುತ್ತಿದ್ದನು. ಹೀಗಾಗಿ ಆ ಯುವಕನು ಒಂದೇ ಗಾಥೆಯನ್ನು ಹಲವುಬಾರಿ ಪುನರುಚ್ಛಾರ ಮಾಡುತ್ತಲೇ ಧಮ್ಮದ ಅರ್ಥವನ್ನು ಪೂರ್ಣವಾಗಿ ಗ್ರಹಿಸಿ ಸೋತಾಪತ್ತಿ ಫಲವನ್ನು ಪಡೆದನು. ನಂತರ ಮಾರನೆಯದಿನ ಭಗವಾನರಿಗೆ ಮತ್ತು ಭಿಕ್ಖುಗಳಿಗೆ ದಾನಕ್ಕೂ ಮನೆಗೆ ಆಹ್ವಾನಿಸಿದನು. ಆ ಸಂದರ್ಭದಲ್ಲಿ ಅನಾಥಪಿಂಡಿಕನು ಸಾವಿರ ಚಿನ್ನದ ನಾಣ್ಯಗಳನ್ನು ಕಾಲನಿಗೆ ನೀಡಲು ಹೋದಾಗ ಆತನು ಸ್ವೀಕರಿಸಲು ನಿರಾಕರಿಸಿದನು. ಆಗ ಅನಾಥಪಿಂಡಿಕನು ಭಗವಾನರಲ್ಲಿ ಹೀಗೆ ಹೇಳಿದನು: ಭಗವಾನ್  ನನ್ನ ಮಗ ಈಗ ಬದಲಾಗಿದ್ದಾನೆ, ಆತನು ಆರ್ಯರಂತೆ ವತರ್ಿಸುತ್ತಿದ್ದಾನೆ. ಆಗ ಭಗವಾನರು ಕಾಲನು ಸೋತಪನ್ನನಾಗಿರುವುದನ್ನು ಹೇಳಿ ಈ ಮೇಲಿನ ಗಾಥೆ ನುಡಿದರು.

dhammapada/lokavagga/13.10/thegivingceremony

ಮೂರ್ಖರು ದಾನದಲ್ಲಿ ಆನಂದಿಸಲಾರರು
ಜಿಪುಣರು ದೇವಲೋಕವನ್ನು ತಲುಪಲಾರರು, ಮೂರ್ಖರು ದಾನವನ್ನು ಪ್ರಶಂಸಿಸಲಾರರು, ಧೀರರಾದ ಜ್ಞಾನಿಗಳು ಮಾತ್ರ ದಾನದಲ್ಲಿ ಆನಂದಿತರಾಗಿ ಪರಲೋಕದಲ್ಲಿ ಸುಖಿಸುವರು. (177)
ಗಾಥ ಪ್ರಸಂಗ 13:10
ದಾನಗಳ ಸ್ಪಧರ್ೆ

                ಒಮ್ಮೆ ಮಹಾರಾಜ ಪಸೇನದಿಯು ಬುದ್ಧ ಭಗವಾನರಿಗೆ ಮತ್ತು ಭಿಕ್ಷು ಸಂಘಕ್ಕೆ ವಿಜೃಂಭಣೆಯಿಂದ ದಾನ ಮಾಡಿದನು. ಆದರೆ ಅದಕ್ಕೆ ಪ್ರತಿದ್ವಂದಿ ಸ್ಪಧರ್ಿ ಎಂಬಂತೆ ರಾಜನ ಅಧೀನದಲ್ಲಿರುವವನೊಬ್ಬ ಅದಕ್ಕಿಂತಲೂ ಚೆನ್ನಾಗಿ ದಾನವನ್ನು ಏರ್ಪಡಿಸಿದನು. ಇದರಿಂದಾಗಿ ರಾಜನಿಗೆ ಪಶ್ಚಾತ್ತಾಪವುಂಟಾಯಿತು. ಆದರೆ ರಾಣಿ ಮಲ್ಲಿಕಾಳು ಇದಕ್ಕಾಗಿ ಉಪಾಯವೊಂದನ್ನು ರಾಜನಿಗೆ ಹೇಳಿದಳು. ಅದರಂತೆಯೇ ರಾಜನು ಈ ಬಾರಿ ಸರಿಸಾಟಿಯಿಲ್ಲದ ದಾನಕ್ಕೆ ಏಪರ್ಾಟು ಮಾಡಿದನು. ಅದಕ್ಕಾಗಿ ಬೃಹತ್ತಾದ ಗುಡಾರವನ್ನು ಹಾಕಿಸಿದನು. ನಂತರ ಅಲ್ಲಿಗೆ ಬರುವ ಭಿಕ್ಷುಗಳಿಗೆ ಗೌರವ ಸೂಚಿಸಲು 500 ಆನೆಗಳು 500 ಶ್ವೇತ ಛತ್ರಿಗಳನ್ನು ಹಿಡಿದಿದ್ದವು. ಗುಡಾರದ ಮಧ್ಯೆ ಹತ್ತು ದೋಣಿಗಳು ಇದ್ದವು. ಅವುಗಳ ತುಂಬಾ ಸುಗಂಧ ದ್ರವ್ಯಗಳನ್ನು ತುಂಬಿಸಲಾಗಿತ್ತು. ಅಲ್ಲಿ ಬಡಿಸಲು ರಾಜಕುಮಾರಿಯರ ಗುಂಪೇ ಬರುತ್ತಿತ್ತು. ಎಲ್ಲಾ ಸಿದ್ಧತೆಗಳಾದ ಮೇಲೆ ಆಹಾರವನ್ನು ಬಡಿಸಲಾಯಿತು. ನಂತರ ರಾಜ ಉಳಿದ ರೀತಿಯಲ್ಲೂ ದಾನ ಮಾಡಿದನು. ಈ ರೀತಿ ರಾಜನು ಒಂದೇ ದಿನದಲ್ಲಿ 14 ದಶಲಕ್ಷ ಖಚರ್ು ಮಾಡಿ ಮಹಾನ್ ದಾನವನ್ನು ಏಪರ್ಾಟು ಮಾಡಿದ್ದನು.
                ರಾಜನ ಬಳಿಯಲ್ಲಿ ಆಗ ಇಬ್ಬರು ಮಂತ್ರಿಗಳು ಸಹಾ ಇದ್ದರು. ಅವರೇ ಜನ್ಹ ಮತ್ತು ಕಾಲ. ಜನ್ಹನು ಈ ದಾನದಿಂದ ಅತ್ಯಂತ ಸಂಭ್ರಮಪಟ್ಟನು ಮತ್ತು ಆನಂದವೂ ಪಟ್ಟನು. ಆತನು ರಾಜನಿಗೆ ಇದು ಸರಿಸಾಟಿಯಿಲ್ಲದ ದಾನವಾಗಿದೆ ಮಹಾರಾಜ, ಯೋಗ್ಯ ದಾನವಾಗಿದೆ ಎಂದು ಪ್ರಶಂಸಿಸಿದನು. ಆದರೆ ಮಂತ್ರಿ ಕಾಲನಿಗೆ ಇದರಿಂದ ಸಂತೋಷವಾಗಲಿಲ್ಲ, ಆನಂದವೂ ಆಗಲಿಲ್ಲ. ಆತನು ಹೀಗೆ ಯೋಚಿಸಿದನು: ಈ ರಾಜನು ವ್ಯರ್ಥವಾಗಿ ಹಣವನ್ನು ಪೋಲು ಮಾಡುತ್ತಿದ್ದಾನೆ, ಈ ಭಿಕ್ಷುಗಳಿಗೇನು ತಿನ್ನುತ್ತಾರೆ ನಂತರ ವಿಹಾರಕ್ಕೆ ಹೋಗಿ ಮಲಗಿಬಿಡಬಹುದು.
                ಭಗವಾನರು ಆಹಾರ ದಾನದ ನಂತರ ಅನುಮೋದನೆಯನ್ನು ಮಾಡಿ ಕಿರಿದಾದ ಧಮ್ಮೋಪದೇಶವನ್ನು ಮಾಡಿ ಅಲ್ಲಿಂದ ವಿಹಾರಕ್ಕೆ ಮರಳಿದರು.
                ರಾಜನಿಗೆ ಆಶ್ಚರ್ಯವಾಯಿತು. ಇಂತಹ ಸರಿಸಾರಿಯಿಲ್ಲದ ದಾನವನ್ನು ಏಪರ್ಾಟು ಮಾಡಿದ್ದರೂ ಸಹಾ ಭಗವಾನರು ಕಿರಿದಾದ ಧಮ್ಮ ಬೋಧನೆಯನ್ನು ಏಕೆ ಮಾಡಿದರು? ನನ್ನಿಂದ ಏನಾದರೂ ಅಪಚಾರವು ಆಗಿಹೋಯಿತೆ? ಎಂದು ಚಿಂತಿಸುತ್ತಾ ಆತನು ವಿಹಾರಕ್ಕೆ ಪ್ರವೇಶಿಸಿ ಭಗವಾನರನ್ನು ಸಂದಶರ್ಿಸಿದನು. ಆಗ ಭಗವಾನರು ಆತನಿಗೆ ಹೀಗೆ ಹೇಳಿದರು:

                ಓ ಮಹಾರಾಜ, ಸರಿಸಾಟಿಯಿಲ್ಲದ ದಾನವನ್ನು (ಅಸದಿನದಾನ) ಮಾಡಿದ್ದರೂ ಸಹಾ ಏಕೆ ತುಸು ಮಂಕಾಗಿರುವಿರಿ. ಈ ಮಹತ್ತರ ದಾನಕ್ಕಾಗಿ ನೀವು ಅಪಾರ ಆನಂದಪಡಬೇಕಿತ್ತು. ಈ ಬಗೆಯ ದಾನವು ಪ್ರತಿ ಬುದ್ಧರ ಆಗಮನದಲ್ಲಿ ಒಮ್ಮೆ ಮಾತ್ರ ಸಂಭವಿಸುತ್ತದೆ. ನಾನು ಕಿರು ಧಮ್ಮೋಪದೇಶ ನೀಡಿದ್ದಕ್ಕೆ ಕಾರಣವಿದೆ ಮಹಾರಾಜ, ನಿನ್ನ ಮಂತ್ರಿಗಳಲ್ಲಿ ಒಬ್ಬನು ದಾನವನ್ನೇ ವ್ಯರ್ಥವಾದುದು ಮತ್ತು ನಷ್ಟಕಾರಿ ಎಂದು ಭಾವಿಸುತ್ತಾನೆ. ಅದರಿಂದ ನನ್ನ ಬೋಧನೆ ಆಲಿಸುತ್ತಿದ್ದಂತೆ ಅವನಲ್ಲಿ ದ್ವೇಷವು ಹೆಚ್ಚಾಗುತ್ತಿತ್ತು. ಆ ದ್ವೇಷವು ಇನ್ನಷ್ಟು ಹೆಚ್ಚಾದರೆ, ಆ ಕುಕಮ್ಮ ಫಲದಂತೆ ಆತನಿಗೆ ಮುಂದೆ ಅಪಾರ ದುಃಖದ ಸ್ಥಿತಿಯು ಸಿಗುತ್ತಿತ್ತು. ಆದ್ದರಿಂದಾಗಿ ನಾನು ಬೋಧನೆಯನ್ನು ಅಲ್ಪವಾಗಿ ಬೋಧಿಸಿದೆನು. ನಂತರ ಹೀಗೆ ಮುಂದುವರೆಸಿದರು: ಓ ಮಹಾರಾಜ! ಮೂರ್ಖರು ದಾನದಲ್ಲಿ ಆನಂದಿಸುವುದಿಲ್ಲ, ಹೀಗಾಗಿ ದುರ್ಗತಿಗೆ ಹೋಗುವರು. ಆದರೆ ಜ್ಞಾನಿಗಳು ದಾನದಲ್ಲೇ ಆನಂದಿಸುವವರಾಗಿ ಸುಗತಿ ತಲುಪುವರು ಎಂದು ಹೇಳಿ ಮೇಲಿನ ಗಾಥೆಯನ್ನು ನುಡಿದರು.

