Wednesday 31 December 2014

dhammapada/appamadavagga/2.4/the festival of fools

ಎಚ್ಚರವುಳ್ಳವರಾಗಿ, ಎಚ್ಚರಹೀನರಾಗಬೇಡಿ
ಮೂರ್ಖರು ಮತ್ತು ದುಮರ್ೆಧಾವಿಗಳು ಎಚ್ಚರಹೀನತೆಯಲ್ಲಿ ಆನಂದಿಸುತ್ತಾರೆ. ಆದರೆ ಮೇಧಾವಿಗಳು ಎಚ್ಚರಿಕೆಯನ್ನು ಶ್ರೇಷ್ಠ ಧನದಂತೆ (ಅಮೂಲ್ಯ ಐಶ್ವರದಂತೆ) ರಕ್ಷಿಸುತ್ತಾರೆ.    (26)
ಆದ್ದರಿಂದ ಎಚ್ಚರಿಕೆ ಹೀನತೆಯಲ್ಲಿ ತೊಡಗಬೇಡ, ಇಂದ್ರೀಯ ಕಾಮಗಳಲ್ಲಿ ಅನುರಕ್ತನಾಗಬೇಡ, ಸದಾ ಎಚ್ಚರವುಳ್ಳವನು, ಧ್ಯಾನಿಯು ವಿಪುಲವಾದ ಸುಖವನ್ನು ಪಡೆಯುತ್ತಾನೆ.    (27)
ಗಾಥ ಪ್ರಸಂಗ 2:4
ಮೂರ್ಖರ ನಕ್ಷತ್ರ ಹಬ್ಬ

                ಶ್ರಾವಸ್ತಿಯಲ್ಲಿ ನಕ್ಷತ್ರ ಹಬ್ಬ ಎಂದು ಆಚರಿಸುತ್ತಿದರು. ಆದರೆ ಆ ಹಬ್ಬದ ಆಚರಣೆಯು ಅತ್ಯಂತ ತುಚ್ಛವಾಗಿತ್ತು. ಆ ಸಮಯದಲ್ಲಿ ಜನರು ತಮ್ಮ ತಮ್ಮಲ್ಲೇ ಬೂಸಾ, ಸಗಣಿ, ಎರಚುತ್ತ, ಬೈದಾಡುತ್ತ ಜನರಿಗೆ ತೊಂದರೆ ನೀಡುತ್ತಾ ನಗರದಲ್ಲಿ ಸುತ್ತಾಡುತ್ತಿದ್ದರು. ಈ ಹಬ್ಬವು ಏಳು ದಿನಗಳ ಕಾಲ ನಡೆಯುತ್ತಿತ್ತು. ಈ ರೀತಿ ತೊಂದರೆ ನೀಡಬಾರದು ಎಂದು ಬಯಸಿದರೆ ಆ ಗಲಭೆಕೋರರಿಗೆ ಸ್ವಲ್ಪ ಹಣ ನೀಡಬೇಕಿತ್ತು.

                ಆ ಸಮಯದಲ್ಲಿ ಬುದ್ಧ ಉಪಾಸಕರು ಶ್ರಾವಸ್ತಿಯಲ್ಲಿ ಹೇರಳವಾಗಿದ್ದರು. ಅವರು ಬುದ್ಧರ ಬಳಿಗೆ ಬಂದು ಏಳು ದಿನಗಳ ಕಾಲ ವಿಹಾರದಲ್ಲೇ ಉಳಿಯುವಂತೆ ಹೇಳಿ, ಆ ದಿನಗಳಲ್ಲಿ ಅವರು ಬುದ್ಧರಿಗೆ ಮತ್ತು ಸಂಘಕ್ಕೆ ಆಹಾರವನ್ನು ವಿಹಾರದಲ್ಲೇ ತಂದು ನೀಡಿದರು. ನಂತರ ಎಂಟನೇ ದಿನದಂದು ಬುದ್ಧರು ಮತ್ತು ಭಿಕ್ಷುಗಳಿಗೆ ನಗರಕ್ಕೆ ಆಹ್ವಾನಿಸಿ ಬೋಧನೆ ನೀಡುವಂತೆ ಕೇಳಿಕೊಂಡರು. ನಂತರ ಆ ಸಮಯದಲ್ಲಿ ಈ ಮೂರ್ಖರ ಆಚರಣೆ ಬಗ್ಗೆ ಪ್ರಸ್ತಾಪ ಬಂದಾಗ ಭಗವಾನರು ಈ ಮೇಲಿನ ಗಾಥೆಯನ್ನು ಹೇಳಿದರು. ಇದನ್ನು ಕೇಳಿ ಉಪಾಸಕರಿಗೆ ಧಮ್ಮದ ಮೇಲೆ ಶ್ರದ್ಧೆಯುಕ್ಕಿತು. 

dhammapada/appamadavagga/2.3/cullapanthaka's mind power

ಪ್ರಯತ್ನದಿಂದಲೇ ಪರಮಾರ್ಥ
ತನ್ನ ಪ್ರಯತ್ನದಿಂದ, ಎಚ್ಚರಿಕೆಯಿಂದ ಸಂಯಮದಿಂದ ಮತ್ತು ಧರ್ಮದಿಂದಾಗಿ ಮೇಧಾವಿಯು ಪ್ರವಾಹವು ಪೀಡಿಸದಂತಹ ದ್ವೀಪವನ್ನಾಗಿ ಮಾಡಿಕೊಳ್ಳಲಿ.     (25)
ಗಾಥ ಪ್ರಸಂಗ 2:3
ಚುಲ್ಲಪಂಥಕನ ಚಮತ್ಕಾರ

                ಇಬ್ಬರು ಸೋದರರು ಭಿಕ್ಷುಗಳಾಗಿದ್ದರು. ಹಿರಿಯವ ಅರಹಂತ ನಾಗಿದ್ದನು. ಕಿರಿಯವ ಇನ್ನೂ ಸಾಮಣೇರನಾಗಿದ್ದನು. ಕಿರಿಯ ಚುಲ್ಲಪಂಥಕನು 4 ತಿಂಗಳು ಆದರೂ ಇನ್ನೂ 1 ಗಾಥೆಯನ್ನು ಸಹಾ ಕಲಿಯಲಾಗಲಿಲ್ಲ. ಎಷ್ಟೇ ಕಂಠಪಾಠ ಮಾಡಿದರೂ ಅದನ್ನು ಮರೆಯುತ್ತಿದ್ದನು. ಅದಕ್ಕೆ ಹಿರಿಯನಾದ ಮಹಾಪಂಥಕ ಕಿರಿಯನಿಗೆ ನೀನು ಗೃಹಸ್ಥನಾಗಲು ಅರ್ಹ ಹೊರತು ಧ್ಯಾನಿಯಾಗಲು ಅಲ್ಲವೇ ಅಲ್ಲ, ನೀನು ಹೊರಟು ಹೋಗು ಎಂದು ಹೇಳಿದನು.
                ಆತನು ಗ್ರಹಸ್ಥನಾಗಲು ಮನಸ್ಸಿಲ್ಲದೆಯೇ ಬೇರೇನೂ ತೋಚದೆ ಹೊರಡಲು ಸಿದ್ಧನಾದನು. ದ್ವಾರದಲ್ಲಿ ಬುದ್ಧ ಭಗವಾನರು ಕಾಣಿಸಿಕೊಂಡರು. ವಿಷಯ ತಿಳಿದು ನಾನು ಹೇಳಿದಂತೆ ಮಾಡು ಬಾ ಚುಲ್ಲಪಂಥಕ ಎಂದು ಹೇಳಿ ಗಂಧಕುಟಿಯ ಬಾಗಿಲಲ್ಲಿ ಪೂವರ್ಾಭಿಮುಖವಾಗಿ ಧ್ಯಾನಕ್ಕೆ ಕುಳ್ಳಿರಿಸಿದರು. ಆತನ ಕೈಗೆ ಪರಿಶುದ್ಧವಾದ ಬಿಳಿಯ ಕರವಸ್ತ್ರ ಸೃಷ್ಟಿಸಿ ನೀಡಿದರು. ಚುಲ್ಲಪಂಥಕ ಈ ಬಿಳಿಯ ವಸ್ತ್ರಕ್ಕೆ ಕೈಯಿಂದ ಉಜ್ಜುತ್ತಾ ರಜೋಹರಣಂ ಎಂದು ಜಪಿಸುತ್ತಾ ಕುಳಿತಿರು ಎಂದರು. (ರಜೋಹರಣಂ ಎಂದರೆ ಕೊಳೆಯ ನಿಮರ್ೂಲನೆ). ಆತ ಹಾಗೆಯೇ ಮಾಡುತ್ತಾ ಆತನ ಬಿಳಿ ವಸ್ತ್ರ ಕಪ್ಪಗೆ ತಿರುಗಿತ್ತು. ಆತ ಆಗಲೇ ಸಮಾಧಿ ಸಿದ್ಧಿಸಿದ್ದನು. ನಂತರ ಆತನು ಬಿಳಿವಸ್ತ್ರ ಕಪ್ಪಗೆ ಆಗಿರುವುದನ್ನು ಕಂಡು ಈ ರೀತಿ ಚಿಂತಿಸಿದನು.
                ಈ ವಸ್ತ್ರವು ಶುಚಿಯಾಗಿಯೇ ಇತ್ತು. ಆದರೆ ಈ ಅಸ್ತಿತ್ವದಿಂದಾಗಿ ಕಪ್ಪಾಯಿತು. ಈ ಕಾರಣದಿಂದಾಗಿ ಇದು ಕೊಳೆಯಾಯಿತು ಆತ ಹಾಗೆಯೇ ಪಂಚಖಂಧಗಳ (ದೇಹ ಮನಸ್ಸಿನ) ಬಗ್ಗೆ ಅರಿವನ್ನು ಆಳವಾಗಿ ಪಡೆಯಲು ಪ್ರಾರಂಭಿಸಿದನು. ನಂತರ ಹಾಗೆಯೇ ಅರಹಂತರ ಮಾರ್ಗದಲ್ಲಿ ತಲ್ಲೀನನಾದನು.
                ಆಗ ಭಗವಾನರು ಈ ಗಾಥೆಗಳನ್ನು ಈ ಅರ್ಥದಲ್ಲಿ ಹೇಳಿದರು.
                ಈ ಕೊಳೆಯು ಜರವಲ್ಲ, ನಿಜವಾದ ಕೊಳೆ ಲೋಭವಾಗಿದೆ/ದ್ವೇಷವಾಗಿದೆ/ಮೋಹ ಆಗಿದೆ. ಈ ಮೂರು ಅಕುಶಲಗಳಿಗೆ ಕೊಳೆಯೆಂದು ಕರೆಯುತ್ತಾರೆ ಹೊರತು ಬಟ್ಟೆಯ ಕೊಳೆಯನ್ನಲ್ಲ. ಯಾವ ಜ್ಞಾನಿಯು ಈ 3 ಅಕುಶಲವಾದ ಲೋಭ, ದ್ವೇಷ ಮತ್ತು ಮೋಹಗಳನ್ನು ವಜರ್ಿಸುವರೋ ಅವರು ವಿಗತರಜಸ್ಸ (ರಾಗದ್ವೇಷರಹಿತ ಮೋಹರಹಿತರು)ರ ಶಾಸನದಲ್ಲಿ ವಿಹರಿಸುವರು.
                ತಕ್ಷಣ ಪೂಜ್ಯ ಚೂಲಪಂಥಕ ನವಲೋಕೋತ್ತರ ಸ್ಥಿತಿ ಪ್ರಾಪ್ತಿ ಮಾಡಿದರು. ಹಾಗೆಯೇ 4 ಪಟಿಸಂಬಿದ ಜ್ಞಾನಸಹಿತ ಪ್ರಾಪ್ತಿ ಮಾಡಿದರು. ಜೊತೆಗೆ ಅಭಿಜ್ಞಾಗಳನ್ನು ಪ್ರಾಪ್ತಿ ಮಾಡಿದನು.
                ನಂತರ ಭಗವಾನರು ಜೀವಕನ ಮನೆಗೆ ಭಿಕ್ಷು ಸಂಘಸಹಿತ ಹೋದರು. ಆಗ ಜಿವಕನು ಬುದ್ಧರಿಗೆ ದಕ್ಷಿಣೋದಕ ತಂದರು. ಆಗ ಭಗವಾನರು ಜೀವಕ ವಿಹಾರದಲ್ಲಿ ಇನ್ನೂ ಭಿಕ್ಷುಗಳಿದ್ದಾರೆ ಎಂದರು. ಜೀವಕನ ಸೇವಕನು ಅಮ್ರವನಕ್ಕೆ ಬಂದನು ಅದೇವೇಳೆಯಲ್ಲಿ ಈ ಇಡೀ ಸನ್ನಿವೇಶ ಚುಲ್ಲಪಂಥಕನಿಗೆ ದಿವ್ಯದೃಷ್ಟಿಯಲ್ಲಿ ಅರಿವಾಯಿತು. ಆತ ತನ್ನ ಇದ್ಧಿಶಕ್ತಿಯಿಂದ ಸಹಸ್ರಾರು ತನ್ನಂತೆ ಶರೀರಗಳನ್ನು ಸೃಷ್ಟಿಸಿದನು. ಹಾಗು ಪ್ರತಿ ಚುಲ್ಲಪಂಥಕ ವಿಭಿನ್ನ ಕೆಲಸ ಮಾಡುತ್ತಿದ್ದರು. ಸೇವಕನು ಬಂದು ಚುಲ್ಲಪಂಥಕನಿಗೆ ಶಾಸ್ತರು ಕರೆಯುತ್ತಿದ್ದಾರೆ ಎಂದನು. ಆಗ ಸಹಸ್ರ ಮಂದಿಯು ನಾನು ಚುಲ್ಲಪಂಥಕ ಎಂದರು. ಆಗ ಸೇವಕ ಹಿಂತಿರುಗಿ ಭಂತೆ ಎಲ್ಲರೂ ಚುಲ್ಲಪಂಥಕರೇ. ಆಗ ಭಗವಾನರು ಸೇವಕನಿಗೆ ಮೊದಲು ಯಾರು ಚುಲ್ಲಪಂಥಕ ಎನ್ನುವರೋ ಅವರ ಕೈಯನ್ನು ಹಿಡಿದುಕೋ. ಉಳಿದವರು ಮಾಯಾ ಆಗುತ್ತಾರೆ. ನಂತರ ಹಾಗೇ ಆಯಿತು. ನಂತರ ಚುಲ್ಲಪಂಥಕ ಭಿಕ್ಷೆ ಸ್ವೀಕರಿಸಿದರು. ಇಲ್ಲಿಯೂ ಒಂದೇ ದಿನದಲ್ಲಿ ಇಷ್ಟೊಂದು ಬದಲಾವಣೆ ಮಾಡಿಸಿದರು.

