Friday 6 February 2015

dhammapada/puppavagga/4,8/visaaka

ಸಾಧ್ಯವಾದಷ್ಟು ಪುಣ್ಯ ಕಾರ್ಯಗಳನ್ನು ಮಾಡಲಿ
ಹೇಗೆ ಪುಷ್ಪರಾಶಿಯಿಂದ ಬಹು ಮಾಲೆಗಳನ್ನು ಮಾಡಬಹುದೋ, ಹಾಗೆಯೇ ಜನನ-ಮರಣ ಅನುಭವಿಸುವ ಮನುಷ್ಯ ಸಹಾ ಅನೇಕ ಕುಶಲ (ಪುಣ್ಯ) ಕಾರ್ಯಗಳನ್ನು ಮಾಡಬಹುದು.          (53)
ಗಾಥ ಪ್ರಸಂಗ 4:8
ಪರಮಶ್ರದ್ಧಾಳು ಉಪಾಸಿಕೆ ವಿಸಾಖ

                ವಿಶಾಖಳು ಭದ್ದಿಯಾ (ಧನಂಜಯ)ನ ಮಗಳು ಮತ್ತು ಮೆಂಡಕನ ಮೊಮ್ಮಗಳಾಗಿದ್ದಳು. ಆಕೆಯ ತಾಯಿಯ ಹೆಸರು ಸುಮನದೇವಿ. ಮೆಂಡಕನು ಬಿಂಬಸಾರನ ಸಾಮ್ರಾಜ್ಯದ ಐವರು ಐಶ್ವರ್ಯವಂತರಲ್ಲಿ ಒಬ್ಬನಾಗಿದ್ದನು. ವಿಸಾಖಳು ಏಳು ವರ್ಷದವಳು ಆಗಿದ್ದಾಗ ಬುದ್ಧರು ಭದ್ದಿಯನ ಬಳಿ ಬಂದಿದ್ದರು. ಆ ಸಂದರ್ಭದಲ್ಲಿ ಸಿರಿವಂತ ಮೆಂಡಕ ವಿಸಾಖ ಮತ್ತು ಆಕೆಯ ಸಖಿಯರಿಂದ ಬುದ್ಧರಿಗೆ ವಂದಿಸುವಂತೆ ಮಾಡಿದ್ದನು. ಆಗ ಬುದ್ಧರ ಧಮ್ಮವನ್ನು ಆಲಿಸಿದ ಆಕೆ, ಮೆಂಡಕ ಮತ್ತು ಆಕೆಯ ಎಲ್ಲಾ ಸಖಿಯರು ಸೋತಪತ್ತಿ ಫಲ ಪಡೆದರು.
                ವಿಸಾಖ ಯುವತಿಯಾದಾಗ ಆಕೆಯ ವಿವಾಹವು ಮಿಗಾರನ ಮಗ ಪುಣ್ಣವರ್ಧನನೊಡನೆ ಆಯಿತು. ಆ ಸಂದರ್ಭದಲ್ಲಿ ಧನಂಜಯನು ತನ್ನ ಮಗಳಿಗೆ ಈ ಬುದ್ದಿವಾದ ನೀಡಿದನು. ಚಾಡಿ ಹೇಳಬೇಡ, ಪರರ ವದಂತಿ ಕೇಳಬೇಡ, ಹಿಂತಿರುಗಿಸದಿದ್ದರೂ ಸಹಾಯ ಮಾಡು, ಹಿರಿಯರಿಗೆ ಎದ್ದು ಗೌರವ ನೀಡು, ಎಲ್ಲರಿಗೆ ಬಡಿಸಿ ತಿನ್ನು, ಎಲ್ಲಾ ಕರ್ತವ್ಯ ಮುಗಿಸಿ ನಿದ್ರಿಸು, ಗಂಡ ಅತ್ತೆ-ಮಾವರೊಂದಿಗೆ ಎಚ್ಚರಿಕೆಯಿಂದ ವತರ್ಿಸು ಮತ್ತು ಅವರನ್ನು ದೇವತೆಗಳಂತೆ ಕಾಣು.