dhammapada/lokavagga/13.9/cincamaanavikaa

ಸುಳ್ಳಾಡುವವನು ಮಾಡದ ಪಾಪವಿಲ್ಲ
ಸುಳ್ಳಾಡುವವನು ಸತ್ಯ ಹೇಳದಿರುವ ಒಂದು ಧಮ್ಮವನ್ನು ಅತಿಕ್ರಮಿಸಿದ್ದಾನೆ, ಹಾಗೆಯೇ ಪರಲೋಕವನ್ನು ಧಿಕ್ಕರಿಸುವ ಆತನು ಮಾಡದ ಪಾಪವೇ ಇಲ್ಲ.            (176)
ಗಾಥ ಪ್ರಸಂಗ 13:9
ಚಿಂಚಮಾಣವಿಕಾಳ ಘೋರ ಸುಳ್ಳು ಆರೋಪ




                ಆಗ ಭಗವಾನರು ಶ್ರಾವಸ್ತಿಯಲ್ಲಿದ್ದರು. ಭಗವಾನರ ಧಮ್ಮವನ್ನು ಆಲಿಸಲು ಜನರು ದೂರ ದೂರದಿಂದಲೂ ಬರುತ್ತಿದ್ದರು. ಜನರು ಕಿಕ್ಕಿರಿದು ಸೇರುತ್ತಿದ್ದರು. ಬಹಳಷ್ಟು ಜನರು ಪೂರ್ಣವಾಗಿ ದುಃಖ ವಿಮುಕ್ತರಾಗಲು ಭಿಕ್ಷು ಭಿಕ್ಷುಣಿಯರಾಗುತ್ತಿದ್ದರು. ಉಳಿದವರು ಬೌದ್ಧೋಪಾಸಕರಾಗಿ ಪಂಚಶೀಲ, ದಾನ, ಪಾಲಿಸಿ, ಉಪೋಸಥ ಆಚರಿಸುತ್ತ ಜೀವಿಸುತ್ತಿದ್ದರು. ಹೀಗಾಗಿ ಎಲ್ಲೆಡೆ ಬುದ್ಧರ ಬೋಧಿಯ ಪ್ರಕಾಶ ಹೆಚ್ಚಾದಂತೆಲ್ಲಾ ಬೇರೆ ನಂಬಿಕೆಯಂತೆ ಜೀವಿಸುತ್ತಿದ್ದ ಇತರ ಪಂಗಡಗಳ ಅನುಯಾಯಿಗಳ ಸಂಖ್ಯೆ ಕ್ಷೀಣಿಸಿತು. ಅವರಿಗೆ ಗೌರವ ಆದರ, ಆತಿಥ್ಯ ಕಡಿಮೆಯಾಗತೊಡಗಿತು. ಹೀಗಾಗಿ ಸ್ವಾರ್ಥ ಅಸೂಯೆಗೆ ಅವರು ಗುರಿಯಾಗಿ, ಕುಟಿಲ ನೀತಿಯೊಂದನ್ನು ಪ್ರಯೋಗಿಸಲು ಸಿದ್ಧರಾದರು. ಅದೇನೆಂದರೆ ಬುದ್ಧ ಭಗವಾನರ ಶೀಲಕ್ಕೆ ಧಕ್ಕೆ ಉಂಟುಮಾಡಿದರೆ ಸರ್ವವೂ ಸರಿಹೋಗುತ್ತದೆ ಎಂದು ಭಾವಿಸಿ ಮತಿಯಾನುಯಾಯಿಗಳು ತಮ್ಮ ಪಂಥದ ಸುಂದರ ಶಿಷ್ಯೆಯಾದ ಚಿಂಚಮಾಳವಿಕಾಳಿಗೆ ಕರೆಸಿ ಆಕೆಗೆ ಹೀಗೆ ಹೇಳಿದರು: ನಿನ್ನ ಹೃದಯದಲ್ಲಿ ನಮ್ಮ ಬಗ್ಗೆ ಸ್ವಲ್ಪವಾದರೂ ಸಹಾನುಭೂತಿ ಇದ್ದುದೇ ಆದರೆ ನಮಗೆ ಸಹಾಯಮಾಡು ಮತ್ತು ಸಮಣ ಗೋತಮನಿಗೆ ಅವಮಾನವನ್ನುಂಟುಮಾಡು ಎಂದು ಆಕೆಗೆ ಉಪಾಯ ತಿಳಿಸಿದರು.

                ಅದೇ ಸಂಜೆಗೆ ಆಕೆಯು ಹಲವು ಹೂಗಳೊಂದಿಗೆ ಜೇತವನ ವಿಹಾರದೆಡೆಗೆ ನಡೆದಳು. ಆಗ ಜನರು ಆಕೆಗೆ ಎಲ್ಲಿ ಹೋಗುತ್ತಿರುವೆ ಎಂದು ಕೇಳಿದರೆ ಆಕೆಯು ಹೀಗೆ ಉತ್ತರಿಸುತ್ತಿದ್ದಳು: ನಾನು ಎಲ್ಲಿಯಾದರೂ ಹೋಗುವೆನು? ನಿಮಗದರಿಂದ ಲಾಭವೇನು? ಆಕೆಯು ಜೇತವನಕ್ಕೆ ಸಮೀಪವಾಗಿದ್ದ ಪರಪಂಗಡದ ಸ್ಥಳದಲ್ಲಿ ತಲುಪಿ, ಪುನಃ ಬೆಳಿಗ್ಗೆ ಹಿಂತಿರುಗಿ ಬರುತ್ತಿದ್ದಳು. ಆಗ ಜನರೇನಾದರೂ ಎಲ್ಲಿಂದ ಬರುತ್ತಿರುವೆ ಎಂದೇನಾದರೂ ಕೇಳಿದರೆ ಆಕೆಯು ಹೀಗೆ ಉತ್ತರಿಸುತ್ತಿದ್ದಳು: ನಾನು ಸಮಣ ಗೌತಮರೊಡನೆ ಗಂಧಕುಟಿಯಲ್ಲಿ ರಾತ್ರಿ ಕಳೆಯುತ್ತ ಈಗ ಹಿಂತಿರುಗುತ್ತಿದ್ದೇನೆ. ಇದೇರೀತಿಯಲ್ಲಿ ಆಕೆಯು ಮೂರು ಅಥವಾ ನಾಲ್ಕು ತಿಂಗಳು ಪುನರಾವರ್ತನೆ ಮಾಡಿದಳು. ನಂತರ ಆಕೆಯು ಹೊಟ್ಟೆಗೆ ಬಟ್ಟೆಗೆ ಕಟ್ಟಿಕೊಂಡು ಗಭರ್ಿಣಿಯಂತೆ ಕಾಣಿಸತೊಡಗಿದಳು. ನಂತರ ಎಂಟು ತಿಂಗಳ ಬಳಿಕ ಆಕೆಯು ತನ್ನ ಚರ್ಮದ ಬಣ್ಣವನ್ನು ಹೋಲುವ ಮರದ ಹಲಗೆಗೆ ಹೊಟ್ಟೆಯ ಆಕಾರ ನೀಡಿ, ಅದನ್ನು ಹೊಟ್ಟೆಗೆ ಕಟ್ಟಿಕೊಂಡು ವಸ್ತ್ರ ಧರಿಸಿದಾಗ ಖಂಡಿತವಾಗಿ ಆಕೆ ಗಭರ್ಿಣಿಯಂತೆ ಗೋಚರಿಸಿದಳು. ನಂತರ ಆಕೆಯು ಅಂಗೈ ಮತ್ತು ಪಾದಕ್ಕೆ ಹೊಡೆದುಕೊಂಡು ಊದಿಸಿಕೊಂಡು ಬಳಲಿದಂತೆ ನಟಿಸುತ್ತ ತುಂಬು ಗಭರ್ಿಣಿಯಂತೆ ಕಾಣಿಸಿದಳು. ಹೀಗೆ ವೇಷಧರಿಸಿದ ಆಕೆಯು ಆ ಸಂಜೆ ಜೇತವನಕ್ಕೆ ಬಂದಳು.
                ಆಗ ಬುದ್ಧ ಭಗವಾನರು ಧಮ್ಮಪ್ರವಚನ ಮಾಡುತ್ತಿದ್ದರು. ಸುತ್ತಲೂ ಭಿಕ್ಷುಗಳು ಮತ್ತು ಉಪಾಸಕರು ಇದ್ದರು. ಆಗ ಆಕೆಗೆ ಎಲ್ಲರಿಗೂ ಕಾಣಿಸುವಂತಹ ಸ್ಥಳದಲ್ಲಿ ನಿಂತು ಬುದ್ಧರಿಗೆ ಅಭಿಮುಖವಾಗಿ ನಿಂತು ಹೀಗೆ ಸುಳ್ಳು ಆರೋಪ ಮಾಡಿದಳು ಓಹ್, ದೊಡ್ಡ ಸಮಣನೇ, ನೀನು ಕೇವಲ ಪರರಿಗೆ ಬೋಧಿಸುತ್ತೀಯೆ. ನಾನು ನಿನ್ನಿಂದ ಗಭರ್ಿಣಿಯಾಗಿರುವೆನು, ಆದರೂ ನನ್ನ ಪ್ರಸೂತಿಗಾಗಿ ನೀನು ಯಾವ ವ್ಯವಸ್ಥೆಯೂ ಮಾಡಲಿಲ್ಲ. ಕೇವಲ ಆನಂದ ಅನುಭವಿಸುವುದು ಮಾತ್ರ ನಿನಗೆ ಗೊತ್ತಿದೆ.
                ಆಗ ಭಗವಾನರು ತಮ್ಮ ಧಮ್ಮಬೋಧನೆ ಅಷ್ಟಕ್ಕೇ ನಿಲ್ಲಿಸಿ ಆಕೆಗೆ ಹೀಗೆ ಹೇಳಿದರು: ಸೋದರಿ, ಕೇವಲ ನಿನಗೆ ಮತ್ತು ನನಗೆ ಮಾತ್ರ ನೀನು ಹೇಳುತ್ತಿರುವುದು ಸತ್ಯವೋ ಅಥವಾ ಅಲ್ಲವೋ ಎಂಬುದು ತಿಳಿದಿದೆ ಎಂದು ಭಗವಾನರು ಆಕೆಗೆ ಹೇಳಿದಾಗಲೂ ಆಕೆಯು ಹದ್ದುಮೀರಿ ಹೀಗೆ ಹೇಳಿದಳು: ಹೌದು, ಸರಿಯಾಗಿಯೇ ಹೇಳಿದ್ದಿ, ನನ್ನ ಮತ್ತು ನಿನ್ನ ವಿನಃ ಬೇರೆಯವರಿಗೆ ನಾವು ಮಾಡಿದ್ದು ಹೇಗೆ ಗೊತ್ತಾಗುವುದು?
                ತಕ್ಷಣ ಇಂದ್ರನಿಗೆ (ದೇವತೆಗಳ ಒಡೆಯ ಸಕ್ಕ) ಜೇತವನದಲ್ಲಿ ನಡೆಯುತ್ತಿರುವ ಘೋರ ಆರೋಪ ಗಮನಕ್ಕೆ ಬಂದಿತು. ತಕ್ಷಣ ಇತರ ನಾಲ್ಕು ದೇವಗಣವು ಜೇತವನಕ್ಕೆ ತಕ್ಷಣದಲ್ಲಿ ಧಾವಿಸಿ ಸಣ್ಣ ಇಲಿಗಳ ರೂಪ ಧರಿಸಿ, ಚಿಂಚಮಾಣವಿಕಳ ವಸ್ತ್ರಗಳ ಮೇಲೆ ಹರಿದಾಡಿ ಮರದ ಹಲಗೆಗೆ ಆಕೆ ಕಟ್ಟಿಕೊಂಡಿರುವ ಹುರಿಗಳನ್ನು ಕತ್ತರಿಸಿ ಹಾಕಿದವು. ಇಲ್ಲಿಗಳ ಚಲನೆಗೆ ಆಕೆಯು ಮೈ ಒದರಿದಾಗ ಆ ಮರದ ಹಲಗೆಯು ಕೆಳಗೆ ಬಿದ್ದು ಆಕೆಯ ಆರೋಪ ನಿರಾಧಾರ ಎಂದು ಸಾಬೀತುಪಡಿಸಿದವು.
                ತಕ್ಷಣ ದಿಗ್ಭ್ರಾಂತರಾಗಿದ್ದ ಜನರಿಗೆ ಆಕ್ರೋಶ ಉಂಟಾಯಿತು. ಯಾರ ಮಾತು ಕೇಳದ ಸ್ಥಿತಿಯಲ್ಲಿದ್ದ ಅವರು ದುಷ್ಟೆ, ಸುಳ್ಳುಗಾತಿ, ಮೋಸಗಾತಿ, ಭಗವಾನರ ಕುರಿತು ಆರೋಪಿಸುವುದಕ್ಕೆ ನಿನಗೆಷ್ಟು ಧೈರ್ಯ ಎಂದು ಕೆಲವರು ಉಗಿದರು. ಕೆಲವರು ಹೊಡೆಯಲು ಬಂದರು. ಆಗ ಆಕೆಯು ಜೀವ ಭಯದಿಂದ ಓಡಿದಳು. ವಿಹಾರದಿಂದ ಹೊರಕ್ಕೆ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಿದಳು. ಅಷ್ಟರಲ್ಲಿ ಭೂಕಂಪಿಸಿ, ಅವಳಿದ್ದ ಸ್ಥಳದಲ್ಲಿ ಬಿರುಕು ಮೂಡಿ, ಭೂಮಿಯೇ ಸೀಳಿದಾಗ ಆಕೆಯು ಅದರೊಳಗೆ ಬಿದ್ದಳು, ಸತ್ತು ಅವೀಚಿ ನರಕದಲ್ಲಿ ಹುಟ್ಟಿದಳು.


