Thursday 29 January 2015

dhammapada/cittavagga/3.1/meghiya

ಚಿತ್ತವಗ್ಗ

ಜ್ಞಾನಿಯು ಚಿತ್ತವನ್ನು ಬಲಿಷ್ಠಗೊಳಿಸುತ್ತಾನೆ
ಚಿತ್ತವು ಚಂಚಲವೂ, ಚಪಲವೂ ಆಗಿದೆ. ರಕ್ಷಿಸಲು ದುಷ್ಕರವು, ನಿಯಂತ್ರಿಸಲು ಕಷ್ಟಕರವೂ ಆಗಿದೆ. ಆದರೆ ಮೇಧಾವಿಗಳು ಬಿಲ್ಲುಗಾರನು ಬಾಣವನ್ನು ನೇರವಾಗಿಸುವಂತೆ ಚಿತ್ತವನ್ನು ನೇರವಾಗಿಟ್ಟುಕೊಳ್ಳುತ್ತಾನೆ.  (33)
ಹೇಗೆ ನೀರಿನಿಂದ ಮೀನನ್ನು ಎತ್ತಿ ನೆಲದಲ್ಲಿ ಬಿಟ್ಟಾಗ ಹೇಗೆ ಚಡಪಟಿಸುವುದೋ ಹಾಗೆಯೇ ಚಿತ್ತವೂ ತಲ್ಲಣಗೊಳ್ಳುತ್ತದೆ. ಆದ್ದರಿಂದ ಮಾರನ ಇಂದ್ರೀಯ ಕ್ಷೇತ್ರವನ್ನು ವಜರ್ಿಸಬೇಕು.            (34)

ಗಾಥ ಪ್ರಸಂಗ 3:1
ಮೇಘಿಯನ ಅನಿಯಂತ್ರಣ ಸ್ಥಿತಿ
                ಒಮ್ಮೆ ಮೇಘಿಯ ಭಿಕ್ಷುವು ಆಹಾರದ ಸ್ವೀಕಾರದ ನಂತರ ಸುಂದರ ಮತ್ತು ಹಿತಕರವಾದ ಮಾವಿನ ತೋಪನ್ನು ನೋಡಿದನು. ಆತನು ಅಲ್ಲಿ ಧ್ಯಾನಿಸಲು ಇಚ್ಛಿಸಿದನು. ಆತನು ಭಗವಾನರಲ್ಲಿಗೆ ಬಂದು ಅಲ್ಲಿ ಹೋಗುವ ಅಪ್ಪಣೆ ಕೇಳಿದನು. ಭಗವಾನರು ಕಾಯುವಂತೆ ಹೇಳಿದರು. ಆದರೆ ಆತನು ಅತಿ ಆತುರ ವ್ಯಕ್ತಪಡಿಸಿದಾಗ ಆತನಿಗೆ ಕಳುಹಿಸಿಕೊಟ್ಟರು.
                ನಂತರ ಮೇಘೀಯ ಧ್ಯಾನಿಸಲು ಆರಂಭಿಸಿದನು. ಅಲ್ಲಿ ಇಡೀದಿನ ಕಳೆದನು. ಆದರೆ ಆತನ ಮನಸ್ಸು ರಾಗ, ದ್ವೇಷ ಮತ್ತು ಭೋಗದಲ್ಲಿ ಬಿದ್ದುದರಿಂದಾಗಿ ಆತನು ಯಶಸ್ವಿಯಾಗಲಿಲ್ಲ. ಆತ ಸಂಜೆ ಭಗವಾನರ ಬಳಿಗೆ ಮರಳಿ ವಿಷಯ ತಿಳಿಸಿದನು. ತನಗೆ ಆಗುವ ಚದುರುವಿಕೆ, ಕ್ಷೊಭೆ ತಿಳಿಸಿದನು.
                ಆಗ ಭಗವಾನರು ಹೀಗೆ ಹೇಳಿದರು ಮೇಘಿಯ, ನೀನು ದೊಡ್ಡ ತಪ್ಪು ಮಾಡಿರುವೆ. ನಾನು ಕಾಯಲು ಹೇಳಿದರೂ ಸಹಾ ನೀನು ಹೊರಟೆ, ಒಬ್ಬ ಭಿಕ್ಷುವು ಹೀಗೆ ಮಾಡಬಾರದಿತ್ತು. ಈ ರೀತಿಯಾಗಿ ಅವಿಧೇಯತೆ ಇದ್ದಲ್ಲಿ ಆತ ಎಂದಿಗೂ ತನ್ನ ಮನಸ್ಸನ್ನು ನಿಯಂತ್ರಿಸಲಾರ. ಏಕೆಂದರೆ ಚಿತ್ತವು ಚಂಚಲವಾಗಿದೆ ಮತ್ತು ಜ್ಞಾನಿಯು ಸದಾ ನಿಯಂತ್ರಿಸುತ್ತಾನೆ ಎಂದು ಹೇಳಿ ಮೇಲಿನ ಗಾಥೆಗಳನ್ನು ಹೇಳಿದರು. ಆಗ ಮೇಘಿಯನು ಸೋತಪನ್ನನಾದನು ಮತ್ತು ಇತರರು ಸಕದಾಗಾಮಿ ಮತ್ತು ಅನಾಗಾಮಿಯಾದರು

No comments:

Post a Comment