                ಆ ಸಂದರ್ಭದಲ್ಲಿ ಭಗವಾನರು ಈ ಗಾಥೆಯನ್ನು ನುಡಿದರು. 

Tuesday 23 December 2014

dhammapada/appamadavagga/2.2/kumbhagosara

ಯತ್ನಶಾಲಿಯು ಉನ್ನತವಾಗಿ ಯಶಸ್ವಿಯಾಗುತ್ತಾನೆ
ಪ್ರಯತ್ನಶೀಲನ, ಸ್ಮೃತಿವಂತನ, ಶುಚಿಕರ್ಮನ, ಸಂಯಮಶೀಲನ, ವಿಚಾರವಂತನ ಮತ್ತು ಧಮ್ಮಜೀವಿಯ ಯಶಸ್ಸು ಸದಾ ಬೆಳೆಯುತ್ತಿರುತ್ತದೆ.            (24)
ಗಾಥ ಪ್ರಸಂಗ 2:2
ಶ್ರೀಮಂತನ ಧ್ವನಿಯ ವಿಶಿಷ್ಟತೆ (ಕುಂಭಗೋಸರ)

                ಒಮ್ಮೆ ರಾಜಗೃಹದಲ್ಲಿ ಪ್ಲೇಗ್ ರೋಗವು ಭೀಕರವಾಗಿ ತಾಂಡವವಾಡಿತು. ಆಗ ನಗರದ ಲೇವಾದೇವಿಯವ, ಆತನ ಹೆಂಡತಿ ಮತ್ತು ಇತರರು ಆ ಭೀಕರ ರೋಗಕ್ಕೆ ಸಿಲುಕಿದರು. ಆಗ ಅವರು ರೋಗ ಬಾಧಿಸದಿದ್ದ ಕಿರಿಯ ಮಗನಾದ ಕುಂಭಗೋಸಕನನ್ನು ಕರೆದು ಮಗು ಪ್ಲೇಗ್ ರೋಗವು ಪೂರ್ಣವಾಗಿ ಇನ್ನಿಲ್ಲವಾದಾಗ ಪುನಃ ಈ ನಗರಕ್ಕೆ ಬಾ, ಇಲ್ಲಿದ್ದರೆ ನೀನು ಸಹಾ ಸಾಯುವೆ ಎಂದು ತಮ್ಮ ಐಶ್ವರ್ಯವನ್ನು ಬಚ್ಚಿಟ್ಟ ಸ್ಥಳ ಆತನಿಗೆ ತೋರಿಸಿದರು. ಆತ ಅದರಂತೆಯೇ ನಡೆದುಕೊಂಡನು. ಕೊನೆಗೆ ಬಹಳ ವರ್ಷಗಳ ಕಾಲದನಂತರ ಆತನು ನಗರಕ್ಕೆ ಹಿಂತಿರುಗಿದನು.
                ಆದರೆ ಆತನನ್ನು ಯಾರೂ ಗುರುತಿಸಲಿಲ್ಲ. ನಂತರ ಆತನು ತಂದೆ-ತಾಯಿಗಳು ಐಶ್ವರ್ಯವನ್ನು ಬಚ್ಚಿಟ್ಟ ಸ್ಥಳವನ್ನು ನೋಡಿದನು, ಅದು ಸುರಕ್ಷಿತವಾಗಿತ್ತು. ಆದರೆ ಆತನು ಅದನ್ನು ತೆಗೆಯುವ ಪ್ರಯತ್ನ ಮಾಡಲಿಲ್ಲ. ಏಕೆಂದರೆ ಆತನು ಅದನ್ನು ತೆಗೆದರೆ ಜನರು ಆತನ ಬಗ್ಗೆ ಮಿಥ್ಯ ಮಾರ್ಗದಿಂದ ಹಣ ಸಂಪಾದಿಸಿದನೆಂದು ಅವರು ಪಾಲು ಕೇಳುವ ಸಾಧ್ಯತೆಯಿತ್ತು. ಅಥವಾ ರಾಜನಿಗೆ ಹೇಳುವ ಸಾಧ್ಯತೆಯು ಇತ್ತು. ಆಗ ಈತನ ಪೂರ್ವಪರ ತಿಳಿಯದೆ ರಾಜನು ಆಸ್ತಿ ವಶಪಡಿಸಿಕೊಳ್ಳವ ಸಾಧ್ಯತೆಯಿತ್ತು. ಆದ್ದರಿಂದ ಆತನು ನಿಧಿಯನ್ನು ತೆರೆಯದೆ, ತನ್ನನ್ನು ಪೋಷಿಸಿಕೊಳ್ಳಲು ಮಾರ್ಗ ಹುಡುಕಿದನು. ಆಗ ಆತನು ಜನರಿಗೆ ಎಬ್ಬಿಸುವ ಕೆಲಸದಲ್ಲಿ ಸೇರಿಕೊಂಡನು. ಆತ ಪ್ರತಿನಿತ್ಯ ಜನರಿಗೆ ಏಳಿ ಇದು ಎದ್ದೇಳುವ ಸಮಯ ಅಥವಾ ಆಹಾರವನ್ನು ಸಿದ್ಧಪಡಿಸುವ ಸಮಯ ಅಥವಾ ಬಂಡಿಗಳನ್ನು ಏರುವ ಸಮಯ ಎಂದು ಜಾಗೃತಿಪಡಿಸುತ್ತಿದ್ದನು. ಆತನದು ನಗರದಲ್ಲಿ ಕೂಗುವ ಕೆಲಸವಾಗಿತ್ತು. ಏಕೆಂದರೆ ಆ ಕಾಲದಲ್ಲಿ ಅಲಾರಾಂ ಗಡಿಯಾರಗಳು ಇರಲಿಲ್ಲ.
                ಒಂದುದಿನ ರಾಜ ಬಿಂಬಸಾರನು ಆತನನ್ನು ನೋಡಿದನು, ರಾಜನಿಗೆ ಧ್ವನಿ ಕೇಳಿಯೇ ವ್ಯಕ್ತಿಗಳನ್ನು ಅಳೆಯುವಷ್ಟು ಸಾಮಥ್ಯವಿತ್ತು. ಕುಂಭಗೋಸಕನ ಧ್ವನಿ ಕೇಳಿ ಬಿಂಬಸಾರನಿಗೆ ಇದು ಐಶ್ವರ್ಯಶಾಲಿಯ ಧ್ವನಿ ಎಂದು ತನಗೆ ತಾನೇ ಹೇಳಿಕೊಂಡನು. ಅದನ್ನು ಕೇಳಿದ ರಾಜ ದಾಸಿಯೊಬ್ಬಳು ಆತನನ್ನು ಶೋಧಿಸಲು ಒಬ್ಬನನ್ನು ಕಳುಹಿಸಿದಳು. ಆದರೆ ಆತನು ಕೇವಲ ಕೂಗುವವ ಎಂದು ಗೊತ್ತಾಯಿತು. ಆದರೆ ಅದನ್ನು ರಾಜನಿಗೆ ತಿಳಿಸಿದಾಗಲು ರಾಜನು ದೃಢವಾಗಿ ಅದು ಖಂಡಿತವಾಗಿ ಐಶ್ವರ್ಯವಂತನ ಧ್ವನಿಯೇ ಎಂದು ಹೇಳಿದನು. ಮತ್ತೆ ಪರಿಶೋಧನೆ ನಡೆಸಿಯೂ ಆತನು ಶ್ರೀಮಂತನಲ್ಲವೆಂದು ತಿಳಿಸಲಾಯಿತು. ಆಗ ರಾಜದಾಸಿಯು ಸ್ವತಃ ತಾನೇ ಕಂಡುಹಿಡಿಯುವೆ ಎಂದು ತಿಳಿಸಿ ತನ್ನ ಮಗಳೊಂದಿಗೆ ಅಲ್ಲಿಗೆ ಬಂದಳು. ನಾವು ಯಾತ್ರಿಕರು ನಮಗೆ ಇರಲು ಸ್ಥಳನೀಡಿ ಎಂದು ಕೇಳಿಕೊಂಡು ಅಲ್ಲಿ ವಾಸ ಮಾಡಿದಳು. ಆ ಸಂದರ್ಭದಲ್ಲಿ ರಾಜನು ಒಂದು ಆಜ್ಞೆಯನ್ನು ಹೊರಡಿಸಿದನು. ಏನೆಂದರೆ ಒಂದು ಸಮಾರಂಭದ ವಿಶೇಷತೆಗಾಗಿ ಪ್ರತಿ ಕಾಮರ್ಿಕನು ತನ್ನ ಕಾಣಿಕೆಯನ್ನು ರಾಜ್ಯಕ್ಕೆ ನೀಡುವುದು. ಆದರೆ ಕುಂಭಗೋಸಕನ ಬಳಿ ಆ ಸಮಯದಲ್ಲಿ ಯಾವುದೇ ಹಣವಿರಲಿಲ್ಲ. ಆದ್ದರಿಂದಾಗಿ ಆತನು ಅಡಗಿಸಿಟ್ಟ ಸ್ಥಳದಿಂದ ಒಂದೆರಡು ಚಿನ್ನದ ನಾಣ್ಯಗಳನ್ನು ತೆಗೆಯಬೇಕಾಯಿತು ಮತ್ತು ಅದನ್ನು ನೀಡುವಂತೆ ಆತನು ದಾಸಿಗೆ ನೀಡಿದ್ದರಿಂದ ಆಕೆಯು ಅದನ್ನು ರಾಜನಿಗೆ ಒಪ್ಪಿಸಿದಳು. ಆಗ ರಾಜನು ವಿಚಾರಣೆಗಾಗಿ ಆತನನ್ನು ಕರೆಸಿದನು ಮತ್ತು ರಾಜನು ಆತನಿಗೆ ನೀನು ನಿರಪರಾಧಿಯಾಗಿದ್ದರೆ ನಿನಗೆ ಯಾವ ಹಾನಿಯೂ ಇಲ್ಲ ಸತ್ಯವನ್ನು ಹೇಳು ಎಂದು ನುಡಿದಾಗ ಆ ಯುವಕನು ತನ್ನ ತಂದೆಯು ಇದೇ ನಗರದ ಲೇವಾದೇವಿಯವ ಎಂದು ಹೇಳಿ ತನ್ನ ವೃತ್ತಾಂತವನ್ನೆಲ್ಲಾ ತಿಳಿಸಿದನು. ಅದನ್ನು ಕೇಳಿದ ಬಿಂಬಸಾರನು ಆತನಿಗೆ ನಗರದ ಲೇವಾದೇವಿಯ ಸ್ಥಾನವನ್ನು ನೀಡಿ ತನ್ನ ಮಗಳನ್ನು ನೀಡಿ ವಿವಾಹ ಮಾಡಿಸಿದನು