                ಮಾರನೆಯದಿನ ಭಿಕ್ಷುಗಳು ಈ ವಿಷಯವನ್ನು ಚಚರ್ಿಸುತ್ತಿದ್ದರು. ಅಲ್ಲಿಗೆ ಬಂದ ಭಗವಾನರು ಚಿಂಚಮಾಣವಿಕಾಳ ಬಗ್ಗೆ ಈ ಮೇಲಿನ ಗಾಥೆ ಹೇಳಿದರು. ನಂತರ ಭಗವಾನರು ಈ ಹಿಂದೆಯು ಆಕೆ ಹಿಂದಿನ ಜನ್ಮವೊಂದರಲ್ಲಿ ಹೀಗೆ ಆರೋಪಿಸಿ ಶಿಕ್ಷೆಗೆ ಒಳಗಾಗಿದ್ದಾಳೆ ಎಂದು ಆ ಜನ್ಮದ ಘಟನೆಯನ್ನು ಹೇಳಿದರು.

dhammapada/lokavagga/13.8/30bhikkhus

ಧೀರರು ಲೋಕಕ್ಕೆ ಅತೀತರಾಗುವರು
ಹಂಸಗಳು ಸೂರ್ಯನ ಪಥದಲ್ಲಿ ಸಾಗುವುವು, ಇದ್ಧಿಶಕ್ತಿವುಳ್ಳವರು ಆಕಾಶಗಾಮಿಗಳಾಗಿ ವಿಹರಿಸುವರು. ಆದರೆ ಧೀರರು ಮಾರನ ಮತ್ತು ಆತನ ಸೈನ್ಯವನ್ನು ಸೋಲಿಸಿ ಲೋಕಕ್ಕೆ ಅತೀತರಾಗುವರು.          (175)
ಗಾಥ ಪ್ರಸಂಗ 13:8
ಮೂವತ್ತು ಭಿಕ್ಷುಗಳ ಆಕಾಶಯಾತ್ರೆ

                ಒಮ್ಮೆ ಭಗವಾನರು ಶ್ರಾವಸ್ತಿಯ ಜೇತವನದಲ್ಲಿದ್ದಾಗ ದೂರದ ರಾಜ್ಯದ ಮೂವತ್ತು ಭಿಕ್ಷುಗಳು ಭಗವಾನರನ್ನು ಭೇಟಿಮಾಡಲು ಬಂದರು. ಅವರನ್ನು ಭೇಟಿ ಮಾಡಲು ಪೂಜ್ಯ ಆನಂದರವರು ಅವಕಾಶ ಮಾಡಿಕೊಟ್ಟರು. ನಂತರ ವಿಹಾರದ ಪ್ರವೇಶದ ದ್ವಾರದ ಬಳಿಯಲ್ಲಿ, ಅವರ ಹಿಂತಿರುಗುವಿಕೆಯನ್ನು ನಿರೀಕ್ಷಿಸುತ್ತ ಕಾಯುತ್ತಿದ್ದರು.
                ಆ ಮೂವತ್ತು ಭಿಕ್ಷುಗಳು ಭಗವಾನರಿಗೆ ವಂದಿಸಿ ಕುಶಲ ವಿಚಾರಿಸಿ ಕುಳಿತರು. ನಂತರ ಭಗವಾನರು ಅವರಿಗೆ ಧಮ್ಮಬೋಧನೆ ಮಾಡಿದರು. ಪರಿಣಾಮವಶಾತ್ ಅವರೆಲ್ಲಾ ಅರಹಂತರಾದರು. ನಂತರ ತಮ್ಮ ಇದ್ದಿಶಕ್ತಿ ಬಳಸಿಕೊಂಡು ಅವರೆಲ್ಲಾ ಗಾಳಿಯಲ್ಲಿ ತೇಲಾಡುತ್ತಾ, ಹಾರಾಡುತ್ತಾ ನಿರ್ಗಮಿಸಿದರು.
                ಬಹಳ ಹೊತ್ತಾದರೂ ಆ ಭಿಕ್ಷುಗಳು ಬಾರದೆ ಹೋದಾಗ ಪೂಜ್ಯ ಆನಂದರವರು ಭಗವಾನರಲ್ಲಿಗೆ ಬಂದು ಭಗವಾನ್, ಆ ಮೂವತ್ತು ಭಿಕ್ಷುಗಳೆಲ್ಲಿ? ಎಂದು ಕೇಳಿದರು.
                ಅವರೆಲ್ಲ ಹೋದರು.
                ಭಗವಾನ್ ಅವರು ಯಾವ ಮಾರ್ಗವಾಗಿ ಹೋದರು. ನಾನಂತು ಬಾಗಿಲ ಬಳಿಯಲ್ಲೇ ಇದ್ದೆನಲ್ಲ.
                ಆನಂದ ಅವರು ಗಾಳಿಯಲ್ಲಿ ತೇಲಿ, ನಂತರ ಆಕಾಶ ಮಾರ್ಗವಾಗಿ ಹಾರಿ ಹೊರಟುಹೋದರು.
                ಭಗವಾನ್, ಅವರು ಇಷ್ಟು ಕ್ಷಿಪ್ರವಾಗಿ ಅರಹಂತರಾದರೇ?
                ಹೌದು ಆನಂದ, ಅವರು ಧಮ್ಮನ್ನು ಆಲಿಸಿದ ನಂತರ ಇದ್ದಿಶಕ್ತಿಗಳ ಸಹಿತ ಅರಹತ್ವವನ್ನು ಪ್ರಾಪ್ತಿಮಾಡಿದರು.

                ಅದೇ ಕ್ಷಣದಲ್ಲಿ ಹಂಸಗಳ ಗುಂಪೊಂದು ಆಕಾಶದಲ್ಲಿ ಹಾರುತ್ತಿದ್ದವು. ಆಗ ಭಗವಾನರು ಆನಂದರಿಗೆ ಹೀಗೆ ಹೇಳಿದರು: ಆನಂದ, ಯಾರಲ್ಲಿ ನಾಲ್ಕು ಇದ್ದಿಪಾದಗಳಾದ ಇಚ್ಛಾಶಕ್ತಿ, ಪ್ರಯತ್ನಶೀಲತೆ, ಸಮಾಧಿ ಮತ್ತು ಮಿಮಾಂಸೆ ಗರಿಷ್ಠ ಪ್ರಮಾಣದಲ್ಲಿ ವೃದ್ಧಿಯಾಗಿವೆಯೋ ಅವರು ಈ ಹಂಸಗಳ ರೀತಿಯಲ್ಲೇ ಗಾಳಿಯಲ್ಲಿ ಹಾರಬಹುದು ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

