Thursday 29 January 2015

dhammapada/cittavagga/3.5/cittahatta

ಜಾಗೃತನಿಗೆ ಭಯವಿಲ್ಲ
ಯಾರ ಚಿತ್ತವು ಸ್ಥಿರವಲ್ಲವೋ, ಯಾರು ಸದ್ಧಮ್ಮವನ್ನು ಅರಿಯದವನೊ ಮತ್ತು ಯಾರ ಶ್ರದ್ಧೆಯು ಅಲುಗಾಡುವುದೋ, ಅಂತಹವರ ಪ್ರಜ್ಞೆಯು ಪರಿಪೂರ್ಣ ವಾದುದಲ್ಲ.        (38)
ಯಾರ ಚಿತ್ತವು (ರಾಗದಿಂದ) ನೆನೆಯದೋ, ಯಾರು (ದ್ವೇಷದಿಂದ) ದುಃಖಿತವಾಗುವುದಿಲ್ಲವೋ, ಯಾರು ಪಾಪ ಪುಣ್ಯಗಳಿಂದ ದಾಟಿ ನಿಂತಿರುವವರೋ, ಅಂತಹ ಜಾಗೃತನಿಗೆ ಭಯವೆಂಬುದಿಲ್ಲ.            (39)
ಗಾಥ ಪ್ರಸಂಗ 3:5
ಚಂಚಲಚಿತ್ತವುಳ್ಳ ಚಿತ್ತಹಟ್ಟನ ನಿರಂತರ ಸಾಹಸ

                ಶ್ರಾವಸ್ತಿಯ ಒಬ್ಬ ಮನುಷ್ಯ ಕಾಡಿನಲ್ಲಿ ತನ್ನ ಎತ್ತನ್ನು ಹುಡುಕುತ್ತಿದ್ದನು. ಆತನಿಗೆ ಹಸಿವು ಆಯಿತು ಮತ್ತು ಆತನು ಹಳ್ಳಿಯಲ್ಲಿನ ವಿಹಾರಕ್ಕೆ ಹೊರಟನು. ಅಲ್ಲಿ ಆತನಿಗೆ ತಿನ್ನಲು ಸ್ವಲ್ಪ ಆಹಾರವನ್ನು ನೀಡಲಾಯಿತು. ಅಲ್ಲಿ ಆತನು ಆಹಾರ ತಿನ್ನುತ್ತಿರುವಾಗ ಆತನಿಗೆ ಒಂದು ಯೋಚನೆ ಹೊಳೆಯಿತು. ಅದು ಏನೆಂದರೆ ಆತ ಕಷ್ಟಪಟ್ಟು ದುಡಿದು ಸಹ ಇಂತಹ ಆಹಾರವನ್ನು ಸೇವಿಸಿರಲಿಲ್ಲ. ಆದ್ದರಿಂದ ಭಿಕ್ಷುವಾಗುವುದೇ ಉತ್ತಮ ಉಪಾಯ ಎಂದು ಯೋಚಿಸಿದನು.
                ಆದ್ದರಿಂದ ಅತನು ಭಿಕ್ಷುಗಳಿಗೆ ತನ್ನನ್ನು ಸಂಘಕ್ಕೆ ಸೇರಿಸಿಕೊಳ್ಳಿ ಎಂದು ಕೇಳಿಕೊಂಡನು. ವಿಹಾರದಲ್ಲಿ ಸೇರಿಕೊಂಡ ಮೇಲೆ ಆತನಿಗೆ ತಿನ್ನಲು ಆಹಾರ ದೊರೆತು ಸ್ವಲ್ಪ ಕಾಲದಲ್ಲೇ ಆತನ ತೂಕ ಹೆಚ್ಚಿತು. ಕೆಲದಿನಗಳ ನಂತರ ಆತನಿಗೆ ಭಿಕ್ಷಾಟನೆಯಲ್ಲಿ ಆಸಕ್ತಿ ಕುಗ್ಗಿ ಆತನು ಗೃಹಸ್ಥನಾದನು. ಕೆಲದಿನಗಳ ನಂತರ ಆತನಿಗೆ ಗೃಹಸ್ಥ ಜೀವನ ದುಷ್ಕರವೆನಿಸಿ ಆತ ಮತ್ತೆ ಕೇಳಿಕೊಂಡು ಭಿಕ್ಷುವಾದನು. ಕೆಲದಿನಗಳ ನಂತರ ಮತ್ತೆ ಆತನಿಗೆ ಗೃಹಸ್ಥ ಜೀವನ ಪ್ರಿಯವೆನಿಸಿ ಮತ್ತೆ ಗೃಹಸ್ಥನಾದನು. ಇದೇರೀತಿ ಆತನು ಆರುಬಾರಿ ಭಿಕ್ಷುವಾಗಿ ಆರುಬಾರಿ ಗೃಹಸ್ಥನಾದನು. ಆತನು ಈ ರೀತಿ ವತರ್ಿಸಿದ್ದು ಏಕೆಂದರೆ ಸಾಮಾಜಿಕ ಪರಿಸ್ಥಿತಿಯ ಚಾಟಿಯ (ಹಟ್ಟ) ತರಹ ಪ್ರತಿಕೂಲತೆಯಿಂದ. ಆದ್ದರಿಂದ ಆತನು ಹೆಸರು ಚಿತ್ತಹಟ್ಟನೆಂದು ಕರೆಯಲ್ಪಟ್ಟನು. ಆತನ ಈ ರಿತಿಯ ವರ್ತನೆಯಿಂದ ಆತನ ಪತ್ನಿಯು ಗಭರ್ಿಣಿಯಾದಳು. ಆತನಲ್ಲಿ ನಿಜಕ್ಕೂ ವೈರಾಗ್ಯ ಉಂಟಾಗಿರಲಿಲ್ಲ. ಆದರೆ ತನ್ನ ಸ್ವಲಾಭಕ್ಕಾಗಿ ಆತನು ಈ ರೀತಿ ಮಾಡುತ್ತಿದ್ದನು. ಇದರ ಪರಿಣಾಮವಾಗಿ ಆತನು ಗೃಹಸ್ಥನಾಗಿ ಅಥವಾ ಭಿಕ್ಷುವಾಗಿಯು ಸುಖಿಯಾಗಿರುತ್ತಿರಲಿಲ್ಲ.
                ಒಂದುದಿನ ಆತನು ತನ್ನ ಮನೆಯಲ್ಲಿ ಆತನ ಪತ್ನಿಯು ನಿದ್ರಿಸುತ್ತಿರುವಾಗ ಕೋಣೆಯೊಳಕ್ಕೆ ಹೋದನು. ಆಕೆಯು ಶಬ್ದ ಬರುವಂತೆ ಗೊರಕೆ ಹೊಡೆಯುತ್ತಿದ್ದಳು. ಆಕೆಯ ಬಾಯಿಂದ ಜೊಲ್ಲು ಸೋರತೊಡಗಿತ್ತು, ಆಕೆಯ ಬಾಯಿ ತೆರೆದಿತ್ತು. ಆಗ ಅತನಿಗೆ ಶರೀರದ ಕುರೂಪ ಜ್ಞಾನ ಉಂಟಾಯಿತು (ಅಶುಭಾ ಜ್ಞಾನ) ಮತ್ತು ಆತನು ಈ ರೀತಿ ಚಿಂತಿಸಿದನು. ನಾನು ಅನೇಕಬಾರಿ ಭಿಕ್ಷುವಾದರೂ ಅನೇಕಬಾರಿ ಗೃಹಸ್ಥನಾದದ್ದು ಈ ಸ್ತ್ರೀಯ ಆಕರ್ಷಣೆಯಿಂದಲೇ ಅಲ್ಲವೇ? ಈಬಾರಿ ವೈರಾಗ್ಯದಿಂದ ಆತನು ಮತ್ತೆ 7ನೆಯ ಬಾರಿ ಭಿಕ್ಷುವಾಗಲು ಹೊರಟನು. ಆತನ ಪದೇಪದೇ ಅಶುಭಾ, ಅನಿತ್ಯ, ಅತೃಪ್ತಿಕರ, ದುಃಖಕರ ಎಂದು ಹೇಳಿಕೊಳ್ಳುತ್ತಾ ವಿಹಾರ ತಲುಪುವ ಮುನ್ನ ಸೋತಪನ್ನನಾದನು.

