Friday 6 February 2015

dhammapada/puppavagga/4.3/vidudabha

ಸುಖಾನ್ವೇಷಿಯು ಕೊಚ್ಚಿ ಹೋಗುತ್ತಾನೆ
ಇಂದ್ರೀಯ ಸುಖಗಳೆಂಬ ಹೂವುಗಳನ್ನು ಸಂಗ್ರಹಿಸುತ್ತಿರುವವನಿಗೆ ಪೇಚಾಟದ ಮನದವನಿಗೆ, ಮಲಗಿರುವ ಹಳ್ಳಿಯನ್ನು ಪ್ರವಾಹವು ಕೊಚ್ಚಿ ಹೋಗುವ ಹಾಗೆ ಮರಣವು ಹೊತ್ತಿಕೊಂಡು ಹೋಗುತ್ತದೆ       (47)
ಗಾಥ ಪ್ರಸಂಗ 4:3
ಸೇಡಿನ ಪರಿಣಾಮ ಭೀಕರ ದುಃಖ

                ಕೋಸಲ ದೇಶದ ರಾಜ ಪಸೇನದಿಗೆ ಬುದ್ಧರಿಗೆ ಪ್ರಿಯನಾಗಬೇಕೆಂದು ಬಯಸುತ್ತಿದ್ದನು. ಅದಕ್ಕಾಗಿ ಆತನು ಶಾಕ್ಯ ವಂಶದಲ್ಲಿ ಮದುವೆಯಾಗುವೆನೆಂದು ನಿರ್ಧರಿಸಿದನು. ಇದು ಆತನ ವೈಯಕ್ತಿಕ ನಂಬಿಕೆಯಾಗಿತ್ತು. ಇಂತಹ ಸಂದೇಶವನ್ನು ಆತನು ಕಳುಹಿಸಿದನು. ಆದರೆ ಶಾಕ್ಯರಿಗೆ ಕೋಶಲರಾಜನು ತಮಗೆ ಸಮನಲ್ಲ ಎಂಬ ನಂಬಿಕೆಯಿತ್ತು. ಆದ್ದರಿಂದ ಅವರು ಆತನಿಗೆ ತಮ್ಮ ಹೆಣ್ಣು ನೀಡದಿರಲು ನಿರ್ಧರಿಸಿದರು. ಆದರೆ ಪಸೇನದಿಯ ಪರಾಕ್ರಮದ ಬಗ್ಗೆ ಅವರಿಗೆ ಹೆದರಿಕೆಯಿತ್ತು. ಆದ್ದರಿಂದ ಅವರೊಂದು ಉಪಾಯ ಮಾಡಿದರು. ಶಾಕ್ಯ ವಂಶಜರಾದ ಮಹಾನಾಮ ದಾಸಿಯೊಂದಿಗೆ ಜನಿಸಿದ ಸುಂದರ ಕನ್ಯೆಯಾದ ವಾಸಭಖತ್ತಿಯಾಳನ್ನೇ ಶಾಕ್ಯ ರಾಜಕುಮಾರಿ ಎಂದು ತೋರಿಸಿ ಸತ್ಯದ ಅರಿವಿಲ್ಲದ ಪಸೇನದಿಗೆ ಕೊಟ್ಟು ವಿವಾಹ ಮಾಡಿದರು. ಪಸೇನದಿಯು ಆಕೆಯನ್ನು ತನ್ನ ರಾಣಿಯರಲ್ಲಿ ಒಬ್ಬಳಾಗಿ ಸ್ಥಾನ ನೀಡಿದರು. ಅವರಿಗೆ ಜನಿಸಿದ ರಾಜಕುಮಾರನೇ ವಿಡೂಡಭ, ಆತನು ಯುವಕನಾದಾಗ ಒಮ್ಮೆ ತನ್ನ ತಾಯಿಯ ಊರಾದ ಕಪಿಲವಸ್ತುವಿಗೆ ಹೊರಟನು.
                ಆದರೆ ವಂಶ ಅಹಂಕಾರದಿಂದ ಕೂಡಿದ ಶಾಕ್ಯರು ವಿಡುಡವನಿಗಿಂತ ಕಿರಿಯರಾದ ರಾಜಕುಮಾರರನ್ನೆಲ್ಲಾ ದೂರದ ಹಳ್ಳಿಗೆ ಕಳುಹಿಸಿದರು. ಏಕೆಂದರೆ ಅವರು ವಿಡುಡಭನಿಗೆ ವಂದಿಸಬಾರದೆಂಬ ಕಾರಣದಿಂದ ಹಾಗೇ ಮಾಡಿದರು. ವಿಡುಡಭನಿಗೆ ಕೆಲಕಾಲ ಸತ್ಕಾರ ಔತಣ ಸಿಕ್ಕಿತು. ನಂತರ ಅವರೆಲ್ಲರೂ ಕೋಶಲಕ್ಕೆ ಹಿಂತಿರುಗುವಾಗ, ಅವರಲ್ಲಿ ಒಬ್ಬನು