                ಒಮ್ಮೆ ಮಿಗಾರ ತಿನ್ನುತ್ತಿರುವಾಗ ಭಿಕ್ಷುವೊಬ್ಬನು ಅಹಾರಕ್ಕಾಗಿ ನಿಂತನು. ಆದರೆ ಮಿಗಾರನು ಅದನ್ನು ಪೂರ್ಣವಾಗಿ ಅಲಕ್ಷಿಸಿದನು. ಇದನ್ನು ಕಂಡ ವಿಸಾಖ ಭಿಕ್ಷುವಿಗೆ ಈ ರೀತಿ ಹೇಳಿದಳು ಕ್ಷಮಿಸಿ ಪೂಜ್ಯರೇ, ನನ್ನ ಮಾವನವರು ಹಳಸಿದ್ದನ್ನು ಮಾತ್ರ ತಿನ್ನುತ್ತಿರುವರು ಇದನ್ನು ಕೇಳಿ ಮಿಗಾರನಿಗೆ ಅತಿ ಕ್ರೋಧವುಂಟಾಗಿ ಆಕೆಯನ್ನು ಮನೆ ಬಿಟ್ಟು ಹೋಗು ಎಂದನು. ಆದರೆ ವಿಸಾಖಲು ಹೊರಗೆ ಹೋಗಲಿಲ್ಲ. ಬದಲಾಗಿ ಆಕೆ ಎಂಟು ಜನ ಶ್ರೀಮಂತರನ್ನು ತನ್ನ ತಂದೆಗೆ ಕರೆತರಲು ಕಳುಹಿಸಿದಳು. ಏಕೆಂದರೆ ಆಕೆ ದೋಷಿಯೋ ಅಥವಾ ನಿದರ್ೊಷಿಯೋ ತಿಳಿಯಲೆಂದು. ಅವರು ಬಂದು ಆಕೆಗೆ ಕಾರಣ ಕೇಳಿದರು. ಅದಕ್ಕೆ ಆಕೆ ಹೀಗೆಂದಳು :
                ಭಿಕ್ಷುವು ಬಂದು ನಿಂತಿದ್ದರೂ ಸಹಾ ಅವರು ತಿನ್ನುವುದನ್ನು ಕಂಡ ನನಗೆ ಹೀಗೆನಿಸಿತು. ಏನೆಂದರೆ ಇವರು ಹಿಂದಿನ ಜನ್ಮದ ಫಲ ಮಾತ್ರ ಅನುಭವಿಸುತ್ತಿದ್ದಾರೆ, ಈಗ ಯಾವ ಹೊಸ ಪುಣ್ಯಕರ್ಮ ಮಾಡುತ್ತಿಲ್ಲ. ಆದ್ದರಿಂದ ನಾನು ಅವರಿಗೆ ಹಳಸಿದ್ದನ್ನು ತಿನ್ನುತ್ತಿದ್ದಾರೆ ಎಂದು ಹೇಳಿದೆ ಎಂದು ನುಡಿದಾಗ ಅಲ್ಲಿ ನೆಲೆಸಿದ್ದ ಹಿರಿಯರು ಆಕೆಯನ್ನು ನಿದರ್ೊಷಿಯೆಂದು ತೀಪರ್ಿತ್ತರು.
                ನಂತರ ವಿಸಾಖಳು ನಾನು ಬುದ್ಧ ಭಗವಾನರಲ್ಲಿ ಅಚಲ ಶ್ರದ್ಧೆಯನ್ನು ಹೊಂದಿರುವವಳು. ಅವರಿಗೆ, ಭಿಕ್ಷುಗಳಿಗೆ ದಾನ ನೀಡದ ಮನೆಯಲ್ಲಿ ನಾನು ವಾಸಿಸಲಾರೆ. ನನಗೆ ಬುದ್ಧರಿಗೆ ಮತ್ತು ಭಿಕ್ಷುಗಳಿಗೆ ದಾನ ನೀಡಲು ಅನುಮತಿ ಬೇಕು ಎಂದಾಗ ಅವರೆಲ್ಲರೂ ಆಕೆಯ ನಿಯಮಗಳಿಗೆ ಒಪ್ಪಿದರು.