                ನಂತರ ಬಿಂಬಸಾರನು ತನ್ನ ಅಳಿಯನೊಂದಿಗೆ ಬುದ್ಧರನ್ನು ಕಾಣಲು ಹೊರಟನು. ಅಲ್ಲಿ ಭಗವಾನರಿಗೆ ವಿಷಯವೆಲ್ಲ ತಿಳಿಸಿದನು. ಆಗ ಭಗವಾನರು ಮೇಲಿನ ಗಾಥೆಯನ್ನು ಹೇಳಿದರು. 

dhammapada/appamadavagga/2.1/saamaavathi's metta power

ಅಪ್ಪಮಾದ ವಗ್ಗ

ಜಾಗರೂಕರು ಸಾಯುವುದಿಲ್ಲ, ಎಚ್ಚರಹೀನ ಸತ್ತಂತೆ
ಎಚ್ಚರಿಕೆಯಿಂದಿರುವಿಕೆ ಅಮರತ್ವದ ಪಥ, ಎಚ್ಚರಿಕೆಯಿಲ್ಲದಿರುವಿಕೆ ಮೃತ್ಯುವಿನ ಪಥ, ಎಚ್ಚರಿಕೆ ಇರುವವ ಸಾಯುವುದಿಲ್ಲ, ಎಚ್ಚರಿಕೆ ಇಲ್ಲದವರು ಮೃತ್ಯು ಹೊಂದಿದಂತೆ ಇರುತ್ತಾರೆ.     (21)
ಈ ವಿಶೇಷತೆ ಅರಿತ ಪಂಡಿತರು (ಜ್ಞಾನಿಗಳು) ಎಚ್ಚರಿಕೆಯಲ್ಲೇ ಆನಂದಿಸುತ್ತಾರೆ ಮತ್ತು ಆರ್ಯರ (ಅರಹಂತರ) ಕ್ಷೇತ್ರದಲ್ಲೇ ರತರಾಗುತ್ತಾರೆ.    (22)
ಸದಾ ಧ್ಯಾನಶೀಲರಾಗಿ ಸತತ ಪ್ರಯತ್ನಶೀಲರಾದ ಧೀರರು ಮಾತ್ರ ನಿಬ್ಬಾಣದಂತಹ, ಬಂಧವಿಮುಕ್ತ ಅನುತ್ತರವಾದ ಕ್ಷೇಮವನ್ನು ಅನುಭವಿಸುತ್ತಾರೆ.            (23)
ಗಾಥ ಪ್ರಸಂಗ 2:1
ಸಾಮಾವತಿಯ ಮೈತ್ರಿಯ ಶಕ್ತಿ
                ರಾಣಿ ಸಾಮಾವತಿಗೆ ಅನೇಕ ಸೇವಕಿಯರಿದ್ದರು. ಅವರಲ್ಲಿ ಖುಜ್ಜುತ್ತರಾಳ ಕಾರ್ಯವೇನೆಂದರೆ ಸುಮನ ಹೂಗಾರನಿಂದ ಹೂಗಳನ್ನು ಪ್ರತಿದಿನ ಕೊಂಡುತರುವುದು. ಒಂದುದಿನ ಖುಜ್ಜುತ್ತರಳು ಸುಮನನ ಮನೆಯಲ್ಲಿ ಬುದ್ಧೋಪದೇಶ ಕೇಳಿದಳು, ಆಕೆಯ ಹಿಂದಿನ ಜನ್ಮದ ಪುಣ್ಯದ ಫಲದಿಂದಾಗಿ ಆಕೆಯು ಸೋತಪತ್ತಿ ಫಲವನ್ನು ಪಡೆದಳು. ಆಕೆಯು ಅರಮನೆಗೆ ಹಿಂತಿರುಗಿದ ನಂತರ ಸಾಮಾವತಿ ಮತ್ತು ಆಕೆಯ ಸಖಿಯರಿಗೆ ಉಪದೇಶ ನೀಡಿದಳು. ಆಗ ಅದರ ಪರಿಣಾಮವಾಗಿ ಅವರು ಸಹಾ ಧಮ್ಮವನ್ನು ಅರಿತರು. ಆ ದಿನದಿಂದ ಆಕೆಗೆ ಬೇರ್ಯಾವ ದೊಡ್ಡ ಕಾರ್ಯ ನೀಡುತ್ತಿರಲಿಲ್ಲ. ಆಕೆಯನ್ನು ಸಾಮಾವತಿಯು ತಾಯಿಯಂತೆ ಮತ್ತು ಗುರುವಿನಂತೆ ಕಾಣುತ್ತಿದ್ದಳು. ಖುಜ್ಜುತ್ತರಳು ಅತ್ಯಂತ ಪ್ರಜ್ಞಾವಂತಳಾಗಿದ್ದಳು. ಆಕೆ ತಾನು ಕೇಳಿದ ಪ್ರತಿ ಬುದ್ಧವಚನವನ್ನು ಸಾಮಾವತಿ ಮತ್ತು ಆಕೆಯ ಸಖಿಯರಿಗೆ ತಿಳಿಸುತ್ತಿದ್ದಳು. ಸ್ವಲ್ಪ ಕಾಲದಲ್ಲೇ ಆಕೆಯು ಧಮ್ಮ ಪ್ರವೀಣೆಯಾದಳು.
                ಇದರಿಂದಾಗಿ ಸಾಮಾವತಿಗೆ ಮತ್ತು ಆಕೆಯ ಸಖಿಯರಿಗೆ ಬುದ್ಧರ ಮೇಲೆ ಭಕ್ತಿ-ಶ್ರದ್ಧೆಗಳು ಹೆಚ್ಚಾದವು. ಅವರು ಬುದ್ಧರಿಗೆ ಪೂಜಿಸಲು, ದಶರ್ಿಸಲು ಇಚ್ಛಿಸಿದರು. ಆದರೆ ರಾಜನು ನಿರಾಕರಿಸಬಹುದು ಎಂದು ಭಯವಿತ್ತು. ಆದ್ದರಿಂದಾಗಿ ಅವರು ಅರಮನೆಯ ಗೋಡೆಗಳ ರಂಧ್ರಗಳ ಮೂಲಕ ಬುದ್ಧರನ್ನು ನೋಡುತ್ತಿದ್ದರು. ಅಲ್ಲಿಂದಲೇ ಗೌರವಪೂರ್ವಕ ವಂದನೆಗಳನ್ನು ಸಲ್ಲಿಸುತ್ತಿದ್ದರು.
                ಅದೇ ಸಮಯದಲ್ಲಿ ರಾಜನು ಇನ್ನೊಂದು ಸ್ತ್ರೀಗೆ ವಿವಾಹವಾಗಿ ಆಕೆಯನ್ನು ತನ್ನ ರಾಣಿಯನ್ನಾಗಿಸಿದ್ದನು. ಆಕೆಯೇ ಮಾಗಂಡಿಯ, ಮಾಗಂಡಿಯಳು ಬ್ರಾಹ್ಮಣ ದಂಪತಿಯ ಮಗಳಾಗಿದ್ದಳು. ಆಕೆ ಅತಿರೂಪ ಸುಂದರಿಯಾಗಿದ್ದಳು. ಆ ಬ್ರಾಹ್ಮಣ ದಂಪತಿಗಳು ಆಕೆಗೆ ತಕ್ಕ ವರ ಬುದ್ಧರೇ ಎಂದು ತೀಮರ್ಾನಿಸಿದರು. ಅವರು ಬುದ್ಧರಲ್ಲಿಗೆ ಬಂದು ಈ ವಿಷಯ ತಿಳಿಸಿದರು. ಆಗ ಬುದ್ಧರು ಇಂತೆಂದರು:
                ಮಾರನ ಕುಮಾರಿಯರಾದ ತನ್ಹಾ, ಅರತಿ ಮತ್ತು ರಾಗ ಇವರು ಅತ್ಯಂತ ಸ್ಫುರದ್ರೂಪಿಗಳು, ಅವರನ್ನು ಕಂಡಾಗಲು ನನ್ನಲ್ಲಿ ಯಾವುದೇ ಆಸೆ ಉಂಟಾಗಲಿಲ್ಲ. ಇನ್ನೂ ಕೇವಲ ಕಶ್ಮಲಗಳಿಂದ ಕೂಡಿದ ಈ ದೇಹವನ್ನು ನಾನು ಇಚ್ಛಿಸುವೆನೇ? ಬುದ್ಧರು ಹಾಗೆ ಹೇಳುವುದಕ್ಕೆ ಕಾರಣವಿತ್ತು. ಆ ಬ್ರಾಹ್ಮಣ ದಂಪತಿಗಳಿಗೆ ಅನಾಗಾಮಿ ಪ್ರಾಪ್ತಿಯಾಗಬೇಕಾದರೆ ಅವರಿಗೆ ಪ್ರಾಥಮಿಕವಾಗಿ ದೇಹದ ಅಶುಭಾ ಜ್ಞಾನ ಅರಿವಾಗಬೇಕಿತ್ತು. ಅವರಿಗೆ ನಂತರದ ಬೋಧನೆಯಿಂದ ಅನಾಗಾಮಿ ಪ್ರಾಪ್ತಿಯಾಯಿತು.
                ಆದರೆ ಮಾಗಂಡಿಯಳು ಮಾತ್ರ ತನ್ನ ರೂಪ ಅಹಂಭಾವದಿಂದ ತನಗೆ ಅವಮಾನವಾದಂತೆ ಭಾವಿಸಿದಳು. ಇದಕ್ಕಾಗಿ ಪ್ರತಿಕಾರ ಸಂಕಲ್ಪವನ್ನು ಮಾಡಿದ್ದಳು. ಈಗ ಆಕೆಯು ರಾಜ ಉದೇನನ ಪತ್ನಿಯಾದಮೇಲೆ ಆಕೆಗೆ ಸಾಮಾವತಿಯ ಮೇಲೂ ಅಸೂಯೆ ಉಂಟಾಯಿತು. ಸಾಮಾವತಿಯು ರಂಧ್ರದ ಮೂಲಕ ಬುದ್ಧರನ್ನು ವೀಕ್ಷಿಸಿ ವಂದಿಸುವುದನ್ನು ಕಂಡ ಮಾಗಂಡಿಯಳು ಇಬ್ಬರ ಮೇಲೂ ಸೇಡು ತೀರಿಸಲು ತಕ್ಕಕಾಲ ಎಂದು ಭಾವಿಸಿ ಆಕೆಯು ರಾಜನಿಗೆ ಸಾಮಾವತಿಯು ನಂಬಿಕೆಗೆ ಅರ್ಹಳಲ್ಲ ಎಂದು ಹೇಳಿ ಸಾಮಾವತಿಯು ರಂಧ್ರಗಳಲ್ಲಿ ವೀಕ್ಷಿಸುವುದನ್ನು ಹೇಳಿದಳು. ಆದರೆ ರಾಜನಿಗೆ ಸಾಮಾವತಿಯು ವಿವರವಾಗಿ ತಿಳಿಸಿದಾಗ ಆತನಿಗೆ ಕೋಪ ಉಂಟಾಗಲಿಲ್ಲ.