ಏನನ್ನು ತೆಗೆದುಕೊಳ್ಳಲು ಮರೆತಿದ್ದನು. ಅದನ್ನು ಪಡೆಯಲು ಆತನು ಅರಮನೆಗೆ ಹಿಂತಿರುಗಿದಾಗ ಅಲ್ಲಿನ ದಾಸಿಯೊಬ್ಬಳು ವಿಡೂಡಭ ಕುಳಿತಿದ್ದ ಆಸನವನ್ನು ಹಾಲಿನಿಂದ ತೊಳೆಯುತ್ತಿದ್ದಳು. ತೊಳೆಯುತ್ತ ಆಕೆಯು ಆತನನ್ನು ಹೀಗೆ ನಿಂದಿಸಿದಳು ಇದೇ ಆ ಸ್ಥಳ, ಅದರಮೇಲೆ ಆ ದಾಸಿಪುತ್ರನು ಕುಳಿತಿದ್ದ... ಇದನ್ನು ಕೇಳಿದ ವಿಡೂಡಭನ ಸ್ನೇಹಿತನಿಗೆ ಆಶ್ಚರ್ಯವಾಯಿತು. ಆತ ಉಪಾಯದಿಂದ ಆಕೆಯನ್ನು ವಿಚಾರಿಸಿದಾಗ ಆಕೆಯು ಮಹಾನಾಮ ಮತ್ತು ದಾಸಿಯ ಪುತ್ರಿಯೆ ವಾಸಭಖತ್ತಿಯಾ ಆಕೆಯ ಮಗನೇ ಈ ವಿಡೂಡಭ ಎಂದು ವಿವರವಾಗಿ ತಿಳಿಸಿದಳು.
                ಇದನ್ನು ಕೇಳಿದ ವಿಡೂಡಭನಿಗೆ ಅತ್ಯಂತ ಕ್ರೋಧ ಉಂಟಾಯಿತು. ಆತ ಈ ರೀತಿ ಪ್ರತಿಜ್ಞೆ ಮಾಡಿದನು ನಾನು ಮುಂದೆ ರಾಜನಾಗುತ್ತೇನೆ. ಆಗ ನನ್ನ ಪೀಠವನ್ನು ಹಾಲಿನಿಂದ ತೊಳೆದ ಶಾಕ್ಯರ ಸಮೂಹವನ್ನೇ ಸಾಮೂಹಿಕ ಹತ್ಯೆ ಮಾಡುವೆ ಅದರಂತೆಯೇ ಅತ ಮುಂದೆ ಮಹಾನಾಮ ಮತ್ತು ಕೆಲವು ಪ್ರೀತಿಪಾತ್ರರನ್ನು ಬಿಟ್ಟು ಅತ ಎಲ್ಲರನ್ನು ಸಾಮೂಹಿಕ ಹತ್ಯೆ ಮಾಡುತ್ತಾನೆ.
                ನಂತರ ಆತ ತನ್ನ ರಾಜ್ಯದೆಡೆ ಹೊರಡುವಾಗ ಅಚಿರವತಿ ನದಿಯ ದಡದಲ್ಲಿ ಬಿಡಾರವನ್ನು ಹೂಡಿದನು. ಆದರೆ ಆ ರಾತ್ರಿ ಭೀಕರ ಮಳೆಯು ಸುರಿದು, ನದಿಯು ಉಕ್ಕಿ ಪ್ರವಾಹವು ಪ್ರಬಲವಾಗಿ ವಿಡೂಡಭನ ಬಿಡಾರಕ್ಕೆ ಅಪ್ಪಳಿಸಿ ಎಲ್ಲರನ್ನೂ ತನ್ನಲ್ಲಿ ಸೆಳೆದುಕೊಂಡು ಅವರ ಕತೆ ಮುಗಿಸಿತು.
                ಬುದ್ಧರ ಬಳಿಗೆ ಈ ಎರಡು ಘಟನೆಗಳು ಕೇಳಿಬಂದಿತು. ಆಗ ಭಗವಾನರು ಶಾಕ್ಯರ ಹಿಂದಿನ ಜನ್ಮದ ವೃತ್ತಾಂತ ತಿಳಿಸಿದರು. ಅವರು ಹಿಂದಿನ ಜನ್ಮದಲ್ಲಿ ನದಿಗೆ ವಿಷಬೆರೆಸಿ ಸಹಸ್ರಾರು ಮೀನಿಗಳಿಗೆ ಸಾಮೂಹಿಕ ಹತ್ಯೆ ಮಾಡಿದ್ದರು. ಅದರ ಪರಿಣಾಮವೇ ಈ ಜನ್ಮದಲ್ಲಿ ಅವರು ಸಾಮೂಹಿಕವಾಗಿ ಕೊಲ್ಲಲ್ಪಟ್ಟರು.

                ನಂತರ ಭಗವಾನರು ಈ ಮೇಲಿನ ಗಾಥೆ ನುಡಿದರು. 

No comments:

Post a Comment