dhammapada/lokavagga/13.7/weaversdaughter

ಕೆಲವರು ಮಾತ್ರ ಸ್ಪಷ್ಟವಾಗಿ ಸತ್ಯ ಗ್ರಹಿಸಬಲ್ಲರು
ಈ ಲೋಕವು ಅಂಧಮಯವಾಗಿದೆ, ಕೆಲವರು ಮಾತ್ರ ಸ್ಪಷ್ಟವಾಗಿ ಆಂತರ್ಯವನ್ನು ನೋಡಬಲ್ಲವರಾಗಿದ್ದಾರೆ. ಹೇಗೆ ಕೆಲವು ಪಕ್ಷಿಗಳು ಮಾತ್ರವೇ ಜಾಲದಿಂದ ಪಾರಾಗುವುದೋ ಹಾಗೆಯೇ ಕೆಲವರು ಮಾತ್ರವೇ ಸ್ವರ್ಗಕ್ಕೆ ಹೋಗುವರು.      (174)
ಗಾಥ ಪ್ರಸಂಗ 13:7
ನೇಕಾರ ಹುಡುಗಿಯ ಪ್ರಜ್ಞಾಶೀಲತೆ
                ಒಂದುದಿನ ಭಗವಾನರು ಆಳವಿ ಗ್ರಾಮಕ್ಕೆ ಹೋದರು. ಅಲ್ಲಿ ಭಗವಾನರು ಜೀವನದ ಅನಿತ್ಯತೆಯ ಬಗ್ಗೆ ಬೋಧನೆ ಮಾಡಿದರು. ಮಾರಣಾನುಸ್ಸತಿ ಧ್ಯಾನವನ್ನು ಮಾಡಿರಿ, ಹೀಗೆ ಜಾಗ್ರತೆಯಿಂದ ಚಿಂತನೆ ಮಾಡಿ, ಜೀವನ ಅನಿಶ್ಚಿತ, ಮರಣ ನಿಶ್ಚಿತ. ಖಂಡಿತವಾಗಿ ಒಂದಲ್ಲ ಒಂದುದಿನ ನಾನು ಮರಣವನ್ನು ಎದುರುಗೊಳ್ಳುವೆನು.
                ಭಗವಾನರು ಆಲಿಸುವವರನ್ನು ಸದಾ ಸ್ಮೃತಿವಂತರಾಗಲು ಮತ್ತು ಜೀವನದ ಯಥಾರೂಪವನ್ನು ಕಾಣಲು ಸತ್ಯಗ್ರಹಿಸಲು ಪ್ರೋತ್ಸಾಹಿಸುತ್ತಿದ್ದರು. ಅವರು ಹೀಗೆ ಹೇಳುತ್ತಿದ್ದರು ಹೇಗೆ ಒಬ್ಬನು ಶಸ್ತ್ರಾಸ್ತ್ರಗಳನ್ನು ಹಿಡಿದು ಶತೃವಿಗೆ ಎದುರುಗೊಳ್ಳಲು ಸಿದ್ಧನಾಗುವನೋ, ಅಥವಾ ದಂಡ ಶಸ್ತ್ರಗಳಿಂದ ಹಾವು ಅಥವಾ ಜಂತುಗಳನ್ನು ಎದುರುಗೊಳ್ಳಲು ಮುಂದಾಗುವನೋ ಹಾಗೆಯೇ ಒಬ್ಬನು ಸದಾ ಸ್ಮೃತಿವಂತನಾಗಿ ಮರಣವನ್ನು ಧೈರ್ಯದಿಂದ ಎದುರಿಸಬೇಕು. ಆಗ ಮಾತ್ರ ಆತನು ಸುಗತಿಗಾಗಿ ಈ ಜಗತ್ತನ್ನು ತೃಪ್ತಿಯಿಂದ ಬಿಡುತ್ತಾನೆ. ಬಹಳಷ್ಟು ಜನರು ಈ ಸುತ್ತವನ್ನು ಅಥವಾ ಸುತ್ತದ ಸಾರವನ್ನು ಗ್ರಹಿಸಲಿಲ್ಲ. ಆದರೆ ಹದಿನಾರರ ನೇಕಾರರ ಹುಡುಗಿ ಮಾತ್ರ ಬುದ್ಧರ ಈ ಸುತ್ತವನ್ನು ಸ್ಪಷ್ಟವಾಗಿ ಅಥರ್ೈಸಿಕೊಂಡಳು. ಈ ಸುತ್ತದ ನಂತರ ಭಗವಾನರು ಜೇತವನಕ್ಕೆ ಹಿಂತಿರುಗಿದರು.
                ಕೆಲದಿನಗಳ ನಂತರ ಭಗವಾನರು ಒಂದುದಿನ ಮುಂಜಾನೆ ಮಹಾಕರುಣಾ ಸಮಾಪತ್ತಿಯಲ್ಲಿ ಸಹಾಯ ಮಾಡಲು ಜಗತ್ತನ್ನು ಸಮೀಕ್ಷಿಸಿದರು. ಆಗ ಅವರಿಗೆ ನೇಕಾರರ ಹುಡುಗಿಯು ಗೋಚರಿಸಿದಳು. ಆಕೆಗೆ ಜ್ಞಾನೋದಯ ಪಡೆಯಲು, ಸೋತಪತ್ತಿ ಫಲ ಪಡೆಯಲು ಪಕ್ವಕಾಲ ಕೂಡಿಬಂದಿತ್ತು. ಹೀಗಾಗಿ ಭಗವಾನರು ಮತ್ತೊಮ್ಮೆ ಅಳವಿ ಗ್ರಾಮಕ್ಕೆ ಬಂದರು. ಆ ಹುಡುಗಿಗೂ ಭಗವಾನರು 500 ಶಿಷ್ಯರ ಸಮೇತ ಅಳವಿ ಗ್ರಾಮಕ್ಕೆ ಬರುತ್ತಿರುವುದು ತಿಳಿಯಿತು. ಆಕೆಗೆ ಆನಂದವಾಯಿತು, ಭಗವಾನರ ಧಮ್ಮಬೋಧನೆ ಆಲಿಸಲು ಸದಾವಕಾಶ ದೊರೆಯಿತಲ್ಲ ಎಂದು ಹಿಗ್ಗಿದಳು. ಆದರೆ ಅವಳ ತಂದೆಯು ಆಕೆಗೆ ದಾರಗಳ ಉರುಳೆ ಸುತ್ತುವಂತೆ ಆಜ್ಞಾಪಿಸಿದನು. ಏಕೆಂದರೆ ಅದು ಅತ್ಯಗತ್ಯವಾಗಿ ಆತನಿಗೆ ಬೇಕಾಗಿತ್ತು. ಹೀಗಾಗಿ ಆಕೆಯು ನಿಷ್ಠಾವಂತಳಾಗಿ ಮೊದಲು ದಾರಗಳನ್ನು ನೂಲಿ ತಂದೆಯ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದಳು. ಮಾರ್ಗ ಮಧ್ಯದಲ್ಲಿ ಭಗವಾನರ ಪ್ರವಚನ ನಡೆಯುತ್ತಿರುವುದು ಆಕೆಗೆ ಕಂಡುಬಂದಿತು. ಜನರು ಅಪಾರವಾಗಿ ತುಂಬಿದ್ದರು.
                ಭಗವಾನರಿಗೆ ಆಕೆಯು ಧಮ್ಮಪಾಲಿಸಲು ಬರುವುದು ತಿಳಿದಿದತ್ತು. ಅಷ್ಟೇ ಅಲ್ಲ, ಆಕೆಗೆ ಈಗ ಅದನ್ನು ಆಲಿಸುವುದು ಅತಿ ಅಗತ್ಯವಾಗಿತ್ತು. ಆಕೆಯ ಕರ್ಮಫಲದಂತೆ ಆಕೆಯು ಜೀವಿಸುವುದು ಕೆಲವು ಗಂಟೆಗಳ ಮಾತ್ರವಾಗಿತ್ತು. ಆದರೆ ಜನರ ಸಂಖ್ಯೆ ಅತ್ಯಧಿಕವಾಗಿತ್ತು. ಹೀಗಾಗಿ ಭಗವಾನರ ಸಂಕಲ್ಪದಿಂದಾಗಿ ಮತ್ತು ಭಗವಾನರು ಆಕೆಯನ್ನು ನೋಡಿದರು. ಆಗ ಆಕೆಯಲ್ಲಿ ಶ್ರದ್ಧೆ ಹೆಚ್ಚಾಗಿ ತನಗೆ ಅರಿವಿಲ್ಲದಂತೆಯೇ ನೂಲುಗಳ ಬುಟ್ಟಿಯನ್ನು ಬಿಟ್ಟು, ಭಗವಾನರ ಸಮೀಪ ಬಂದುಬಿಟ್ಟಳು. ಆಗ ಭಗವಾನರು ಆಕೆಗೆ ನಾಲ್ಕು ಪ್ರಶ್ನೆಗಳನ್ನು ಕೇಳಿದರು. ಆಕೆಯು ಅವೆಲ್ಲದಕ್ಕೂ ಉತ್ತರಿಸಿದಳು.
                ಭಗವಾನರು :      ನೀನು ಎಲ್ಲಿಂದ ಬಂದೆ ?
                ಹುಡುಗಿ :          ನನಗೆ ಗೊತ್ತಿಲ್ಲ.
                ಭಗವಾನರು :      ನೀನು ಎಲ್ಲಿಗೆ ಹೋಗುವೆ ?
                ಹುಡುಗಿ :          ನನಗೆ ಗೊತ್ತಿಲ್ಲ.
                ಭಗವಾನರು :      ನಿನಗೆ ಗೊತ್ತಿಲ್ಲವೇ ?
                ಹುಡುಗಿ :          ಹೌದು, ನನಗೆ ಗೊತ್ತಿದೆ.
                ಭಗವಾನರು :      ನಿನಗೆ ಗೊತ್ತಿದೆಯೇ ?
                ಹುಡುಗಿ : ನನಗೆ ಗೊತ್ತಿಲ್ಲ, ಭಗವಾನ್.
                ಆಕೆಯ ಉತ್ತರ ಆಲಿಸಿದ ಸಭಿಕರಿಗೆ ನೇಕಾರರ ಹುಡುಗಿ ಅಗೌರವಯುತವಾಗಿ ಉತ್ತರಿಸುತ್ತಿದ್ದಾಳೆ ಎಂದೆನಿಸಿತು. ಆಗ ಭಗವಾನರು ಅವರ ಅಜ್ಞಾನ ದೂರೀಕರಿಸಲು ಆ ಹುಡುಗಿಗೆ ಆ ಪ್ರಶ್ನೆಗಳ ಉತ್ತರವನ್ನು ಅರ್ಥಪೂರ್ಣವಾಗಿ ವಿವರಿಸುವಂತೆ ಹೇಳಿದಾಗ ಆಕೆಯು ಹೀಗೆ ವಿವರಿಸಿದಳು:
                ಭಗವಾನ್, ನಾನು ಮನೆಯಿಂದಲೇ ಬಂದಿರುವೆ ಎಂಬುದು ನಿಮಗೆ ಗೊತ್ತೇ ಇದೆ. ಆದ್ದರಿಂದಾಗಿ ನಿಮ್ಮ ಪ್ರಶ್ನೆಯ ಅರ್ಥ ನಾನು ಯಾವ ಜನ್ಮದಿಂದ ಇಲ್ಲಿಗೆ ಬಂದಿರುವೆ ಎಂದಾಗಿದೆ, ಆದ್ದರಿಂದಾಗಿ ನನಗೆ ಗೊತ್ತಿಲ್ಲವೆಂದು ಹೇಳಿದೆನು. ಅದೇರೀತಿ ನಿಮ್ಮ ಎರಡನೆಯ ಪ್ರಶ್ನೆ ನಾನು ಮುಂದೆ ಎಲ್ಲಿ ಜನ್ಮತಾಳುವೆ ಎಂದಾಗಿದೆ. ಆದ್ದರಿಂದಾಗಿ ನಾನು ಗೊತ್ತಿಲ್ಲವೆಂದೇ ಹೇಳಿದೆನು. ಹಾಗೆಯೇ ನಿಮ್ಮ ಮೂರನೆಯ ಪ್ರಶ್ನೆ ಒಂದುದಿನ ನಾನು ಸಾಯಲಿದ್ದೇನೆ ಎಂಬುದು ತಿಳಿದಿಲ್ಲವೇ ಎಂದಾಗಿದೆ. ಅದಕ್ಕಾಗಿ ನಾನು ಗೊತ್ತಿದೆ ಎಂದು ಹೇಳಿದೆನು. ಅದರಂತೆಯೇ ತಮ್ಮ ಕೊನೆಯ ಪ್ರಶ್ನೆ ನಾನು ಯಾವಾಗ ಮರಣಿಸುವೆ ಎಂದು ಗೊತ್ತಿದೆಯೇ? ಎಂದಾಗಿದೆ. ಅದಕ್ಕಾಗಿಯೇ ನನಗೆ ಗೊತ್ತಿಲ್ಲ ಎಂದು ತಿಳಿಸಿದೆನು.
                ಭಗವಾನರು ಆಕೆಯ ಪ್ರಜ್ಞಾಶೀಲತೆಯ ಬಗ್ಗೆ ಪ್ರಶಂಸಿಸಿದರು. ಜನರು ಅಭಿಮಾನದಿಂದ ಆನಂದಿಸಿದರು. ನಂತರ ಸುತ್ತವನ್ನು ಆಲಿಸಿ ಆಕೆಯು ಸೋತಪತ್ತಿ ಫಲವನ್ನು ಪಡೆದಳು.
                ನಂತರ ಆಕೆಯು ನೂಲಿನ ಬುಟ್ಟಿಯನ್ನು ತೆಗೆದುಕೊಂಡು ತಂದೆಯ ಬಳಿಗೆ ಬಂದಳು. ಆಕೆಯು ಅಲ್ಲಿಗೆ ಬಂದಾಗ ತಂದೆಯು ನೇಕಾರ ಮಾಡುವ ಸ್ಥಳದಲ್ಲೇ ನಿದ್ರೆ ಹೋಗಿದ್ದನು. ಆತನು ಶಬ್ದ ಆಲಿಸಿ ತಕ್ಷಣ ಗಾಬರಿಯಿಂದ ಎದ್ದನು. ತಕ್ಷಣ ಆಕಸ್ಮಿಕವಾಗಿ ಲಾಳಿಯನ್ನು ಎಳೆದುಬಿಟ್ಟಿದ್ದನು. ಆಗ ಶರವೇಗದಲ್ಲಿ ಆ ಲಾಳಿಯ ತುದಿಯು ಹುಡುಗಿಯ ಎದೆಗೆ ಚುಚ್ಚಿಕೊಂಡಿತು. ಆ ಕ್ಷಣದಲ್ಲೇ ಸಾವನ್ನಪ್ಪಿದಳು. ನಂತರ ಹಾಗೆಯೇ ತುಸಿತಾ ಲೋಕದಲ್ಲಿ ದೇವತೆಯಾಗಿ ಪುನರ್ಜನ್ಮತಾಳಿದಳು. ಆಕೆಯ ತಂದೆಯ ಶೋಕ ಹೇಳತೀರದು. ಅಪಾರ ದುಃಖದಿಂದ ಆಶ್ರು ಹರಿಸುತ್ತಾ, ಜೀವನದ ಅನಿಶ್ಚಿತತೆ ಅರ್ಥಮಾಡಿಕೊಳ್ಳಲಾರದೆ, ಬುದ್ಧರ ಬಳಿಗೆ ಬಂದು ಮುಂದೆ ಭಿಕ್ಷುವಾದನು. ನಂತರ ಆತನು ಅರಹಂತನಾದನು. ಹೀಗೆ ವಾತ್ಸಲ್ಯದಿಂದ ಶೋಕದ ಕಡೆಗೆ ನಂತರ ಜ್ಞಾನದ ಕಡೆಗೆ ಧಾವಿಸಿ ಅರಹಂತನಾದನು.