                ಆದರೆ ಮಾಗಂಡಿಯಳು ಮಾತ್ರ ರಾಜನಿಗೆ ಪದೇ ಪದೇ ಸಾಮಾವತಿಯ ಮೇಲೆ ಸಂಶಯ ಉಂಟಾಗುವಂತೆ ಹೇಳಿಕೆಗಳನ್ನು ನೀಡುತ್ತಾ ಆಕೆಯು ಉದೇನನ್ನು ಕೊಲ್ಲಲು ಸಹಾ ಹವಣಿಸುತ್ತಾಳೆ ಎಂದು ಸುಳ್ಳು ಹೇಳಿದಳು. ಅದಕ್ಕಾಗಿ ಒಂದು ಕುಟಿಲೋಪಾಯವನ್ನು ಸಹಾ ಸಿದ್ಧಮಾಡಿದಳು. ರಾಜನು ಸಾಮಾವತಿಯ ಅಂತಃಪುರಕ್ಕೆ ಹೋಗುವ ಮುನ್ನ ಆತನ ಕೊಳಲಲ್ಲಿ ಚಿಕ್ಕ ವಿಷಸರ್ಪವನ್ನು ಅಡಗಿಸಿ ರಂಧ್ರವನ್ನು ಹೂವಿನಿಂದ ಮುಚ್ಚಿದಳು. ಆತನು ಸಾಮಾವತಿಯ ಬಳಿಗೆ ಹೋಗುವಾಗ ಆಕೆ ಹೋಗದಂತೆ ತಡೆದಳು. ಆತನಿಗೆ ಅಭದ್ರತೆಯಿರಬಹುದು ಎಂದು ಹೇಳಿ ನಟಿಸಿದಳು. ಆದರೆ ಉದೇನನು ಇವೆಲ್ಲವನ್ನು ಲಕ್ಷಿಸದೆ ಸಾಮವತಿಯ ಬಳಿಗೆ ಬಂದನು. ಅದೇ ವೇಳೆಯಲ್ಲಿ ಆ ಹಾವು ಹೊರಬಂದು ಹಾಸಿಗೆಯಲ್ಲಿ ಕಾಣಿಸಿತು. ಇದನ್ನು ಕಂಡ ರಾಜನಿಗೆ ಮಾಗಂಡಿಯಾಳ ಮಾತು ನಿಜವಿರಬಹುದೆಂದು ಮುಗ್ದೆ ಸಾಮಾವತಿಯ ಮೇಲೆ ಸಂಶಯಪಟ್ಟನು. ಹಾಗು ಕ್ರೋಧಗೊಂಡು ಸಾಮಾವತಿ ಮತ್ತು ಆಕೆಯ ಸಖಿಯರಿಗೆ ಎಲ್ಲರೂ ಒಂದು ಸಾಲಿನಲ್ಲಿ ಸಾಮವತಿಯ ಹಿಂದೆ ನಿಲ್ಲಲು ಹೇಳಿದನು. ನಂತರ ಆತನು ಬಿಲ್ಲನ್ನು ಕೈಯಲ್ಲಿ ಹಿಡಿದು ಬಾಣವನ್ನು ವಿಷದಲ್ಲಿ ಅದ್ದಿದನು. ಆತನು ಗುರಿಯಿಡುವುದರಲ್ಲಿ ಪ್ರವೀಣನಾಗಿದ್ದನು. ಆ ಸಮಯದಲ್ಲಿ ಸಾಮವತಿ ಮತ್ತು ಆಕೆಯ ಸಖಿಯರು ರಾಜನ ಮೇಲೆ ಕೋಪ ತಾಳಲಿಲ್ಲ. ಬದಲಾಗಿ ಮೈತ್ರಿಭಾವನೆ ಪ್ರಸರಿಸಿದರು. ಆಗ ಮೈತ್ರಿಯ ಪ್ರಚಂಡಶಕ್ತಿಯಿಂದಾಗಿ ರಾಜನು ಬಾಣವನ್ನು ಬಿಟ್ಟರೂ ಅದು ಗುರಿತಪ್ಪತೊಡಗಿತು. ಇದು ರಾಜನಿಗೆ ಅತ್ಯಂತ ಆಶ್ಚರ್ಯವನ್ನುಂಟು ಮಾಡಿ ಅವರ ಮುಗ್ದತೆ ಮತ್ತು ನಿರ್ಮಲತೆ ಅರಿವಾಗಿ ಸಾಮಾವತಿಗೆ ಬುದ್ಧರನ್ನು ಮತ್ತು ಸಂಘವನ್ನು ಅರಮನೆಗೆ ಆಹ್ವಾನಿಸಿ ಔತಣ ನೀಡಲು ಮತ್ತು ಧಮ್ಮಪ್ರವಚನ ಕೇಳಲು ಸ್ವಾತಂತ್ರ್ಯ ನೀಡಿದನು.
                ಇದರಿಂದಾಗಿ ಮಾಗಂಡಿಯಳು ಮತ್ತಷ್ಟು ಕ್ರುದ್ಧಳಾಗಿ ಸೋಲೇ ಉಂಟಾಗದಂತಹ ಕ್ರೂರ ಉಪಾಯವನ್ನು ಮಾಡಿದಳು. ಅದೆಂದರೆ ಆಕೆಯ ಸಂಬಂಧಿಯೊಬ್ಬನನ್ನು ಕರೆಯಿಸಿ ಸಾಮಾವತಿ ಮತ್ತು ಆಕೆಯ ಸಖಿಯರು ಅರಮನೆಯ ಒಳಗೆ ಇದ್ದಂತೆಯೇ ಅವರನ್ನು ಜೀವಂತ ಸುಡಲು ಸಾಮಾವತಿಯ ಅರಮನೆಗೆ ಬೆಂಕಿ ಇಡಿಸಿದಳು. ಆದರೆ ಅರಮನೆಯು ಹೊರಗಡೆಯಿಂದ ಉರಿಯುತ್ತಿದ್ದಂತೆ ಸಾಮವತಿ ಮತ್ತು ಆಕೆಯ ಸಖಿಯರು ಧ್ಯಾನಿಸಲು ಆರಂಭಿಸಿದರು. ಅವರಲ್ಲಿ ಕೆಲವರು ಸಕದಾಗಾಮಿ ಸ್ಥಿತಿ ತಲುಪಿದರು ಮತ್ತು ಮಿಕ್ಕವರು ಸಹಾ ಲಾಭ ಪಡೆದರು. ಆದರೆ ಆ ಹೊತ್ತಿಗಾಗಲೇ ಇಡೀ ಅರಮನೆಯು ಉರಿದು ಹೋಯಿತು.
                ಈ ಸುದ್ದಿಯು ಹಬ್ಬುತ್ತಿದ್ದಂತೆ ರಾಜನು ಸ್ಥಳಕ್ಕೆ ಧಾವಿಸಿದನು. ಆದರೆ ತುಂಬ ತಡವಾಗಿ ಹೋಗಿತ್ತು. ರಾಜನಿಗೆ ಇದು ಮಾಗಂಡಿಯಾಳ ಕೃತ್ಯವಿರಬಹುದೆಂದು ಸಂಶಯವಾಯಿತು. ಆದರೆ ಆತ ಅದನ್ನು ತೋರ್ಪಡಿಸಲಿಲ್ಲ. ಬದಲಾಗಿ ಆತ ಹೀಗೆ ಹೇಳಿದನು. ಯಾವಾಗ ಸಾಮಾವತಿಯು ಜೀವಂತವಾಗಿದ್ದಳಲ್ಲ ಆಗ ನನಗೆ ಸದಾ ಜೀವಭಯ ಕಾಡುತ್ತಿತ್ತು. ಈಗ ನನಗೆ ಮನಸ್ಸು ಶಾಂತವಾಗಿದೆ. ಇದನ್ನು ಯಾರು ಮಾಡಿರಬಹುದು? ನನ್ನನ್ನು ಅತಿಯಾಗಿ ಪ್ರೀತಿಸಿದವರು ಮಾತ್ರ ಇದನ್ನು ಮಾಡಿರಬಹುದು ಎಂದಾಗ ಇದನ್ನು ಕೇಳಿದ ದಡ್ಡಿ ಮಾಗಂಡಿಯಾ ಇದನ್ನು ನಾನೇ ಮಾಡಿಸಿದೆ ಎಂದಳು. ಇದನ್ನು ಕೇಳಿದ ರಾಜ ಆಕೆಗೆ ದೊಡ್ಡ ಬಹುಮಾನ ನೀಡುವುದಾಗಿ ಹೇಳಿ, ಅದಕ್ಕೆ ಸಂಬಂಧಿಸಿದ ಆಕೆಯ ಸಂಬಂಧಿಕರನು ಕರೆಸಿದನು. ನಂತರ ಎಲ್ಲರನ್ನೂ ಬಂಧಿಸಿ ಅರಮನೆಯ ಆವರಣದಲ್ಲಿ ಕೊಲ್ಲಿಸಿದನು. ಈ ರೀತಿಯಾಗಿ ಆಕೆಗೆ ತನ್ನ ಹೀನ ಪಾಪಕ್ಕಾಗಿ ಶಿಕ್ಷೆಯಾಯಿತು.
                ಭಗವಾನರಿಗೆ ಈ ಎರಡು ಘಟನೆಗಳು ತಿಳಿಸಲ್ಪಟ್ಟಾಗ ಅವರು ಈ ಮೇಲಿನ ಗಾಥೆಗಳನ್ನು ತಿಳಿಸಿದರು

Saturday 15 November 2014

dhammapada/yamakavagga/1:14/the difference between wise and scholar

ಸಿದ್ಧಾಂತವೇ ಸಾಧನೆಯಲ್ಲ, ಜ್ಞಾನವೇ ಸಾಕ್ಷಾತ್ಕಾರವಲ್ಲ
ಒಬ್ಬನು ಪವಿತ್ರಗ್ರಂಥಗಳನ್ನು ಎಷ್ಟೇ ಓದಿರಲಿ ಅಥವಾ ಎಚ್ಚರಿಸಲಿ. ಆದರೆ ಅದರಂತೆ ಆತನು ಅನುಸರಿಸದಿದ್ದರೆ, ಆತನು ಪರರ ಗೋವುಗಳನ್ನು ಎಣಿಸುವವನಂತೆ ಪವಿತ್ರ ಜೀವನದ ಫಲದಲ್ಲಿ ಭಾಗಿಯಾಗುವುದಿಲ್ಲ.      (19)
ಪವಿತ್ರ ಗ್ರಂಥಗಳನ್ನು ಅಲ್ಪವಾಗಿ ಅರಿತಿದ್ದರೂ ಅದರಂತೆ ಅನುಸರಿಸುವವರು ಹಾಗು ರಾಗ, ದ್ವೇಷ ಮತ್ತು ಮೋಹವನ್ನು ತ್ಯಜಿಸುವವನು, ನಿಜವಾಗಿ ಅರಿತವನು ಸುವಿಮುಕ್ತ ಚಿತ್ತವುಳ್ಳವನು ಆದ ಆತನು ಇಲ್ಲಿಯಾಗಲಿ ಅಥವಾ ನಂತರದ ಕಾಲದಲ್ಲಿಯಾಗಲಿ ಪವಿತ್ರ ಜೀವನದ ಫಲದಲ್ಲಿ ಭಾಗಿಯಾಗುತ್ತಾನೆ. (20)


ಗಾಥ ಪ್ರಸಂಗ 1:14
ವಿದ್ವಾಂಸ ಮತ್ತು ಅರಹಂತ
                ಸದ್ವಂಶಸ್ಥರಾದ ಇಬ್ಬರು ಮಿತ್ರರು ಭಿಕ್ಷುಗಳಾದರು. ಅವರಲ್ಲಿ ಒಬ್ಬ ತಿಪಿಟಕದ ಅಧ್ಯಯನದಲ್ಲಿ ತಲ್ಲೀನನಾಗಿ ವಿದ್ವಾಂಸನಾದನು ಮತ್ತು ಚೆನ್ನಾಗಿ ಬೋಧಿಸುತ್ತಿದ್ದನು. ಈ ರೀತಿಯಿಂದಾಗಿ ಆತನು 18 ಭಿಕ್ಷುಗಳ ಗುಂಪಿಗೆ ಬೋಧಕನಾದನು. ಆದರೆ ಇನ್ನೊಬ್ಬ ಭಿಕ್ಷುವು ತಿಳಿದಿರುವುದನ್ನು ಚೆನ್ನಾಗಿ ಪಾಲಿಸತೊಡಗಿದನು. ಆತನು ಶೀಲದಲ್ಲಿ ಅತ್ಯಂತ ನಿಷ್ಠಾವಂತನಾದನು. ಸದಾ ಜಾಗ್ರತೆಯನ್ನು ಹೊಂದಿದವನು, ಅತ್ಯಂತ ಪ್ರಯತ್ನಶಾಲಿಯು, ಧ್ಯಾನಸಿದ್ದನು ಮತ್ತು ಕೊನೆಗೆ ಅರಹಂತನೇ ಆದನು. ವಿಪಶ್ಶನದ ಆಳಜ್ಞಾನ ಸಾಕ್ಷತ್ಕರಿಸಿದನು, ಮುಕ್ತನಾದನು. ಆದರೆ ಪರರಿಗೆ ಇದು ಗೊತ್ತಾಗಲಿಲ್ಲ.
                ಒಮ್ಮೆ ಜೇತವನದಲ್ಲಿ ಬುದ್ಧಭಗವಾನರು ತಂಗಿದ್ದಾಗ ಅಲ್ಲಿ ಈ ಇಬ್ಬರು ಭಿಕ್ಷುಗಳು ಭೇಟಿಯಾದರು. ಮೊದಲನೆಯವ ತನ್ನ ಪಾಂಡಿತ್ಯ ಪ್ರದಶರ್ಿಸಿ, ಎರಡನೆಯ ಭಿಕ್ಷುವನ್ನು ಕೀಳಾಗಿ ಭಾವಿಸಿದನು. ಈ ಭಿಕ್ಷುವು ಅತ್ಯಂತ ಕಡಿಮೆ ಸಿದ್ಧಾಂತವನ್ನು ತಿಳಿದಿದ್ದಾನೆ. ಈತನ ಜ್ಞಾನವು ಅಪಕ್ವವಾಗಿದೆ ಎಂದು ತಿಳಿದು ತನ್ನ ಬಗ್ಗೆ ಅಹಂಭಾವ ವ್ಯಕ್ತಪಡಿಸಿದನು. ಆತನ ಜೊತೆ ವಾದವಿವಾದ ಮಾಡಿ ಪ್ರಶ್ನಿಸಿ ಆತನಿಗೆ ತೇಜೋಭಂಗ ಮಾಡಲು ಸಿದ್ಧನಾದನು. ಆದರೆ ಹಾಗೆ ಮಾಡಿದರೆ ಆತನಿಗೆ ಅರಹಂತರ ತೇಜೋವಧೆಯ ಪಾಪಕ್ಕೆ ಸಿಲುಕಿ ದೀರ್ಘಕಾಲ ದುಃಖಕ್ಕೆ ಸಿಲುಕುತ್ತಿದ್ದನು. ಆದ್ದರಿಂದ ಬುದ್ಧರಿಗೆ ಈ ವಿಷಯ ತಿಳಿದು ಆತನನ್ನು ಸರಿದಾರಿಗೆ ತಲು ನಿರ್ಧರಿಸಿ ಅವರನ್ನು ಆ ಕ್ಷಣವೇ ಭೇಟಿಯಾದರು. ಹಾಗು ಅವರನ್ನು ಭಗವಾನರು ವಿಪಶ್ಶನ ಧ್ಯಾನಗಳ ಮಾರ್ಗ ಮತ್ತು ಫಲಗಳ ಬಗ್ಗೆ ಪ್ರಶ್ನಿಸಿದರು. ಒಣಜ್ಞಾನಿಯಾದ ಪಂಡಿತನಿಗೆ ಉತ್ತರಿಸಲು ಆಗಲಿಲ್ಲ. ಆದರೆ ಸಾಧನೆಯಲ್ಲಿ ಪ್ರವೀಣ ಮತ್ತು ಅರಹಂತ ಭಿಕ್ಷುವು ಮಾತ್ರ ತನ್ನ ಸಾಕ್ಷಾತ್ಕಾರದ ಅನುಭವದಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದನು.

                ಆಗ ಭಗವಾನರು ಅರಹಂತ ಭಿಕ್ಷುವಿಗೆ ತುಂಬಾ ಪ್ರಶಂಸಿದರು ಮತ್ತು ವಿದ್ವಾಂಸನಿಗೆ ಯಾವರೀತಿಯ ಪ್ರಶಂಸೆ ಸಿಗಲಿಲ್ಲ. ಆಗ ಭಗವಾನರು ಈ ಗಾಥೆಗಳನ್ನು ನುಡಿದರು.

dhammapada/yamakavagga/1:13/sumanadevi's story

ಪುಣ್ಯವಂತರು ಸದಾ ಸುಖಿಯಾಗಿರುತ್ತಾರೆ
ಇಲ್ಲಿ ಆನಂದವಾಗಿರುತ್ತಾನೆ, ಮುಂದೆ ಪರಲೋಕದಲ್ಲೂ ಆನಂದವಾಗಿರುತ್ತಾನೆ, ಪುಣ್ಯವಂತನು ಉಭಯಸ್ಥಿತಿಗಳೆರಡರಲ್ಲೂ ಆನಂದದಿಂದಿರುತ್ತಾನೆ. ನಂತರ ಸುಗತಿಯಲ್ಲಿ ಸೇರಿ ಅಲ್ಲಿ ಇನ್ನೂ ಹೆಚ್ಚು ಆನಂದದಿಂದಿರುತ್ತಾನೆ.  (18)

ಗಾಥ ಪ್ರಸಂಗ 1:13
ಸುಮನದೇವಿಯ ಆನಂದ
                ಬುದ್ಧ ಭಗವಾನರಿಗೆ ಮತ್ತು ಅವರ ಸಂಘಕ್ಕೆ ಮಹಾ ಪೋಷಕರೆಂದರೆ ಮಹಾ ಉಪಾಸಕ ಅನಾಥಪಿಂಡಕ ಮತ್ತು ಮಹಾ ಉಪಾಸಿಕೆ ವಿಸಾಖ. ಅವರಿಬ್ಬರೂ ಪ್ರತ್ಯೇಕವಾಗಿ ಪ್ರತಿನಿತ್ಯ ಎರಡು ಸಾವಿರ ಭಿಕ್ಷುಗಳನ್ನು ಪೋಷಿಸುತ್ತಿದ್ದರು.
                ಅನಾಥಪಿಂಡಕನು ಶ್ರಾವತ್ತಿಯಲ್ಲಿದ್ದನು. ಆತನ ಮನೆಯಲ್ಲಿ ಭಿಕ್ಷುಗಳ ಪಾಲನೆಗೆ ಆತ ತನ್ನ ಹಿರಿಯ ಮಗಳಾದ ಮಹಾ ಸುಭದ್ರೆಗೆ ನೇಮಿಸಿದ್ದನು. ಆಕೆಯ ವಿವಾಹದ ನಂತರ ಚುಲ್ಲ ಸುಭದ್ರೆಗೆ ಆ ಮಹಾ ಕಾರ್ಯಕ್ಕೆ ನೇಮಿಸಿದನು. ಆಕೆಯ ವಿವಾಹದ ನಂತರ ಈ ಪುಣ್ಯಕಾರ್ಯಕ್ಕೆ ಆತ ತನ್ನ ಕಿರಿಯ ಮಗಳನ್ನು ನೇಮಿಸಿದನು ಆಕೆಯೇ ಸುಮನದೇವಿ. ಆಕೆಯ ಹಿರಿಯ ಅಕ್ಕಂದಿರಿಬ್ಬರು ಸೋತಪನ್ನರಾಗಿದ್ದರು. ಆದರೆ ಸುಮನದೇವಿಯು ಸಕದಾಗಾಮಿಯಾಗಿದ್ದಳು ಮತ್ತು ಆಕೆ ಅವಿವಾಹಿತಳಾಗಿಯೇ ಇದ್ದಳು.
                ಒಂದುದಿನ ಆಕೆಯು ತನ್ನ ತಂದೆಗೆ ಬೇಗ ಬರಲು ಸಂದೇಶ ಕಳುಹಿಸಿದಳು. ಅನಾಥಪಿಂಡಕ ಮಗಳೊಂದಿಗೆ ಹೀಗೆ ಕೇಳಿದನು
                ಏನು ಮಗು ಸುಮನ?
                ಏನು ಹೇಳಲಿ ತಮ್ಮ.
                ನೀನು ಅಸಂಬದ್ಧವಾಗಿ ಮಾತನಾಡುತ್ತಿರುವೆ ಮಗು.
                ನಾನು ಅಸಂಬದ್ಧವಾಗಿ ಮಾತಾಡುತ್ತಿಲ್ಲ ತಮ್ಮ.
                ನೀನೇನಾದರೂ ಭೀತಿಗೊಂಡಿರುವೆಯಾ ಮಗು?
                ಇಲ್ಲ ತಮ್ಮ ಎಂದು ಹೇಳಿ ಆಕೆ ಮೃತ್ಯವಶವಾದಳು.
                ಅನಾಥಪಿಂಡಕನಿಗೆ ಅಪಾರವಾದ ದುಃಖವಾಯಿತು. ಆತನು ಸೋತಪನ್ನನಾಗಿದ್ದ ರಿಂದ ಇನ್ನೂ ಶೋಕ ಗೆದ್ದಿರಲಿಲ್ಲ. ಆತನು ಅಂತ್ಯಕ್ರಿಯಾದಿಗಳನ್ನು ಮುಗಿಸಿ ಅತ್ತುಕೊಂಡು ಭಗವಾನರು ಇದ್ದಲ್ಲಿಗೆ ಬಂದನು. ಓ ಗೃಹಪತಿಯೆ, ಏಕೆ ಇಷ್ಟೊಂದು ಶೋಕ?
                ಭಗವಾನ್ ಇಂದು ನನ್ನ ಮಗಳು ಸುಮನ ತೀರಿಕೊಂಡಳು
                ಓಹ್ ಅನಾಥಪಿಂಡಕ, ಸಾವಂತು ಎಲ್ಲರಿಗೆ ನಿಶ್ಚಿತವಲ್ಲವೇ? ಅದಕ್ಕಾಗಿ ಏಕೆ ಚಿಂತಿಸುವೆ?
                ನನಗೆ ಗೊತ್ತು ಭಗವಾನ್, ಆದರೆ ನನ್ನ ಮಗಳು ಅತಿ ಲಜ್ಜಾಸಂಪನ್ನಳು, ಶೀಲವಂತಳು, ದಾನಿ, ಸಹೃದಯಿ, ಆದರೆ ನನಗೆ ದುಃಖದ ಅಂಶ ಏನೆಂದರೆ ಆಕೆ ಸಾಯುವಾಗ ಯೋಗ್ಯ ಪ್ರಜ್ಞಾದಿಂದ ಕೂಡಿರಲಿಲ್ಲ.
                ಅದು ಹೇಗೆ? ಆಕೆ ಸಾಯುವಾಗ ಏನೆಂದು ಹೇಳಿದಳು.
                ಅನಾಥಪಿಂಡಕನು ವಿವರಿಸಿದನು. ಆಗ ಭಗವಾನರು ಹೀಗೆ ಸಮಾಧಾನ ನೀಡಿದರು.
                ಓ ಅನಾಥಪಿಂಡಕ, ನಿನ್ನ ಮಗಳು ಅಸಂಬದ್ಧವಾಗಿ ಮಾತಾಡಲಿಲ್ಲ. ಆಕೆ ಸಕದಾಗಾಮಿಯಾಗಿದ್ದಳು. ನೀನು ಸೋತಪನ್ನನಾಗಿರುವುದರಿಂದ ಆಕೆಗಿಂತ ಕಿರಿಯನೇ ಸರಿ. ಈ ಅರ್ಥದಲ್ಲಿ ಆಕೆಯು ನಿನಗೆ ಈ ರೀತಿ ಮಾತನಾಡಿದ್ದಾಳೆ ಅಷ್ಟೇ. ಆಕೆ ಈಗ ದೇವಲೋಕದಲ್ಲಿದ್ದಾಳೆ.

