Saturday 7 March 2015

dhammapada/panditavagga/6.9/dhammika

ಮಿಥ್ಯಾ ಮಾರ್ಗದಿಂದ ಯಶಸ್ಸು ಶೋಧಿಸದಿರಿ
ತನಗಾಗಿಯಾಗಲಿ ಅಥವಾ ಪರರಿಗಾಗಿ ಆಗಲಿ ಆತನು ಪುತ್ರ ಇಚ್ಛೆಯಾಗಲಿ, ಧನದ ಇಚ್ಛೆಯಾಗಲಿ ಅಥವಾ ರಾಷ್ಟ್ರವನ್ನೇ ಆಗಲಿ ಇಚ್ಛಿಸದಿರಲಿ, ಅಧರ್ಮದಿಂದ ತನ್ನ ಯಶಸ್ಸು ಶೋಧಿಸದಿರಲಿ. ಹಾಗೆ ಆಚರಿಸಿದಾಗ ಮಾತ್ರ ನಿಜಕ್ಕೂ ಆತನು ಶೀಲವಂತ, ಪ್ರಜ್ಞಾವಂತ ಮತ್ತು ಧಾಮರ್ಿಕನಾಗುತ್ತಾನೆ     (84)
ಗಾಥ ಪ್ರಸಂಗ 6.9

ಧಾಮ್ಮಿಕರು ಯೋಗ್ಯವಾಗಿ ಜೀವಿಸುವರು

                ಧಮ್ಮಿಕ (ಧಾಮರ್ಿಕ) ಎಂಬುವವನು ಶ್ರಾವಸ್ತಿಯಲ್ಲಿ ತನ್ನ ಪತ್ನಿಯೊಂದಿಗೆ ಸುಖವಾಗಿ  ಜೀವಿಸುತ್ತಿದ್ದನು. ಮುಂದೆ ಆತನಲ್ಲಿ ಪ್ರಜ್ಞಾಶೀಲತೆಯು ಅಭಿವೃದ್ಧಿಯಾಗಿ ಪ್ರಾಪಂಚಿಕ ಸುಖಭೋಗಗಳು ಕ್ಷುಲ್ಲಕವೆನಿಸಿ, ಮತ್ತಷ್ಟು ಜನ್ಮಗಳನ್ನು ವ್ಯರ್ಥವಾಗಿ, ಮೂಢವಾಗಿ, ದುಃಖಭರಿತರಾಗಿ ಪಡೆಯಬಾರದು ಎಂದು ನಿರ್ಧರಿಸಿದನು. ಈ ಜನ್ಮವನ್ನೇ ಕೊನೆಯ ಜನ್ಮವಾಗಿ ಮಾಡಬೇಕು ಎಂದು ಅತನು ತೀಮರ್ಾನಿಸಿದನು. ಗೃಹಸ್ಥನಾಗಿಯೇ ಅಂತಹ ಪರಿಶುದ್ಧತೆ, ಏಕಾಂತತೆ, ಸಾಧನೆಗೆ ಕಾಲವು ಸಿಗಲಾರದು ಎಂದು ಅರಿವಾಗಿ ಆತನು ಭಿಕ್ಷುವಾಗಲು ನಿರ್ಧರಿಸಿದನು. ತನ್ನ ಇಚ್ಛೆಯನ್ನು ಆತನು ತನ್ನ ಪತ್ನಿಗೆ ವಿವರಿಸಿದನು. ಆದರೆ ಆತನ ಹೆಂಡತಿಯು ತನ್ನ ಮಗುವು ಜನ್ಮಿಸುವವರೆಗೂ ಹಾಗೆ ಮಾಡಬೇಡ ಎಂದು ಬೇಡಿಕೊಂಡಳು. ಆಗ ಆತನು ಹಾಗೆಯೇ ನಡೆದುಕೊಂಡಾಗ ಮಗುವು ನಡೆಯುವವರೆಗೆ ತಮ್ಮನ್ನು ತೊರೆಯದಿರು ಎಂದು ಕೇಳಿಕೊಂಡಳು. ಆಗ ಆತನಿಗೆ ಈ ರೀತಿಯ ಜ್ಞಾನೋದಯವಾಯಿತು; ನಾನು ಸಂಸಾರ ದುಃಖದಿಂದ ಪಾರಾಗಬೇಕಾದರೆ ನಾನು ಶ್ರಮಿಸಲೇಬೇಕಾಗಿದೆ. ಪರರಿಗೋಸ್ಕರ ನಾನು ಇಂತಹ ಅಮೂಲ್ಯ ಅವಕಾಶವನ್ನು ಕಳೆದುಕೊಳ್ಳಲಾರೆ, ನಂತರ ನರಳಲಾರೆ ಎಂದು ನಿರ್ಧರಿಸಿ ಆತನು ಭಿಕ್ಷುವಾದನು. ಹಾಗೆಯೇ ಸಾಧನೆಯಿಂದ ಆತನು ಅರಹಂತನಾದನು.
                ಮುಂದೆ ಆತನು ಪತ್ನಿಪುತ್ರನಿಗೆ ಬೋಧಿಸಲು ಬಂದಿದ್ದಾಗ, ಆತನ ಪುತ್ರನಿಗೂ ಜ್ಞಾನೋದಯ ಉಂಟಾಗಿ ಆತನೂ ಭಿಕ್ಷುವಾಗಿ ಅರಹಂತ ಸಾಧಿಸಿದನು. ಗಂಡ, ನಂತರ ಮಗ ಇವರೀರ್ವರೂ ಅರಹಂತರಾಗಿದ್ದನ್ನು ಕಂಡು ಆಕೆಗೂ ವೈರಾಗ್ಯ ಉಂಟಾಗಿ, ಆಕೆಯೂ ಭಿಕ್ಷುಣಿಯಾಗಿ ಮುಂದೆ ಸಾಧನೆಯಿಂದ ಅರಹಂತೆಯಾದಳು.

                ಭಿಕ್ಷುಗಳಲ್ಲಿ ಇದು ಚಚರ್ೆಯ ವಿಷಯವಾದಾಗ ಭಗವಾನರು ಅಲ್ಲಿ ಬಂದರು ಮತ್ತು ಈ ಮೇಲಿನ ಗಾಥೆಯನ್ನು ನುಡಿದರು. 

No comments:

Post a Comment