Tuesday 26 May 2015

dhammapada/lokavagga/13.6/angulimala

ಪುಣ್ಯದಿಂದ ಪಾಪ ಅಳಿಸಬಹುದು
ಯಾರು ತನ್ನ ಕುಶಲ ಕರ್ಮಗಳಿಂದ, ಪಾಪ ಕಮ್ಮಗಳೆಲ್ಲಾ ಮುಚ್ಚಿಬಿಡುವರೋ, ಅಂತಹವರು ಈ ಲೋಕವನ್ನು ಮೋಡಮುಕ್ತ ಚಂದಿರನಂತೆ ಬೆಳಗುವರು.         (173)
ಗಾಥ ಪ್ರಸಂಗ 13:6
ಅಂಗುಲಿಮಾಲನ ಚರಿತ್ರೆ





                ಕೋಸಲರಾಜನಾದ ಪಸೇನದಿಯ ಸಭೆಯಲ್ಲಿದ್ದ ಬ್ರಾಹ್ಮಣನ ಮಗನೇ ಅಂಗುಲಿಮಾಲ. ಆತನ ನಿಜವಾದ ಹೆಸರು ಅಹಿಂಸಕ, ಅಂದರೆ ಹಿಂಸೆಯನ್ನೇ ಮಾಡದಿರುವವನು. ಬಾಲಕನಾಗಿರುವಾಗಲೇ ಆತನಿಗೆ ತಕ್ಷಶಿಲೆಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿದರು. ಅಹಿಂಸಕನು ಅತ್ಯಂತ ಬುದ್ಧಿಶಾಲಿಯು, ವಿಧೇಯನು ಆಗಿದ್ದನು. ಹೀಗಾಗಿ ಆತನು ಗುರುವಿಗೆ ಮತ್ತು ಗುರುಪತ್ನಿಗೂ ಅಚ್ಚುಮೆಚ್ಚಿನವನಾಗಿದ್ದನು. ಈತನ ಪ್ರತಿಭೆಯಿಂದಾಗಿ ಮತ್ತು ಗುರುಗಳ ಮೆಚ್ಚುಗೆಗೆ ಪಾತ್ರನಾದನು. ಈತನನ್ನು ಕಂಡಾಗ ಆತನ ಸಹಪಾಠಿಗಳಿಗೆ ಅಸೂಯೆ ಮೂಡಿತು. ಇದಕ್ಕೆ ಕಡಿವಾಣಹಾಕಲು ಅವರು ಸಂಚೊಂದನ್ನು ರೂಪಿಸಿದರು. ಹೀಗಾಗಿ ಅವರು ಗುರುವಿನ ಬಳಿ ಹೋಗಿ ಅಹಿಂಸಕನು ಗುರುಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಆರೋಪ ಹೊರಿಸಿದರು. ಆದರೆ ಗುರುವು ನಂಬಲಿಲ್ಲ. ಆದರೆ ಅವರು ಅನೇಕಬಾರಿ ಸುಳ್ಳು ಆರೋಪ ಮಾಡುತ್ತಿದ್ದಾಗ ಆತನು ಅವರಿಬ್ಬರ ಪವಿತ್ರ ವಾತ್ಸಲ್ಯ ಬಾಂಧವ್ಯವನ್ನು ತಪ್ಪಾಗಿಯೇ ಭಾವಿಸಿದನು. ಹೀಗಾಗಿ ಗುರುವು ಆತನ ಮೇಲೆ ಸೇಡು ತೀರಿಸಲು ಬಯಸಿದನು. ಆತನನ್ನು ಕೊಂದರೆ ಅಥವಾ ಕೊಲ್ಲಿಸಿದರೆ ಪರಿಣಾಮ ತನಗೆ ಅಪಾಯವೆಂದು ಭಾವಿಸಿ, ಆತನು ಮತ್ತೊಂದು ಕುಟಿಲೋಪಾಯವನ್ನು ರೂಪಿಸಿದನು. ಆ ಉಪಾಯವು ಆತನನ್ನು ಕೊಲ್ಲಿಸುವುದಕ್ಕಿಂತ ಭೀಕರವಾಗಿತ್ತು. ಅದೇನೆಂದರೆ: ಆ ಗುರುವು ಅಹಿಂಸಕನಿಂದ ಗುರುದಕ್ಷಿಣೆಯ ಬೇಡಿಕೆಯಿಟ್ಟನು. ನಂತರವೇ ಶಿಕ್ಷಣದ ಕಲಿಕೆ ಎಂದುಬಿಟ್ಟನು. ಆ ಗುರುದಕ್ಷಿಣೆ ಏನೆಂದರೆ ಸಾವಿರ ಮಾನವರನ್ನು ಕೊಂದು ಅವರ ಬಲಗೈಯ ಹೆಬ್ಬೆರಳನ್ನು ತಂದು ಒಪ್ಪಿಸಬೇಕು.
                ಗತ್ಯಂತರವಿಲ್ಲದೆ ಆ ಅಮಾಯಕನು ಗುರುವಿಗೆ ವಿಧೇಯನಾಗಲು ಈ ದುಸ್ಸಾಹಸಕ್ಕೆ ಕೈಹಾಕಿದನು. ಆತನಿಗೆ ಪೂರ್ಣವಾಗಿ ಮನಸ್ಸಿಲ್ಲದಿದ್ದರೂ ಕರ್ತವ್ಯವೆಂಬಂತೆ ಈ ಘೋರ ಹತ್ಯೆಗಳಿಗೆ ಸಿದ್ಧನಾದನು. ಹೀಗಾಗಿ ಆತನು ಮಾನವರಿಗೆ ಕೊಲ್ಲಲು ಆರಂಭಿಸಿದನು. ಮೊದಲು ಆತನು ಕೊಂದು ಹೆಬ್ಬೆರಳನ್ನು ಕತ್ತರಿಸಿ ಮರಗಳಲ್ಲಿ ನೇತುಹಾಕುತ್ತಿದ್ದನು. ಆದರೆ ಅವನ್ನು ಪ್ರಾಣಿಗಳು ಮತ್ತು ಹದ್ದುಗಳು ತಿಂದುಹಾಕುತ್ತಿದ್ದುದರಿಂದ ಆತನು ಹೆಬ್ಬೆರುಗಳನ್ನು ಪೋಣಿಸಿ ಹಾರವನ್ನಾಗಿಸಿ ಕತ್ತಿನಲ್ಲಿ ಹಾಕಿಕೊಂಡನು. ಪ್ರತಿದಿನ ಎಣಿಸಿ, ಮತ್ತೆ ಕೊಂದು ಆ ಹೆಬ್ಬೆರಳುಗಳ ಮಾಲೆಗೆ ಸೇರಿಸಿ ಹಾಕಿಕೊಳ್ಳುತ್ತಿದ್ದನು. ಅಂಗುಲಿ ಎಂದರೆ ಹೆಬ್ಬೆರಳು, ಅವನ್ನು ಮಾಲೆಯಂತೆ ಧರಿಸಿರುತ್ತಿದ್ದರಿಂದಾಗಿ ಆತನಿಗೆ ಅಂಗುಲಿಮಾಲನೆಂದು ಕುಖ್ಯಾತಿ ಬಂತು. ಒಬ್ಬ ಮೂರ್ಖ ಗುರುವಿನಿಂದ ಹೇಗೆ ಶಿಷ್ಯ ಮತ್ತು ಸಮಾಜ ಹಾಳಾಗುತ್ತದೆ ಎಂಬುದಕ್ಕೆ ಇದು ಉತ್ತಮ ನಿದರ್ಶನವಾಗಿದೆ. ಆತನು ಜನರನ್ನು ಕೊಲ್ಲುತ್ತಿದ್ದಂತೆಯೇ ಆತನ ಬಗ್ಗೆ ಪ್ರಚಾರವು ಬಹುಬೇಗ ಹಬ್ಬಿತ್ತು. ಆತನ ಕುಖ್ಯಾತಿ ರಾಜ್ಯದ ಒಳಗೆ ಮತ್ತು ಹೊರಗೆ ಎಲ್ಲೆಡೆ ಪ್ರಸರಿಸಿತು. ರಾಜನವರೆಗೂ ಆತನ ಕ್ರೌರ್ಯ ಸುದ್ದಿ ತಲುಪಿ ಆತನನ್ನು ಹಿಡಿಯಲು ರಾಜನು ನಿರ್ಧರಿಸಿದನು. ಈ ಸುದ್ದಿಯು ರಾಜ್ಯದಲ್ಲಿ ಸಮಾಧಾನ ಮೂಡಿಸಿದಾಗ ಅಹಿಂಸಕನ ತಾಯಿಗೆ ಕಳವಳ ಮೂಡಿಸಿತು. ಆಕೆಯು ತನ್ನ ಮಗನನ್ನು ಉಳಿಸಲು ಕಾಡಿಗೆ ಪ್ರಯಾಣ ಬೆಳೆಸಿದಳು. ಆದರೆ ಆ ಸಮಯದಲ್ಲಿ ಅಂಗುಲಿಮಾಲನ ಬಳಿ 999 ಹೆಬ್ಬೆರಳುಗಳು ಸಂಗ್ರಹವಾಗಿತ್ತು. ಹೀಗಾಗಿ ಒಂದು ಬೆರಳು ಮಾತ್ರವೇ ಆತನಿಗೆ ಬೇಕಾಗಿತ್ತು. ಹೀಗಾಗಿ ಆತನು ಇಲ್ಲಿ ಸಾಗುವ ಯಾರನ್ನಾದರೂ ಹತ್ಯೆ ಮಾಡುವ ಇಚ್ಛೆಯನ್ನು ಮಾಡಿದನು.
*  *  *
                ಭಗವಾನರು ಮುಂಜಾನೆ ಮಹಾ ಕರುಣಾ ಸಮಾಪತ್ತಿಯಲ್ಲಿ ತೊಡಗಿರುವಾಗ ಯಾರಿಗೆ ಇಂದು ಸಹಾಯ ಮಾಡಲಿ ಎಂದು ಜೀವಿಗಳಲ್ಲಿ ಹುಡುಕಿದಾಗ ಅವರಿಗೆ ಅಂಗುಲಿಮಾಲಾನಿಗೆ ಇಂದು ಸಹಾಯ ಮಾಡದಿದ್ದರೆ ಆತನು ಮಾತೃ ಹಂತಕನಾಗಿ ಮುಂದಿನ ಭವದಲ್ಲಿ ಅವೀಚಿ ನರಕದಲ್ಲಿ ಹೋಗಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಅರಿತರು. ಹೀಗಾಗಿ ಭಗವಾನರು ಅಂಗುಲಿಮಾಲನ ಉದ್ಧಾರಕ್ಕಾಗಿ ಕಾಡಿಗೆ ಅಂದು ಪ್ರವೇಶಿಸಿದರು. ಜನರ ಬುದ್ಧಿವಾದದ ನಂತರವೂ ಕಾಡನ್ನು ಪ್ರವೇಶಿಸಿದರು.