                ಆಗ ಅನಾಥಪಿಂಡಕನಿಗೆ ಸಮಾಧಾನ ಮೂಡಿ ಅನಂತನಾದನು. ಆಕೆಯ ಸಂಬಂಧವಾಗಿ ಮೇಲಿನ ಗಾಥೆಯನ್ನು ಭಗವಾನರು ನುಡಿದರು.

dhammapada/yamaka vagga/1:12/devadatta's repentance

ಪಾಪಿಯು ಇಲ್ಲಿಯೂ ಮತ್ತು ಮುಂದೆಯೂ ಪ್ರಲಾಪಿಸುತ್ತಾನೆ
ಇಲ್ಲಿಯೂ ದುಃಖಿಸುತ್ತಾನೆ, ಮುಂದೆ ಪರಲೋಕದಲ್ಲಿಯೂ ದುಃಖಿಸುತ್ತಾನೆ. ಉಭಯ ಸ್ಥಿತಿಗಳೆರಡರಲ್ಲೂ ಪಾಪಿಯು ದುಃಖಿಸುತ್ತಾನೆ. ನಾನು ಪಾಪವನ್ನು ಮಾಡಿದೆನಲ್ಲ ಎಂದು ದುಃಖಿಸುತ್ತಾನೆ. ನಂತರದಲ್ಲಿ ದುರ್ಗತಿಗೆ ಹೋಗಿ ಅಲ್ಲೂ ಸಹ ದುಃಖಿಸುತ್ತಾನೆ.     (17)


ಗಾಥ ಪ್ರಸಂಗ 1:12
ದೇವದತ್ತನ ದ್ವೇಷಾಸೂಯೆಗಳ ಪರಿಣಾಮ
                ದೇವದತ್ತನು ಬುದ್ಧರೊಂದಿಗೆ ಕೋಸಂಬಿಯಲ್ಲಿ ವಾಸವಾಗಿದ್ದನು. ಆಗ ಆತನು ಬುದ್ಧರಿಗೆ ಸಿಗುವ ಗೌರವ, ಸತ್ಕಾರ, ಕೀತರ್ಿ, ಎಲ್ಲವನ್ನು ಕಂಡು ಅಸೂಯೆಯುಂಟಾಯಿತು. ಆತನೇ ಭಿಕ್ಷು ಸಂಘಕ್ಕೆ ನಾಯಕನಾಗಲು ಲೋಭಪಟ್ಟನು. ಒಂದುದಿನ ಭಗವಾನರು ರಾಜಗೃಹದ ವೇಲುವನದ ವಿಹಾರದಲ್ಲಿ ಬೋಧಿಸುತ್ತಿರುವಾಗ ಬುದ್ಧರಲ್ಲಿಗೆ ದೇವದತ್ತನು ಬಂದು ಭಗವಾನರಿಗೆ ವಯಸ್ಸಾಯಿತು, ಆದ್ದರಿಂದ ನನಗೆ ಸಂಘದ ನೇತೃತ್ವ ನೀಡಿ ಎಂದು ಕೇಳಿದನು. ಆತನು ಅತ್ಯಂತ ಅನರ್ಹನಾಗಿದ್ದನು. ಕೊನೇ ಪಕ್ಷ ಶೀಲವಂತನೂ ಸಹಾ ಆಗಿರಲಿಲ್ಲ. ಸಂಘದಲ್ಲಿ ಅಸಂಖ್ಯಾತ ಖೀಣಾಸವ ಅರಹಂತರು ಇದ್ದರು. ಅವರಿಗೂ ಸಹಾ ಬುದ್ಧರ ಧಮ್ಮದ ಆಳ್ವಿಕೆ ಸಾಧ್ಯವಿರಲಿಲ್ಲ. ಆದ್ದರಿಂದಾಗಿ ಭಗವಾನರು ಆತನ ಕೋರಿಕೆ ನಿರಾಕರಿಸಿದರು ಮತ್ತು ಆತನ ಮೋಹಕ್ಕೆ ಖಂಡಿಸಿದರು.
                ದೇವದತ್ತನು ಇದರಿಂದಾಗಿ ದ್ವೇಷದಿಂದ ಸೇಡಿನಿಂದ ತುಂಬಿಹೋದನು. ಆತನು ಬುದ್ಧರನ್ನು 3 ಬಾರಿ ಕೊಲ್ಲಲು ಪ್ರಯತ್ನಿಸಿದನು. ಮೊದಲಿಗೆ ಹಲವು ಧನುರ್ಧರರನ್ನು ಕೊಲ್ಲಲು ನೇಮಿಸಿದನು. ಆದರೆ ಬುದ್ಧ ಭಗವಾನರ ಅಸೀಮ ಮೈತ್ರಿಯಿಂದ ಮತ್ತು ಪ್ರಜ್ಞಾಶೀಲತೆಯಿಂದಾಗಿ ಅವರೆಲ್ಲರೂ ಬುದ್ಧಭಗವಾನರ ಶಿಷ್ಯರಾದರು. ನಂತರ ಗಿಜ್ಜಕೂಟ ಬೆಟ್ಟದ ಮೇಲೇರಿ ಅಲ್ಲಿಯ ದೊಡ್ಡ ಬಂಡೆಯನ್ನು ಬುದ್ಧರ ಮೇಲೆ ಉರುಳಿಸಿದನು. ಆದರೆ ಭಗವಾನರು ಪವಾಡಶಕ್ತಿಯಿಂದ ಪಾರಾದರು. ಆದರೂ ಹಿಂದಿನ ಕರ್ಮಫಲದ ಪರಿಣಾಮದಿಂದ ಕೇವಲ ಕಾಲಿನ ಹೆಬ್ಬೆರಳಿಗೆ ಗಾಯವಾಯಿತು. ನಂತರ ನಾಲಾಗಿರಿ ಆನೆಯನ್ನು ಉನ್ಮಾದಿಸಿ ಬುದ್ಧರ ಮೇಲೆ ಬಿಟ್ಟನು. ಆದರೆ ಭಗವಾನರ ಮೈತ್ರಿಯ ಪ್ರಬಲಶಕ್ತಿಯಿಂದಾಗಿ ಆನೆಯು ಸಹಾ ಪಳಗಿ ಶಾಂತವಾಗಿ ವಂದಿಸಿತು. ಆಗ ಈ ಪ್ರಯತ್ನಗಳು ವಿಫಲವಾದಾಗ ದೇವದತ್ತನು ಸಂಘಭೇದ ಮಾಡಲು, ಸಂಘವನ್ನು ಮುರಿಯಲು ಪ್ರಯತ್ನಿಸಿದನು. ಆದರೆ ಸಾರಿಪುತ್ತ ಮತ್ತು ಮೊಗ್ಗಲಾನರಿಂದ ಸಂಘ ಮತ್ತೆ ಒಂದಾಯಿತು.
                ಇದಾದ ಸ್ವಲ್ಪ ದಿನಗಳಲ್ಲಿ ದೇವದತ್ತನು ಕಾಯಿಲೆಗೆ ಬಿದ್ದನು. ಆತ ಒಂಭತ್ತು ತಿಂಗಳು ರೋಗದಿಂದ ನರಳಿದನು. ಕೊನೆಗೆ ಆತನಿಗೆ ಬುದ್ಧರ ಮಹೋನ್ನತೆ ಅರಿವಾಯಿತು. ಆತನಿಗೆ ತನ್ನ ಕಾರ್ಯಗಳ ಬಗ್ಗೆ ಪಶ್ಚಾತ್ತಾಪವುಂಟಾಯಿತು. ಆತನು ತನ್ನ ಶಿಷ್ಯರೊಂದಿಗೆ ಹೀಗೆ ಹೇಳಿದನು ನಾನು ಬುದ್ಧರನ್ನು ಕಾಣುವ ಇಚ್ಛುಕನಾಗಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿ.
                ಆಗ ಆತನು ಶಿಷ್ಯರು ಹೀಗೆ ಉತ್ತರಿಸಿದರು ನೀನು ಆರೋಗ್ಯದಿಂದ ಕೂಡಿರುವಾಗ ಬುದ್ಧರನ್ನು ದ್ವೇಷಿಸಿದೆ. ಈಗ ಹೀಗೆ ಹೇಳುತ್ತಿರುವೆ, ನಾವು ನಿನಗೆ ಸಹಾಯ ಮಾಡಲಾರೆವು. ಆಗ ದೇವದತ್ತನು ಹೀಗೆ ಕೇಳಿಕೊಂಡನು ದಯವಿಟ್ಟು ನನ್ನನ್ನು ನಾಶಮಾಡಬೇಡಿ, ನಾನು ಬುದ್ಧರನ್ನು ದ್ವೇಷಿಸಿದ್ದು ನಿಜವಾದರೂ ಬುದ್ಧರು ಮಾತ್ರ ನನಗೆ ಕೂದಲಿನ ಮೊನೆಯಷ್ಟು ದ್ವೇಷಿಸಲಿಲ್ಲ ಎಂದು ಪಶ್ಚಾತ್ತಾಪಪಟ್ಟು ದುಃಖಿಸಿದನು.
                ಆ ಮಾತು ಸತ್ಯವಾಗಿತ್ತು. ಬುದ್ಧರ ಮೈತ್ರಿಯು ಸರ್ವರ ಮೇಲೂ ಸಮಾನವಾಗಿತ್ತು. ಅದು ರಾಹುಲನಾಗಿರಬಹುದು, ದೇವದತ್ತನಾಗಿರಬಹುದು, ಅಂಗುಲಿಮಾಲನಾಗಿರಬಹುದು ಒಂದು ಪಕ್ಷಿಯೇ ಆಗಿರಬಹುದು ಅವರ ನಿಸ್ವಾರ್ಥ, ಶುದ್ಧ ಪ್ರೀತಿ ಸರ್ವರ ಮೇಲೂ ಸಮಾನವಾಗಿತ್ತು.