                ಆತನು ವಿಹಾರಕ್ಕೆ ಬಂದು ಭಿಕ್ಷುವಾಗಲು ಅಪ್ಪಣೆ ಕೇಳಿದನು. ಆದರೆ ಅವರು ನಿರಾಕರಿಸಿದರು. ಆದರೆ ನಿರಂತರ ಒತ್ತಾಯ ಮಾಡಿದಾಗ ಅವರು ಭಿಕ್ಷುವಾಗಿ ಸೇರಿಸಿಕೊಂಡರು. ಅದಾದ ಸ್ವಲ್ಪಕಾಲದಲ್ಲೇ ಆತನು ಅರಹಂತನಾದನು. ಬೇರೆ ಭಿಕ್ಷುಗಳಿಗೆ ಆಶ್ಚರ್ಯವಾಗಿ ಕಾರಣ ಕೇಳಿದರು. ನಾನು ಗೃಹಕ್ಕೆ ತೆರಳುತ್ತಿದ್ದಾಗ ನನ್ನಲ್ಲಿ ಅಂಟುವಿಕೆಯಿತ್ತು. ಆದರೆ ಈಗ ಅಂಟುವಿಕೆ ಕತ್ತರಿಸಲ್ಪಟ್ಟಿದೆ. ಭಿಕ್ಷುಗಳು ಈ ವಿಷಯವನ್ನು ಭಗವಾನರಿಗೆ ತಿಳಿಸಿದರು. ಆಗ ಭಗವಾನರು ಹೀಗೆ ನುಡಿದರು. ಚಿತ್ತಹಟ್ಟನ ಚಿತ್ತವು ಹಿಂದೆ ಸ್ಥಿರವಾಗಿರಲಿಲ್ಲ ಮತ್ತು ಆತನು ಧಮ್ಮವನ್ನು ಅಷ್ಟಾಗಿ ತಿಳಿದಿರಲಿಲ್ಲ. ಆದರೆ ಈಗ ಅರಹಂತನಾಗಿ ಎಲ್ಲಾ ಬಗೆಯ ಅಂಟುವಿಕೆಯನ್ನು ತ್ಯಜಿಸಿದ್ದಾನೆ. ಆಗ ಭಗವಾನರು ಮೇಲಿನ ಗಾಥೆಗಳನ್ನು ನುಡಿದರು. 

No comments:

Post a Comment