*  *  *
ಅಂಗುಲಿ ಮಾಲನು ಅನೇಕ ನಿದ್ರಾರಹಿತ ರಾತ್ರಿಗಳನ್ನು ಕಳೆದಿದ್ದನು. ಅತಿ ನಿತ್ರಾಣನಾಗಿದ್ದನು. ಆತನಿಗೆ ಈ ಬಗೆಯ ಜೀವನ ಸಾಕಾಗಿತ್ತು. ಬಹುಬೇಗ ಆತನು ಸಹಸ್ರ ಹೆಬ್ಬೆರಳನ್ನು ಸಂಗ್ರಹಿಸಿಕೊಂಡು ಗುರುವಿಗೆ ನೀಡಿ ಈ ಜೀವನದಿಂದ ಮುಕ್ತನಾಗಬೇಕೆಂದು ಆಕಾಂಕ್ಷಿಸಿದ್ದನು. ಆತನಿಗೆ ಕೇವಲ ಒಂದೇ ಒಂದು ಜೀವ ಬೇಕಿತ್ತು. ಆಗ ಆತನಿಗೆ ಈ ನಿಧರ್ಾರ ಉಂಟಾಗಿತ್ತು. ಏನೆಂದರೆ ಮೊದಲು ಕಾಣಿಸುವ ಯಾವುದೇ ವ್ಯಕ್ತಿಯನ್ನು ಸಂಹರಿಸುವುದು. ಆತನಿಗಾಗಿ ತಾಯಿಯು ಹುಡುಕುತ್ತಾ ಬರುತ್ತಿದ್ದಳು. ಹಾಗೊಂದು ವೇಳೆ ಆಕೆ ಮೊದಲು ಗೋಚರಿಸಿದ್ದರೆ ಆಕೆಯನ್ನು ಸಂಹರಿಸಲು ಸಿದ್ಧನಾಗುತ್ತಿದ್ದನು. ಆಗ ಆತನಿಗೆ ಬುದ್ಧ ಭಗವಾನರು ಗೋಚರಿಸಿದರು. ಆಗ ಆತನು ಅವರನ್ನು ಕೊಲ್ಲಲು ಖಡ್ಗವನ್ನು ಹಿಡಿದು ಓಡುತ್ತ ಬೆನ್ನಟ್ಟಿದನು.
                ಆದರೆ ಅಲ್ಲಿ ಅದ್ಭುತವೊಂದು ನಡೆಯಿತು. ಅಂಗುಲಿಮಾಲನು ಅದೆಷ್ಟೇ ವೇಗವಾಗಿ ಓಡಿದರೂ ಸಹಾ ಕೇವಲ ಸಹಜವಾಗಿ ನಡೆಯುತ್ತಿದ್ದ ಭಗವಾನರನ್ನು ಆತನು ಹಿಡಿಯಲಾರದೆ ಹೋದನು. ಅಂಗುಲಿಮಾಲನಿಗೆ ಆಶ್ಚರ್ಯವಾಯಿತು. ಏಕೆಂದರೆ ಆತನು ಓಡುತ್ತಿರುವ ಆನೆ, ಕುದುರೆ, ಹರಿಣಗಳನ್ನು ಹಿಡಿದು ನಿಲ್ಲಿಸುತ್ತಿದ್ದನು. ಆದರೆ ಈಗೇಕೆ ಹಿಡಿಯಲು ಸಾಧ್ಯವಾಗುತ್ತಿಲ್ಲ! ಆಗ ಆತನು ಓಡುವುದನ್ನು ನಿಲ್ಲಿಸಿ ಭಗವಾನರಿಗೆ ಹೀಗೆ ಕೂಗಿ ಹೇಳಿದನು: ನಿಲ್ಲು, ನಿಲ್ಲು ಸಮಣ. ನಾನು ನಿಂತೇ ಇದ್ದೇನೆ, ಅಂಗುಲಿಮಾಲ, ನೀನೇ ನಿಲ್ಲು ಎಂದರು ಭಗವಾನರು.
                ನಡೆಯುತ್ತಿರುವ ನೀನು ನಿಂತಿರುವುದೇ ಹೇಗೆ? ನಿಂತಿರುವ ನಾನು ಎಲ್ಲಿ ನಡೆಯುತ್ತಿದ್ದೇನೆ?
                ಆಗ ಭಗವಾನರು ಹೀಗೆ ಉತ್ತರಿಸಿದರು: ನಾನು ನಿಂತೇ ಇದ್ದೇನೆ ಅಂಗುಲಿಮಾಲ. ಏಕೆಂದರೆ ನಾನು ಜೀವಹತ್ಯೆಗಳನ್ನು ನಿಲ್ಲಿಸಿದ್ದೇನೆ, ಸ್ವಲ್ಪವೂ ಹಿಂಸೆಯನ್ನು ಮಾಡುತ್ತಿಲ್ಲ. ನಿನ್ನನ್ನು ನಾನು ಮೈತ್ರಿಯಿಂದ, ಸಹನೆಯಿಂದ, ಕ್ಷಮೆಯಿಂದ, ಪ್ರಜ್ಞಾದಿಂದ ಸುಸ್ಥಾಪಿಸಿಕೊಂಡಿದ್ದೇನೆ. ಆದರೆ ನೀನು ಜೀವಹತ್ಯೆಯಿಂದಾಗಲಿ ಅಥವಾ ಹಿಂಸಿಸುವುದರಿಂದಾಗಿ ನಿಂತಿಲ್ಲ. ಇನ್ನೂ ನಿನ್ನಲ್ಲಿ ಮೈತ್ರಿ, ಸಹನೆ, ಸ್ಥಾಪಿತವಾಗಿಲ್ಲ. ಆದ್ದರಿಂದಾಗಿ ನೀನು ಇನ್ನೂ ನಿಂತಿಲ್ಲ.
ಅವರ ಮಾತುಗಳ ಸತ್ಯತೆಯನ್ನು ಅಂಗುಲಿಮಾಲ ಗ್ರಹಿಸಿ ಚಿಂತಿಸಿ ಕ್ಷಿಪ್ರವಾಗಿ ಅವುಗಳ ಮೌಲ್ಯ ಅರಿತನು. ನಂತರ ಹೀಗೆ ಚಿಂತಿಸಿದನು: ಖಂಡಿತ ವಾಗಿ ನುಡಿಗಳು ಪ್ರಜ್ಞಾವಂತರದ್ದೇ ಆಗಿದೆ. ಈ ಸಮಣರು ಅತ್ಯಂತ ಮೇಧಾವಿಯಾಗಿದ್ದಾರೆ. ಅಷ್ಟೇ ಅಲ್ಲ, ಅತ್ಯಂತ ಧೈರ್ಯಶಾಲಿಗಳು ಸಹಾ ಆಗಿದ್ದಾರೆ. ಖಂಡಿತವಾಗಿ ಇವರು ಭಿಕ್ಷುಗಳ ನಾಯಕರೇ ಇರಬಹುದು. ಖಂಡಿತವಾಗಿ ಇವರು ಬುದ್ಧ ಭಗವಾನರೇ ಆಗಿರುತ್ತಾರೆ. ಓಹ್, ಇವರು ನನ್ನಲ್ಲಿ ಬೆಳಕನ್ನು ಉಂಟುಮಾಡಲು ಬಂದಿದ್ದಾರೆ.
ತಕ್ಷಣ ಆತನಲ್ಲಿ ಅರಿವು ಮೂಡಿ ತನ್ನ ಶಸ್ತ್ರಗಳೆಲ್ಲಾ ಕಣಿವೆಗೆ ಎಸೆದುಬಿಟ್ಟನು. ಹಾಗು ಭಗವಾನರಲ್ಲಿ ಪಬ್ಬಜ್ಜ ನೀಡುವಂತೆ ಕೇಳಿಕೊಂಡನು. ಬಾ ಭಿಕ್ಷು ಎಂದು ಭಗವಾನರು ಆತನನ್ನು ಆಗಲೇ ಸಂಘಕ್ಕೆ ಸೇರಿಸಿಕೊಂಡರು. ಏಕೆಂದರೆ ಭಗವಾನರಿಗೆ ಆತನ ಮನಸ್ಸು ಪೂರ್ಣವಾಗಿ ಹಿಂಸೆಯಿಂದ ಕರುಣೆಯೆಡೆಗೆ ಧಮ್ಮದೆಡೆಗೆ ವಾಲಿರುವುದು ಸ್ಪಷ್ಟವಾಗಿ ತಿಳಿದಿತ್ತು. ಆತನು ಮುಂದೆ ಎಂತಹ ಸ್ಥಿತಿಯಲ್ಲೂ ದಾರಿ ತಪ್ಪಲಾರ ಎನ್ನುವುದು ತಿಳಿದಿತ್ತು.
*  *  *
ಅಂಗುಲಿಮಾಲನ ತಾಯಿಯು ತನ್ನ ಮಗನನ್ನು ಹುಡುಕುತ್ತ ಕಾಡಿನಲ್ಲೆಲ್ಲಾ ಸುತ್ತಾಡಿದಳು, ಕಿರುಚಿದಳು, ಅಲೆದಾಡಿದಳು. ಕೊನೆಗೂ ಆತನ ಸಿಗಲಿಲ್ಲ. ನಿರಾಸೆಯಿಂದ ಆಕೆಯು ಮನೆಗೆ ಹಿಂತಿರುಗಿದಳು.
*  *  *
                ಇತ್ತ ರಾಜನು ಅಂಗುಲಿಮಾಲನನ್ನು ಹಿಡಿಯಲು ಸೈನ್ಯವನ್ನೇ ಸಿದ್ಧಪಡಿಸಿಕೊಂಡು ಹೊರಟನು. ಏಕೆಂದರೆ ಅಂಗುಲಿಮಾಲನಿಗೆ 40 ಜನರು ಒಗ್ಗೂಡಿ ಬಂದರೂ ಅವರು ಸೋತಿರುವುದು ಈಗಾಗಲೇ ಗಮನಕ್ಕೆ ಬಂದಿತ್ತು. ಆದರೆ ದಾರಿಯಲ್ಲಿ ಜೇತವನದ ವಿಹಾರ ಕಂಡಿದ್ದರಿಂದಾಗಿ ರಾಜನು ಅಲ್ಲಿ ರಥವನ್ನು ನಿಲ್ಲಿಸಿ, ಭಗವಾನರಿದ್ದಲ್ಲಿಗೆ ಬಂದು ವಂದಿಸಿ, ಒಂದೆಡೆ ಕುಳಿತನು. ಆಗ ಭಗವಾನರು ರಾಜ ಪಸೇನದಿಗೆ ಏನು ವಿಷಯ ಮಹಾರಾಜ, ಬಿಂಬಿಸಾರನಾಗಲಿ, ಲಿಚ್ಛವಿಗಳಾಗಲಿ ಅಥವಾ ಇನ್ಯಾರಾದರೂ ನಿನ್ನ ಮೇಲೆ ದಂಡೆತ್ತಿ ಬರುತ್ತಿದ್ದಾರೆಯೇ? ಎಂದು ಪ್ರಶ್ನಿಸಿದಾಗ ಆತನು ಅವೆಲ್ಲಾ ಕಾರಣ ನಿರಾಕರಿಸಿ ಅಂಗುಲಿಮಾಲಾನ ಧ್ವಂಸಕ್ಕೆ ಬಂದಿರುವುದಾಗಿ ಹೇಳಿದನು. ಆಗ ಭಗವಾನರು ಆತನಿಗೆ ಹೀಗೆ ಕೇಳಿದರು: ಮಹಾರಾಜ, ಒಂದುವೇಳೆ ಅಂಗುಲಿಮಾಲಾನು ಪಬ್ಬಜಿತನಾಗಿ, ಶೀಲವಂತನಾಗಿದ್ದರೆ ನೀನು ಯಾವರೀತಿ ಉಪಚರಿಸುವೇ? ಎಂದರು.
                ಭಂತೆ, ಹಾಗೇನಾದರೂ ಆಗಿದ್ದರೆ ವಂದಿಸುತ್ತೇನೆ, ಪರಿಕರ ನೀಡಿ ಸಲಹುತ್ತೇನೆ, ಪೋಷಿಸುತ್ತೇನೆ. ಆದರೆ ಅಂತಹ ದುಶ್ಶೀಲನು, ಕ್ರೂರಿಯು, ಶೀಲಸಂಯಮ ದಯಾವಂತನು ಹೇಗೆತಾನೆ ಆಗುತ್ತಾನೆ?
                ಆಗ ಭಗವಾನರು ಹತ್ತಿರದಲ್ಲಿ ಕುಳಿತಿದ್ದ ಅಂಗುಲಿಮಾಲಾನನ್ನು ತೋರಿಸುತ್ತ ಮಹಾರಾಜ, ಈತನೇ ಅಂಗುಲಿಮಾಲಾ.
                ರಾಜನು ಭೀತನಾದನು, ಆಶ್ಚರ್ಯಗೊಂಡನು. ನಂತರ ಭಗವಾನರಿಂದ ಸಾಂತ್ವನ ಪಡೆದು ಅಂಗುಲಿಮಾಲಾನ ತಂದೆ-ತಾಯಿ ಗೋತ್ರವೆಲ್ಲಾ ವಿಚಾರಿಸಿದನು. ಆತನಿಗೆ ಪರಿಕರಗಳನ್ನು ನೀಡಲು ಹೋದನು. ನಂತರ ಭಗವಾನರಿಗೆ ಅನುಮೋದನೆ ಮಾಡಿ ಹಿಂತಿರುಗಿದನು.
                ನಂತರ ಅಂಗುಲಿಮಾಲನು ಧ್ಯಾನಾಭ್ಯಾಸದಲ್ಲಿ ತೊಡಗಿದನು. ಮನಸ್ಸನ್ನು ಪಳಗಿಸಲು ಸರ್ವಶಕ್ತಿಯನ್ನು ಬಳಸಿದನು. ಆದರೂ ಆತನಿಗೆ ಚಿತ್ತಶಾಂತಿ ದೊರೆಯಲಿಲ್ಲ. ಏಕೆಂದರೆ ಆತನಲ್ಲಿ ಪಶ್ಚಾತ್ತಾಪವು ಧ್ಯಾನ ಗಳಿಸಲು ಅಡ್ಡಿಯಾಗುತ್ತಿತ್ತು. ಆತನು ಮಾಡಿದ ಜೀವಹತ್ಯೆಗಳು ಆತನಲ್ಲಿ ಚಿಂತೆ ಪಶ್ಚಾತ್ತಾಪವನ್ನುಂಟು ಮಾಡುತ್ತಿದ್ದವು. ಆ ಪಶ್ಚಾತ್ತಾಪ ಕೊನೆಗೊಳ್ಳುವ ದಿನವು ಹತ್ತಿರಕ್ಕೆ ಬಂದಿತ್ತು. ಒಮ್ಮೆ ದಾರಿಯಲ್ಲಿ ಸ್ತ್ರೀಯೊಬ್ಬಳು ಪ್ರಸವ ವೇದನೆ ಅನುಭವಿಸುತ್ತಿದ್ದಳು. ಮಗುವನ್ನು ಹೆರಲಾರದೆ ಅತ್ಯಂತ ನೋವು ಪಡುತ್ತಿದ್ದಳು. ಇದನ್ನು ಕಂಡಂತಹ ಅಂಗುಲಿಮಾಲನು ಭಗವಾನರಿಗೆ ಈ ವಿಷಯ ತಿಳಿಸಿದನು. ಆಗ ಭಗವಾನರು ಸತ್ಯವಚನವೊಂದನ್ನು ನೀಡಿ ಅದನ್ನು ಆ ಗಭರ್ಿಣಿಯ ಎದುರು ನುಡಿದು ಈ ಸತ್ಯಕ್ರಿಯೆ ಮಾಡುವಂತೆ ಹೇಳಿದರು.
                ಅದರಂತೆಯೇ ಅಂಗುಲಿಮಾಲ ಭಯಪಡುತ್ತಲೇ ಹೀಗೆ ಸತ್ಯವಚನ ನುಡಿದನು:
                ಯತೋ ಹಂ ಭಗಿನಿ ಅರಿಯಾಯ
                ಜಾತಿಯಾ ಜಾತೊ ನಾ ಅಭಿಜಿನಾಮಿ
                ಸಚ್ಚಿಚ್ಚ ಪಾಣಂ ಜೀವಿತಾ ವೋರೋಪೆತಾ
                ತೇನ ಸಚ್ಚೆನಾ ನೊತ್ಥಿ ಹೋತು
                ಸೋತ್ಥ ಗಬ್ಭಸ್ಸಾತಿ
                (ಸೋದರಿ ನಾನು ಆರ್ಯರ ಜಾತಿಯಲ್ಲಿ ಹುಟ್ಟಿದಾಗಿನಿಂದ (ಸಂಘಕ್ಕೆ ಸೇರಿದಾಗಿನಿಂದ) ನಾನು ಇಚ್ಛಾಪೂರ್ವಕವಾಗಿ ಯಾವುದೇ ಜೀವಿಯನ್ನು ಹತ್ಯೆಮಾಡಿಲ್ಲ. ಈ ಸತ್ಯವಚನದಿಂದಾಗಿ ನೀನು ಸ್ವಸ್ಥಳಾಗು (ಆರೋಗ್ಯ) ಮತ್ತು ಹಾಗೆಯೇ ನಿನಗೆ ಹುಟ್ಟುವ ಮಗು ಸಹಾ ಸ್ವಸ್ಥವಾಗಿರಲಿ (ಆರೋಗ್ಯದಿಂದಿರಲಿ).
                ತಕ್ಷಣ ಆ ಸ್ತ್ರೀಯು ಆ ಮಗುವಿಗೆ ಸುಖಪೂರ್ವಕ ಪ್ರಸವದಿಂದಾಗಿ ಜನ್ಮ ನೀಡಿದಳು. (ಅಂದಿನಿಂದ ಇಂದಿನವರೆಗೂ ಶ್ರದ್ಧಾಳು ಜನರು ಈ ಅಂಗುಲಿಮಾಲ ಪರಿತ್ತವನ್ನು ಗಭರ್ಿಣಿಯರಿಗೆ ಹೇಳಿ ಲಾಭ ಪಡೆಯುತ್ತಿದ್ದಾರೆ)
                ಈ ಘಟನೆಯಿಂದಾಗಿ ಅಂಗುಲಿಮಾಲನಿಗೆ ತಾನು ಪೂರ್ಣ ಅರಿವಿನಿಂದ, ಪೂರ್ಣ ಇಚ್ಛೆಯಿಂದ, ಆನಂದದಿಂದ ಆ ಪಾಪಗಳೆಲ್ಲಾ ಮಾಡಿಲ್ಲ. ಅಜ್ಞಾನವಶಾತ್ ಹೀಗೆ ಮಾಡಿದ್ದೇ ಅಷ್ಟೇ ಎಂಬ ಭಾವದಿಂದಾಗಿ ಆತನು ಪಶ್ಚಾತ್ತಾಪ ಮೀರಿ ಸಮಾಧಿಗಳನ್ನು ಪಡೆದನು. ನಂತರ ವಿಪಶ್ಶನ ಸಾಧಿಸಿ ಅರಹಂತನಾದನು.
                ಆದರೆ ಆತನು ಭಿಕ್ಷೆಗಾಗಿ ಶ್ರಾವಸ್ತಿ ನಗರಕ್ಕೆ ಹೋಗುವಾಗ, ಜನರು ಈತನೆ ನಮ್ಮ ಬಾಂಧವರ ಕೊಂದ ಅಂಗುಲಿಮಾಲನೆಂದು ಗುರುತಿಸಿ, ಹೆಂಟೆಗಳಿಂದ, ಕಲ್ಲುಗಳಿಂದ, ಶರೀರದಲ್ಲೆಲ್ಲಾ ರಕ್ತ ಬರುವಂತೆ ಹಿಂಸಿಸಿದರು. ಇಂತಹ ಗಾಯಯುತ ಸ್ಥಿತಿಯಲ್ಲಿ ಭಗವಾನರನ್ನು ಆತನು ಭೇಟಿ ಮಾಡಿದನು. ಆಗ ಭಗವಾನರು ಆತನಿಗೆ ಹೀಗೆ ಹೇಳಿದರು. ಸಹಿಸಿಕೋ, ಬ್ರಾಹ್ಮಣ ಸಹಿಸಿಕೋ, ಈ ಜನ್ಮದ ಕರ್ಮಫಲವನ್ನು ಇಲ್ಲಿಯೇ ಈಗಲೇ ಅನುಭವಿಸುತ್ತಿರುವೆ. ಆದರೆ ಮುಂದೆ ಸಿಗಬಹುದಾದ ಭೀಕರ ಕಮ್ಮಫಲದಿಂದ ನೀನು ತಪ್ಪಿಸಿಕೊಂಡಿರುವೆ. ನೀನು ಅರಹಂತನಾಗಿರುವುದರಿಂದಾಗಿ, ಮುಂದೆ ಪರಿನಿಬ್ಬಾಣ ಪಡೆಯುವುದರಿಂದಾಗಿ ಅವ್ಯಾವುವು ನಿನಗೆ ಸಿಗಲಾರವು. ಅವಕ್ಕೆಲ್ಲಾ ಹೋಲಿಸಿದರೆ ಇದು ಅತಿ ಅಲ್ಪ ಸಹಿಸಿಕೋ.
                ನಂತರ ಅಂಗುಲಿಮಾಲನು ಸಹಿಸಿಕೊಂಡನು. ಶರೀರವನ್ನು ಸಹಾ ಶಾಂತಗೊಳಿಸಿ ಸಮಾಧಿ ಏರಿದನು. ನಂತರ ನಿರೋಧ ಸಮಾಪತ್ತಿ ಸುಖ ಅನುಭವಿಸಿದನು. ನಂತರ ಉದಾನ (ಆನಂದದ ಉದ್ಗಾರ)ದಲ್ಲಿ ಹಲವು ಗಾಥೆ ನುಡಿದು, ನಂತರ ಪರಿನಿಬ್ಬಾಣ ಪಡೆದನು.