                ದೇವದತ್ತನು ಬುದ್ಧರಿಂದ ಕ್ಷಮೆ ಯಾಚಿಸಲು ದೃಢವಾಗಿ ನಿರ್ಧರಿಸಿದ್ದನು. ಆತನ ಶಿಷ್ಯರು ಆತನಿಗೆ ಹೊತ್ತುಕೊಂಡು ಹೊರಟರು. ಅವರೆಲ್ಲರೂ ಜೇತವನದ ವಿಹಾರದ ಬಳಿ ಬಂದರು. ಆಗ ದೇವದತ್ತನಿಗೆ ಅಪಾರ ಬಾಯಾರಿಕೆಯಾಯಿತು. ಹೀಗಾಗಿ ಅವರು ಆತನ ಮಂಚವನ್ನು ಕೊಳದ ಬಳಿ ಕೆಳಗಿಳಿಸಿ ನೀರನ್ನು ತರಲು ಹೋದರು. ಆಗ ದೇವದತ್ತನು ಸಹಾ ಎರಡು ಪಾದಗಳನ್ನು ನೆಲದ ಮೇಲಿಟ್ಟು ನಿಂತನು. ತಕ್ಷಣವೇ ಭೂಮಿಯಿಂದ ಬಿರುಕುಂಟಾಗಿ ಕುಸಿದು, ಆತನು ಭೂಮಿಯೊಳಕ್ಕೆ ಹೋದನು. ಜ್ವಾಲೆಗಳು ಕಾಣಿಸಿಕೊಂಡು ಆತನಿಗೆ ಭೂಗರ್ಭದಲ್ಲಿ ಸೆಳೆದುಕೊಂಡು ಹೋದವು. ಆತನ ಕುಕರ್ಮ ಫಲದಿಂದ ಆತನಿಗೆ ಬುದ್ಧರ ದರ್ಶನ ಸಿಗದೆ ಹೋಯಿತು ಮತ್ತು ಆತನು ಅವೀಚಿ ನರಕದಲ್ಲಿ ಹುಟ್ಟಿದನು. ಹೀಗೆ ಆತನು ಇಹದಲ್ಲಿ ಮತ್ತು ಪರದಲ್ಲೂ ಅತ್ಯಂತ ದುಃಖ ಅನುಭವಿಸಿದನು. ಆತನಿಗೆ ಸಂಬಂಧಿಸಿದಂತೆ ಭಗವಾನರು ಈ ಮೇಲಿನ ಗಾಥೆಗಳನ್ನು ನುಡಿದರು. 

dhammapada/yamaka vagga/1:11/upasaka dhammika story

 ಪುಣ್ಯಶಾಲಿಯು ಇಹಪರಗಳೆರಡರಲ್ಲೂ ಸುಖಿಸುತ್ತಾನೆ
ಇಲ್ಲಿಯೂ ಸಂತೋಷಿಸುತ್ತಾನೆ, ಮುಂದೆ ಪರಲೋಕದಲ್ಲಿಯೂ ಸಂತೋಷಿಸುತ್ತಾನೆ. ಪುಣ್ಯಶಾಲಿಯು ಉಭಯ ಸ್ಥಿತಿಗಳೆರಡರಲ್ಲೂ ಸಂತೋಷಿಸುತ್ತಾನೆ. ತನ್ನ ಪುಣ್ಯ ಕಾರ್ಯಗಳನ್ನು ನೆನೆಯುತ್ತ ಸಂತೋಷಿಸುತ್ತಾನೆ ಮತ್ತು ನಲಿಯುತ್ತಾನೆ.        (16)

ಗಾಥ ಪ್ರಸಂಗ 1:11
ಉಪಾಸಕ ಧಮ್ಮಿಕನ ಆನಂದಬಾಷ್ಪ
          ಶ್ರಾವಸ್ತಿಯಲ್ಲಿ ಧಮ್ಮಿಕನೆಂಬ ಶ್ರದ್ಧೋಪಾಸಕನಿದ್ದನು. ಆತನು ಪ್ರತಿದಿನ ಭಿಕ್ಷುಗಳಿಗೆ ದಾನ ನೀಡುತ್ತ ಮತ್ತು ಶೀಲ ಪಾಲಿಸುತ್ತಾ ಇದ್ದನು. ಆತನಿಗೆ ಏಳು ಗಂಡು ಮತ್ತು ಏಳು ಹೆಣ್ಣು ಮಕ್ಕಳಿದ್ದರು. ಅವರು ಸಹಾ ಆತನಂತೆಯೇ ದಾನ, ಶೀಲಗಳ ಸದ್ಗುಣಗಳಲ್ಲಿ ತಲ್ಲೀನರಾಗಿದ್ದರು. ಧಮ್ಮಿಕನಿಗೆ 500 ಜನ ಉಪಾಸಕ ಹಿಂಬಾಲಕರಿದ್ದರು.
          ಒಂದುದಿನ ಧಮ್ಮಿಕ ರೋಗಗ್ರಸ್ತನಾಗಿ, ಸಾವಿನ ದವಡೆಯಲ್ಲಿದ್ದನು. ಆತನು ಸಂಘಕ್ಕೆ ಪವಿತ್ರ ಗ್ರಂಥಗಳ ಪಠಣೆ ಮಾಡುವಂತೆ ಕೇಳಿಕೊಂಡಾಗ, ಭಿಕ್ಷುಗಳು ಆತನ ಹಾಸಿಗೆಯ ಪಕ್ಕದಲ್ಲಿ ಮಹಾ ಸತಿಪಟ್ಠಾನ ಸುತ್ತದ ಪಠನೆ ಮಾಡತೊಡಗಿದರು. ಆಗ ಆರು ಸುಗತಿಯ ಲೋಕದಿಂದ ಆರು ರಥಗಳು ಆಯಾ ಲೋಕಕ್ಕೆ ಆಹ್ವಾನ ನೀಡಲು ಬಂದವು. ಆದರೆ ಧಮ್ಮಿಕನು ಸುತ್ತದ ಪಠಣಕ್ಕೆ ಅಡ್ಡಿಯಾಗಬಹುದೆಂದು ಆ ರಥಗಳಿಗೆ ನಿಲ್ಲಿರಿ ಎಂದನು. ಆದರೆ ಪಠಣ ಮಾಡುತ್ತಿದ್ದ ಭಿಕ್ಷುಗಳು ತಮಗೆ ಹೇಳುತ್ತಿರಬಹುದೆಂದು ಅಷ್ಟಕ್ಕೆ ನಿಲ್ಲಿ ಹೊರಟರು.
          ಸ್ವಲ್ಪಕಾಲನಂತರ ಧಮ್ಮಿಕ ತನ್ನ ಮಕ್ಕಳಿಗೆ ಸುಗತಿಯ ಕಥೆಗಳ ಬಗ್ಗೆ ಹೇಳಿದರು. ಅವರು ರಥದ ಆಯ್ಕೆಗಾಗಿ ಹಾರವೊಂದನ್ನು ಆ ಕಡೆ ಎಸೆಯುವಂತೆ ಮಕ್ಕಳಿಗೆ ಹೇಳಿದರು. ಅದರಂತೆ ಆ ಹಾರವು ಗಾಳಿಯಲ್ಲಿ ನಿಂತಂತೆ ಕಾಣಿಸಿ ನಂತರ ಮೇಲ್ಬಾಗಕ್ಕೆ ಚಲಿಸಿತು. ವಾಸ್ತವವಾಗಿ ಅದು ರಥದ ಚಕ್ರಕ್ಕೆ ಸಿಲುಕಿತ್ತು. ಆಗ ಮಕ್ಕಳಿಗೆ ಹೀಗೆ ಹೇಳಿದನು. ನಾನು ತುಸಿತಾ ದೇವಲೋಕ್ಕೆ ಹೊರಡುತ್ತಿರುವೆನು. ನೀವು ಕ್ಷೊಭೆಗೆ ಒಳಗಾಗದಿರಿ. ನನ್ನಂತೆ ಸುಗತಿ ಬಯಸುವುದಾದರೆ ನೀವು ದಾನಶೀಲ ಪಾಲಿಸಿ ಎಂದು ಹೇಳಿ ಸುಗತಿಯಲ್ಲಿ ಹುಟ್ಟಿದರು.

          ಹೀಗೆ ಶೀಲವಂತರು ಇಲ್ಲಿ ಮತ್ತು ಮುಂದೆಯೂ ಸುಖವಾಗಿ ಇರುತ್ತಾರೆ. ಈ ವಿಷಯ ಭಗವಾನರ ಬಳಿಗೆ ಬಂದಾಗ ಭಗವಾನರು ಸಹಾ ಆತನು ತುಸಿತಾದಲ್ಲಿ ಹುಟ್ಟಿರುವನೆಂದು ತಿಳಿಸಿ ಮೇಲಿನ ಗಾಥೆ ನುಡಿದರು.

Saturday 1 November 2014

dhammapada/yamaka vagga/1:10/the story of chunda butcher

ಪಾಪಿಯು ಇಹಪರಗಳೆರಡರಲ್ಲೂ ದುಃಖಿಸುತ್ತಾನೆ
ಇಲ್ಲಿಯೂ ಶೋಕಿಸುತ್ತಾನೆ, ಮುಂದೆ ಪರಲೋಕದಲ್ಲಿಯೂ ಶೋಕಿಸುತ್ತಾನೆ. ಪಾಪಿಯು ಉಭಯ ಸ್ಥಿತಿಗಳೆರಡರಲ್ಲೂ ಶೋಕಿಸುತ್ತಾನೆ. ತನ್ನ ಪಾಪಕೃತ್ಯಗಳನ್ನು ನೆನೆಯುತ್ತ ಶೋಕಿಸುತ್ತಾನೆ ಮತ್ತು ನರಳುತ್ತಾನೆ.  (15)
ಗಾಥ ಪ್ರಸಂಗ 1:10
ಕಸಾಯಿಯವನ ಶೋಕ ಪಶ್ಚಾತ್ತಾಪ (ಚುಂದ)

                ವೇಲುವನ ವಿಹಾರದ ಸಮೀಪದಲ್ಲಿ ಚುಂದನೆಂಬ ಅತಿಕ್ರೂರ ಕಸಾಯಿಯವನಿದ್ದನು. ಆತ ಸದಾ ಪ್ರಾಣಿಗಳ ಹತ್ಯೆ ಮಾಡುತ್ತಿದ್ದನು. ಆತ ತನ್ನ ಜೀವನ ಕಾಲದಲ್ಲಿ ಹತ್ಯೆಗಳು ಮಾಡುತ್ತಿದ್ದನೆ ಹೊರತು ಬೇರೆ ಯಾವ ಪುಣ್ಯ ಕಾರ್ಯಗಳನ್ನು ಮಾಡಲಿಲ್ಲ
.
                ಒಂದುದಿನ ಆತನು ಹುಚ್ಚಿಗೆ ಬಲಿಯಾದನು. ಆತನು ಬದುಕ್ಕಿದ್ದಂತೆಯೇ ನರಕಾಗ್ನಿಯ ಶಾರೀರಿಕ ಪೀಡೆಯನ್ನು ಅನುಭವಿಸತೊಡಗಿದನು. ಆತನ ಪಾಪಕೃತ್ಯಗಳ ಫಲವನ್ನು ಅನುಭವಿಸತೊಡಗಿದನು. ಆತನು ಹಂದಿಯು ಹತ್ಯೆಗೀಡಾಗುವಾಗ ನರಳುವಂತೆ ಮನೆಯಲ್ಲಿ ಹೊರಳಾಡಿ ನರಳಿದನು. ಆತನ ನರಳಾಟ, ಕಿರುಚಾಟಕ್ಕೆ ಹತ್ತರದ ಮನೆಗಳವರು ಏಳು ದಿನಗಳ ಕಾಲ ನಿದ್ರಿಸಲಿಲ್ಲ. ನಂತರ ಆತನು ಮರಣ ಹೊಂದಿ ನರಕದಲ್ಲಿ ಹುಟ್ಟಿದನು.