                ಈತನ ಬಗ್ಗೆ ಅರಿಯದ ಭಿಕ್ಷುಗಳು, ಭಗವಾನರಲ್ಲಿ ಅಂಗುಲಿಮಾಲನ ಜನ್ಮ ಎಲ್ಲಿ ಆಗಿದೆ ಎಂದು ಪ್ರಶ್ನಿಸಿದರು. ಆಗ ಭಗವಾನರು ನನ್ನ ಪುತ್ರ ಅಂಗುಲಿಮಾಲ ಪರಿನಿಬ್ಬಾಣ ಸಾಧಿಸಿದ್ದಾನೆ ಎಂದರು. ಇದನ್ನು ಕೇಳಿದ ಭಿಕ್ಷುಗಳು ಇಂತಹ ಪೂರ್ವ ಚರಿತ್ರೆ ಇದ್ದೂ ಸಹ ಪರಿನಿಬ್ಬಾಣ ಸಾಧ್ಯವೇ? ಎಂದು ಪ್ರಶ್ನಿಸಿದಾಗ ಭಗವಾನರು ಭಿಕ್ಷುಗಳೇ ಹಿಂದೆ ಅಂಗುಲಿಮಾಲನಿಗೆ ಕಲ್ಯಾಣಮಿತ್ರರು ಇರಲಿಲ್ಲ, ನಂತರ ಆತನಿಗೆ ಸನ್ಮಿತ್ರರು ಸಿಕ್ಕಿ ಅವರ ಬುದ್ಧಿವಾದದಿಂದಾಗಿ ಸ್ಮೃತಿವಂತನಾಗಿ, ಧಮ್ಮಪಾಲನೆ ಮಾಡಿ, ಧ್ಯಾನದಲ್ಲಿ ಪರಿಶ್ರಮಪಟ್ಟು ಅರಹಂತನಾಗಿದ್ದಾನೆ ಎಂದು ಹೇಳಿ ಈ ಮೇಲಿನ ಗಾಥೆ ಹೇಳಿದರು.