                ಈ ವಿಷಯವು ಭಿಕ್ಷುಗಳಲ್ಲಿ ಚಚರ್ೆಯ ವಿಷಯವಾಯಿತು. ಭಗವಾನರಲ್ಲಿ ಈ ವಿಷಯ ಕೇಳಿದಾಗ ಭಿಕ್ಷುಗಳೇ, ಆತನ ಪಾಪವು ಫಲ ನೀಡಿದೆ, ಆತ ಜೀವಿಸಿದ್ದರೂ ಇದೇರೀತಿ ನರಳುತ್ತಿದ್ದನು. ಈಗ ಆತನು ನರಕದಲ್ಲಿ ಉದಯಿಸಿದ್ದಾನೆ ಎಂದು ಹೇಳಿ ಮೇಲಿನ ಗಾಥೆಯನ್ನು ಹೇಳಿದರು.

dhammapada/yamaka vagga/1:9/the story of nanda

ಅಭಿವೃದ್ಧಿಯಿಲ್ಲದ ಮನಸ್ಸಿನಲ್ಲಿ ರಾಗವು ಪ್ರವೇಶಿಸುತ್ತದೆ
ಕೆಟ್ಟ ಛಾವಣಿಯ ಮನೆಯಲ್ಲಿ ಮಳೆಯು ನುಗ್ಗುವ ಹಾಗೆ ಅಭಿವೃದ್ಧಿ ಹೊಂದದ ಮನಸ್ಸಿನಲ್ಲಿ ರಾಗವು ನುಗ್ಗುತ್ತದೆ.     (13)
ಸುಭದ್ರವಾದ ಛಾವಣಿಯ ಮನೆಯಲ್ಲಿ ಮಳೆಯು ನುಗ್ಗದ ಹಾಗೆ ಅಭಿವೃದ್ಧಿ ಹೊಂದಿರುವ ಮನಸ್ಸಿನಲ್ಲಿ ರಾಗವು ನುಗ್ಗುವುದಿಲ್ಲ. (14)
ಗಾಥ ಪ್ರಸಂಗ 1:9
ನಂದ ಭಿಕ್ಷುವಿನ ಸಂಗತಿ
                ಒಮ್ಮೆ ಭಗವಾನರು ರಾಜಗೃಹದ ವೇಲುವನದಲ್ಲಿ ತಂಗಿದ್ದರು. ಆಗ ಅವರ ತಂದೆ ಶುದ್ಧೋದನರು ನಿರಂತರವಾಗಿ ಸಂದೇಶಕಾರರನ್ನು ಕಳುಹಿಸಿದರು. ಕಪಿಲವಸ್ತುವಿಗೆ ಅವರಿಗಾಗಿ ಆಹ್ವಾನ ನೀಡಿದರು. ಅದರಂತೆಯೇ ಭಗವಾನರು ದೊಡ್ಡ ಅರಹಂತರ ಸಮೂಹದೊಂದಿಗೆ ಪ್ರಯಾಣ ಬೆಳೆಸಿದರು.

                ಅವರು ಕಪಿಲವಸ್ತುವಿಗೆ ಪ್ರವೇಶಿಸಿದಾಗ ಅವರ ಬಂಧು-ಭಾಂದವರಿಗೆ ವಸ್ಸಂತರಜಾತಕ ತಿಳಿಸಿದರು. ಎರಡನೆಯದಿನ ಅವರು ನಗರವನ್ನು ಪ್ರವೇಶಿಸುವಾಗ ಜಾಗೃತರಾಗಿ, ಅಪ್ರಮಾದಿತರಾಗದಿರಿ, ಧರ್ಮದಿಂದ ಸುಚಾರಿತ್ರ್ಯದಿಂದ ಜೀವಿಸಿ, ಧರ್ಮಚಾರಿಯು ಈ ಲೋಕದಲ್ಲಿ ಮತ್ತು ಪರಲೋಕದಲ್ಲಿಯೂ ಸುಖಿಯಾಗಿ ಜೀವಿಸುವನು ಎಂದು ತಿಳಿಸಿದರು. ಅದನ್ನು ಕೇಳಿ ಶುದ್ದೋದನ ಮಹಾರಾಜರು ಸೋತಪತ್ತಿಫಲ ಪ್ರಾಪ್ತಿಮಾಡಿದರು. ಹಾಗೆಯೇ ಭಗವಾನರು ಅರಮನೆಯನ್ನು ಪ್ರವೇಶಿಸುವಾಗ ಸುಚ್ಚಾರಿತ್ರ್ಯದಿಂದ, ಧರ್ಮದಿಂದ ಜೀವಿಸಿ. ದುಚ್ಚಾರಿತ್ರ್ಯದ ಜೀವನ ನಡೆಸದಿರಿ. ಧಮ್ಮಾಚಾರಿಯು ಈ ಲೋಕದಲ್ಲಿ ಮತ್ತು ಪರಲೋಕದಲ್ಲೂ ಸುಖಿಯಾಗಿ ಜೀವಿಸುವನು ಎಂದು ನುಡಿದರು. ಈ ಗಾಥೆಯನ್ನು ಕೇಳಿದಾಗ ಶುದ್ದೋದನರು ಸಕದಾಗಾಮಿಫಲ ಪ್ರಾಪ್ತಿಮಾಡಿದರು ಮತ್ತು ಪ್ರಜಾಪತಿ ಗೋತಮಿ ಸೋತಪತ್ತಿಫಲ ಪಡೆದರು. ಭೋಜನದ ನಂತರ ಚಂದಾಕಿನ್ನರ ಜಾತಕ ಹೇಳಿದರು. ಆ ಜಾತಕದಲ್ಲಿ ರಾಹುಲಮಾತೆ (ಯಶೋಧರೆ)ಯ ಶ್ರೇಷ್ಠ ಸದ್ಗುಣಗಳ ಬಗ್ಗೆ ತಿಳಿಸಿದರು.
                ಮಾರನೆಯದಿನ ಬೋಧಿಸತ್ತರ ಮಲ ತಮ್ಮ ಮದುವೆಯ ದಿನದ ಸಂಭ್ರಮ ಆಚರಿಸುತ್ತಿದ್ದರು. ಭಗವಾನರು ನಂದರ ಮನೆಗೆ ಆಹಾರಕ್ಕೆ ಹೊರಟರು ಮತ್ತು ಪಿಂಡಪಾತ್ರೆಯನ್ನು ರಾಜಕುಮಾರ ನಂದರವರ ಕೈಗೆ ಇಟ್ಟರು. ನಂತರ ಭಗವಾನರು ಅದನ್ನು ತೆಗೆದುಕೊಳ್ಳದೆ ಹೊರಟರು. ಹೀಗಾಗಿ ನಂದರವರು ಅದನ್ನು ಹಿಂತಿರುಗಿಸಲು ಹಿಂದೆ ಹಿಂದೆ ಹೊರಟರು. ಅವರನ್ನು ವಿವಾಹವಾಗಲು ಸಿದ್ಧವಾಗಿದ್ದ ನವವಧು ರಾಜಕುಮಾರಿ ಜನಪದ ಕಲ್ಯಾಣಿಯು ರಾಜಕುಮಾರ ಬೇಗ ಹಿಂತಿರುಗಿ ಎಂದಳು. ಆದರೆ ವಿಹಾರದಲ್ಲಿ ರಾಜಕುಮಾರ ಭಿಕ್ಷುವಾಗಲು ಒಪ್ಪಿದರು.
                ಭಿಕ್ಷುವಾದರೂ ಸಹಾ ನಂದರವರ ಮನಸ್ಸು ಸದಾ ಜನಪದ ಕಲ್ಯಾಣಿಯ ಕಡೆಗೆ ವಾಲುತ್ತಿತತು. ಅವರ ಮನಸ್ಸು ದ್ವಂದ್ವದಲ್ಲಿ ಸಿಲುಕಿತ್ತು. ಇದನ್ನು ಅರಿತ ಭಗವಾನರು ನಂದರವರಿಗೆ ತಾವತಿಂಸ ಲೋಕದ ದೇವಿಯರನ್ನು ತೋರಿಸಿದರು. ಅವರ ಸೌಂದರ್ಯವು ಜನಪದ ಕಲ್ಯಾಣಿಗಿಂತ ಹಲವಾರುಪಟ್ಟು ಸೌಂದರ್ಯವುಳ್ಳವರಾಗಿದ್ದರು. ನಂದರವರು ಧಮ್ಮಜೀವನ ಪಾಲಿಸಿದರೆ ಅವರಲ್ಲಿ ಒಬ್ಬರನ್ನು ಪಡೆಯಬಹುದು ಎಂದು ಹೇಳಿದಾಗ ನಂದರು ಆನಂದದಿಂದ ಒಪ್ಪಿದರು. ಅವರು ಶ್ರೇಷ್ಠ ಜೀವನವನ್ನು ಪಾಲಿಸತೊಡಗಿದರು. ಆದರೆ ಸಹ ಭಿಕ್ಷುಗಳು ಹೆಣ್ಣಿಗಾಗಿ ಧಮರ್ಾಚರಣೆ ಮಾಡುವವ ಎಂದು ಹಿಯಾಳಿಸಿದಾಗ, ವ್ಯಂಗ್ಯ ಮಾಡಿದಾಗ ಆತ ನಾಚಿ, ಕೊನೆಗೆ ತನ್ನ ದೃಢ ಪರಿಶ್ರಮದಿಂದ ಅರಹತ್ವ ಪ್ರಾಪ್ತಿಮಾಡಿದರು. ಆದರೆ ಅರಹಂತರಲ್ಲಿ ಯಾವುದೇ ಬಯಕೆಯೇ ಇರುವುದಿಲ್ಲ. ಇನ್ನು ಹೆಣ್ಣಿನ ಬಯಕೆ ಎಲ್ಲಿ ಬರಬೇಕು. ಇದೆಲ್ಲವೂ ಭಗವಾನರಿಗೆ ಮೊದಲೇ ಗೊತ್ತಿತ್ತು. ಅವರು ದೇವಮಾನವರನ್ನು ಪಳಗಿಸುವುದರಲ್ಲಿ ನಿಸ್ಸೀಮರು. ಅವರು ಪ್ರತಿ ವ್ಯಕ್ತಿಯ ಪ್ರಚ್ಛನ್ನತೆಯಂತೆ ಪಳಗಿಸುತ್ತಿದ್ದರು.
                ಮುಂದೆ ಭಿಕ್ಷುಗಳು ನಂದರವರನ್ನು ಹೆಣ್ಣಿನ ಬಗ್ಗೆ ಕೇಳಿದಾಗ ಅವರು ನನ್ನಲ್ಲಿ ಯಾವುದೇ ಅಂಟುವಿಕೆ ಇಲ್ಲ ಎಂದರು. ಭಿಕ್ಷುಗಳಿಗೆ ಅನುಮಾನ ಮೂಡಿ ಭಗವಾನರಲ್ಲಿಗೆ ಈ ವಿಷಯ ತಿಳಿಸಿದಾಗ ಭಗವಾನರು ಮೇಲಿನ ಗಾಥೆ ಹೇಳಿ ನಂದರವರ ಹಿಂದಿನ ಮತ್ತು ಇಂದಿನ ಮನಸ್ಥಿತಿಯಂತೆ ಈ ಎರಡು ಗಾಥೆಗಳನ್ನು ನುಡಿದು ವಿವರಿಸಿದರು.