dhammapada/lokavagga/13.5/sammujjhani

ಜಾಗರೂಕನು ಜಗತ್ತನ್ನೆಲ್ಲಾ ಬೆಳಗಿಸುವನು
ಯಾರು ಹಿಂದೆ ಅಜಾಗರೂಕನಾಗಿದ್ದು, ಆದರೆ ನಂತರ ಜಾಗರೂಕತೆ ಯಿಂದಿರುವನೋ, ಅಂತಹವ ಈ ಲೋಕವನ್ನೇ ಮೋಡ ಮುಕ್ತ ಚಂದಿರನಂತೆ ಪ್ರಭಾತಗೊಳಿಸುತ್ತಾನೆ.        (172)
ಗಾಥ ಪ್ರಸಂಗ 13:5
ಪೊರಕೆ ಬಿಟ್ಟು ತನ್ನ ಚಿತ್ತವನ್ನೇ ಶುಚಿಗೊಳಿಸಿದ ಭಿಕ್ಷು

                ಪೂಜ್ಯ ಸಮ್ಮುಜ್ಜನಿಯು ತನ್ನ ಬಹಳಷ್ಟು ಕಾಲವನ್ನು ಕೇವಲ ವಿಹಾರ ಗುಡಿಸುವುದರಲ್ಲೇ, ಸ್ವಚ್ಛಗೊಳಿಸುವುದರಲ್ಲೇ ಕಾಲಕಳೆಯುತ್ತಿದ್ದನು. ಒಮ್ಮೆ ಪೂಜ್ಯ ರೇವತರವರು ಅಲ್ಲಿ ತಂಗಿದ್ದರು. ಆದರೆ ರೇವತರವರು ಬಹಳಷ್ಟು ಸಮಯವನ್ನು ಧ್ಯಾನದಲ್ಲೇ ಕಳೆಯುತ್ತಿದ್ದರು. ರೇವತರನ್ನು ಗಮನಿಸಿದ ಸಮ್ಮುಜ್ಜನಿಯು ಈತ ಸಮಯ ವ್ಯರ್ಥಗೊಳಿಸುತ್ತಿದ್ದೇನಲ್ಲ ಎಂದೆನಿಸಿತು. ಪ್ರತಿದಿನ ಹೀಗೆ ನಡೆಯುವುದನ್ನು ಗಮನಿಸಿದ ಸಮ್ಮುಜ್ಜನಿಯು ಈತ ಸಮಯ ವ್ಯರ್ಥಗೊಳಿಸುತ್ತಿದ್ದಾನಲ್ಲ ಎಂದೆನಿಸಿತು. ಪ್ರತಿದಿನ ಹೀಗೆ ನಡೆಯುವುದನ್ನು ಗಮನಿಸಿದ ಸಮ್ಮುಜ್ಜನಿಯು ಒಂದುದಿನ ತಡೆಯಲಾರದೆ ರೇವತರನ್ನು ಹೀಗೆ ಪ್ರಶ್ನಿಸಿಯೇಬಿಟ್ಟನು. ನೀವು ತುಂಬಾ ಸೋಮಾರಿ ಆಗಿದ್ದೀರಿ ಅನಿಸುತ್ತದೆ, ಜನರು ಶ್ರದ್ಧೆಯಿಂದ ಮತ್ತು ದಾನದಿಂದ ನೀಡುವ ಆಹಾರದಿಂದಿರುವ ನೀವು ಕೆಲವೊಮ್ಮೆಯಾದರೂ ನೆಲ ಗುಡಿಸಬಾರದೆ ಅಥವಾ ವಿಹಾರ ಗುಡಿಸಬಾರದೆ?
                ಆತನಿಗೆ ಪೂಜ್ಯ ರೇವತರು ಹೀಗೆ ಉತ್ತರಿಸಿದರು: ಓ ಮಿತ್ರನೇ, ಭಿಕ್ಷುವೊಬ್ಬನು ಸದಾಕಾಲ ಗುಡಿಸುವುದರಲ್ಲೇ ಇರಬಾರದು, ಆತನು ಬೆಳಿಗ್ಗೆ ಗುಡಿಸಬೇಕಷ್ಟೇ, ಮಧ್ಯಾಹ್ನ ಆಹಾರ ಸೇವಿಸಿ, ನಂತರ ಧ್ಯಾನ ಮಾಡಬೇಕು. ಸ್ಕಂಧಗಳ ಸ್ವರೂಪ ಅರಿಯಬೇಕು. ನಂತರ ರಾತ್ರಿಯಲ್ಲಿ ಧಮ್ಮದ ಸ್ಮರಣೆ ಮಾಡಿ ಪರರಿಗೆ ಹೇಳುವಂತೆ ನೆನಪಿನಲ್ಲಿ ಪ್ರತಿಷ್ಠಾಪಿಸಬೇಕು. ಆಗ ಅರಿವು ಪಡೆದ ಸಮ್ಮುಜ್ಜನಿಯು ಗಂಭೀರವಾಗಿ ಅದರಂತೆಯೇ ನಡೆದುಕೊಂಡನು. ಹಾಗೆಯೇ ಅರಹಂತನು ಆದನು.
                ಒಮ್ಮೆ ವಿಹಾರದಲ್ಲಿ ಮಧ್ಯಾಹ್ನ ಅಲ್ಲಲ್ಲಿ ಕಸ ಬಿದ್ದಿರುವುದು ಕಂಡ ಭಿಕ್ಷುಗಳು ಸಮ್ಮುಜ್ಜನಿಗೆ ಹೀಗೆ ಕೇಳಿದರು: ಓಹ್, ಸಮ್ಮುಜ್ಜನಿಯವರೇ, ನೀವು ಹಿಂದಿನಂತೆ ಏತಕ್ಕೆ ಗುಡಿಸುತ್ತಿಲ್ಲ?
                ಆಗ ಅದಕ್ಕೆ ಪೂಜ್ಯ ಸಮ್ಮುಜ್ಜನಿ ಹೀಗೆ ಉತ್ತರಿಸಿದರು: ಹಿಂದೆ ನಾನು ಜಾಗರೂಕನಾಗಿರಲಿಲ್ಲ, ಅದಕ್ಕಾಗಿ ಕಸ ಗುಡಿಸುತ್ತಿದ್ದೆನು, ಆಗ ನನ್ನಲ್ಲಿ ಕಸ ಗುಡಿಸಲೆಂದೇ ಬಹಳ ಸಮಯವಿರುತ್ತಿತ್ತು. ಆದರೆ ಈಗ ಜಾಗರೂಕನಾಗಿದ್ದೇನೆ, ನಾನೀಗ ಚಿತ್ತದ ಕಶ್ಮಲಗಳೆಲ್ಲಾ ಗುಡಿಸಿಹಾಕಿದ್ದೇನೆ. ಈಗ ನೀನು ಎಂದಿಗೂ ಜಾಗರೂಕತೆಯಿಂದಲೇ ಇರುತ್ತೇನೆ, ಅಜಾಗರೂಕನಾಗಲು ಸಾಧ್ಯವೇ ಇಲ್ಲ.

                ಇದನ್ನು ಆಲಿಸಿದ ಭಿಕ್ಷುಗಳು ದಿಗ್ಭ್ರಮೆಗೊಂಡರು. ಅವರು ಸಂಶಯಗ್ರಸ್ತರಾಗಿ ಭಗವಾನರಲ್ಲಿ ಹೋಗಿ ಸಮ್ಮುಜ್ಜನಿಯು ಹೇಳುತ್ತಿರುವುದು ನಿಜವೇ ಅಥವಾ ಸುಳ್ಳೇ ಎಂದು ಕೇಳಿದರು. ಆಗ ಭಗವಾನರು ಹೀಗೆ ಉತ್ತರಿಸಿದರು: ಸಮ್ಮುಜ್ಜನಿಯು ನಿಜಕ್ಕೂ ಅರಹಂತನಾಗಿದ್ದಾನೆ, ಆತನು ನಿಜವನ್ನೇ ಹೇಳುತ್ತಿದ್ದಾನೆ ಎಂದು ಹೇಳಿ ಮೇಲಿನ ಗಾಥೆಯನ್ನು ನುಡಿದರು.