                ನಂತರ ಆಕೆಯು ಬುದ್ಧರಿಗೆ ಮತ್ತು ಭಿಕ್ಷು ಸಂಘಕ್ಕೆ ಆಹ್ವಾನಿಸಿದಳು. ಆ ದಾನ ಸಂದರ್ಭದಲ್ಲಿ ಆಕೆ ತನ್ನ ಮಾವನಿಗೂ ಆಹ್ವಾನಿಸಿದಳು, ಆದರೆ ಆತ ಬರಲಿಲ್ಲ. ನಂತರ ಬೋಜನದ ನಂತರ ಬುದ್ಧರ ಬೋಧನೆಯನ್ನು ಆಲಿಸಲು ಆಕೆ ಮಾವನಿಗೆ ಆಹ್ವಾನಿಸಿದಳು. ಮಾವನಿಗೂ ಹೋಗಬೇಕೆನಿಸಿತು. ಆದರೆ ನಿಗಂಠರು ಆತನಿಗೆ ಹೋಗಲು ಬಿಡಲಿಲ್ಲ. ಆದರೆ ಆತ ಹೋಗಲು ಅಪೇಕ್ಷಿಸಿದಾಗ ಪರದೆಯ ಹಿಂದೆ ಧಮ್ಮ ಆಲಿಸಲು ಅವರು ಅಪ್ಪಣೆಯಿತ್ತರು. ಆದರೆ ಆತನು ಬುದ್ಧ ಧಮ್ಮ ಆಲಿಸಿದಾಗ ಸೋತಪತ್ತಿ ಫಲ ಪಡೆದನು. ಆತನಿಗೆ ಅತ್ಯಧಿಕ ಆನಂದವುಂಟಾಯಿತು. ಇದಕ್ಕೆ ಕಾರಣಳಾದ ಸೊಸೆಗೆ ಆತ ಸ್ತುತಿಸಿ ಆಕೆಯನ್ನು ತನ್ನ ಮಾತೆಯೆಂದು ಘೋಷಿಸಿದನು. ಅಂದಿನಿಂದ ಆಕೆಯನ್ನು ಮಿಗಾರಮಾತೆಯೆಂದು ಸಹಾ ಕರೆಯಲಾರಂಭಿಸಿದರು.
                ವಿಸಾಖಳಿಗೆ 10 ಗಂಡು ಮತ್ತು 10 ಹೆಣ್ಣು ಮಕ್ಕಳು ಹುಟ್ಟಿದರು. ಅವರಿಗೂ ಸಹಾ ಮಕ್ಕಳಾದರು. ವಿಸಾಖಳಿಗೆ ಆಕೆಯ ತಂದೆಯು ಮದುವೆಯ ದಿನದಂದು ಅತ್ಯಮೂಲ್ಯದ ಚಿನ್ನ, ರತ್ನಗಳಿಂದ ಕೂಡಿದ ದೊಡ್ಡ ಆಭರಣವೊಂದನ್ನು ಉಡುಗೊರೆಯಾಗಿ ನೀಡಿದ್ದನು. ಒಂದುದಿನ ಆಕೆಯು ಅದನ್ನು ಧರಿಸಿ ವಿಹಾರಕ್ಕೆ ಬಂದಿದ್ದಳು. ಆದರೆ ಅದು ತುಂಬಾ ಭಾರವೆನಿಸಿ ಅದನ್ನು ತೆಗೆದು ಶಾಲಿನಲ್ಲಿ ಮಡಚಿ ದಾಸಿಯ ಕೈಗೆ ನೀಡಿದ್ದಳು. ಅವರು ಹಿಂತಿರುಗಿದರು, ಆದರೆ ಆ ದಾಸಿಯು ಮರೆತು ವಿಹಾರದಲ್ಲೇ ಬಿಟ್ಟು ಬಂದಿದ್ದಳು. ಆದರೆ ಪೂಜ್ಯ ಆನಂದರವರಿಗೆ ಅದು ಸಿಕ್ಕಾಗ ಅದನ್ನು ಜೋಪಾನವಾಗಿ ಒಂದೆಡೆಯಿಟ್ಟರು. ಇಲ್ಲಿ ವಿಸಾಖಳಿಗೆ ತನ್ನ ಆಭರಣ ನೆನಪಾದಾಗ ದಾಸಿಗೆ ಕೇಳಿದಾಗ ಆಕೆಯ ಮರೆತು ಬಂದಿರುವುದಾಗಿ ಹೇಳಿದಳು. ವಿಸಾಖಳು ದಾಸಿಗೆ ಈ ರೀತಿ ಹೇಳಿದಳು ಹೋಗು, ಆ ಅಮೂಲ್ಯವಾದ ಆಭರಣವನ್ನು ಹುಡುಕು, ಸಿಕ್ಕರೆ ಎತ್ತಿಕೊಂಡು ಬಾ, ಒಂದುವೇಳೆ ಪೂಜ್ಯ ಆನಂದರವರು ಅದನ್ನು ಎತ್ತಿಟ್ಟಿದ್ದರೆ ಅದನ್ನು ಹಿಂತಿರುಗಿ ತರಬೇಡ. ನಾನು ಅದನ್ನು ಆನಂದ ಭಂತೆಯವರಿಗೆ  ಅದನ್ನು ದಾನವಾಗಿ ನೀಡುತ್ತೇನೆ ಎಂದಳು. ಆದರೆ ನಂತರ ಆನಂದರವರು ಅದನ್ನು ದಾನವಾಗಿ ಸ್ವೀಕರಿಸಲಿಲ್ಲ. ಆಗ ಆಕೆಯು ಅದನ್ನು ಮಾರಿ ಆ ಹಣದಿಂದ ವಿಹಾರ ಕಟ್ಟಿಸಲು ನಿರ್ಧರಿಸಿದಳು. ಆದರೆ ಅದನ್ನು ತೆಗೆದುಕೊಳ್ಳುವಷ್ಟು ಹಣ ಯಾರ ಬಳಿಯೂ ಇರಲಿಲ್ಲ. ಆಗ ಸ್ವಯಂ ವಿಸಾಖಳೇ ಅದನ್ನು ಒಂಭತ್ತು ಲಕ್ಷ ಕೋಟಿ ಮತ್ತು ಒಂದು ಲಕ್ಷಕ್ಕೆ ತೆಗೆದುಕೊಂಡು ಆ ಹಣದಿಂದ ಶ್ರಾವಸ್ತಿಯ ಪೂರ್ವ ಜಾಗದಲ್ಲಿ ಒಂದು ದೊಡ್ಡ ವಿಹಾರವನ್ನು ಕಟ್ಟಿಸಿದಳು. ಅದು ಪುಬ್ಬಾರಾಮ ಎಂದು ಕರೆಯಲ್ಪಟ್ಟಿತ್ತು.
                ಈ ರೀತಿಯಾಗಿ ಆಕೆಯು ಸರ್ವರೀತಿಯಲ್ಲಿ ಸಂಘಕ್ಕೆ ಹಿರಿಯ ದಾನಿಯಾಗಿದ್ದಳು. ಆಕೆಯ ಎಲ್ಲಾ ಬಯಕೆಗಳು ಪೂತರ್ಿಗೊಂಡಿತ್ತು. ಆಕೆ ಬುದ್ಧರಿಗೆ ಮತ್ತು ಸಂಘಕ್ಕೆ ಸರ್ವರೀತಿಯ ದಾನ ಮಾಡಿದ್ದಳು. ಅದನ್ನೆಲ್ಲಾ ನೆನೆಸಿಕೊಂಡು ಆಕೆಯು ವಿಹಾರದಲ್ಲಿ ಸುತ್ತಾಡುತ್ತಾ ಆನಂದೋದ್ಗಾರ ಮಾಡುತ್ತಿದ್ದಳು. ಅದನ್ನು ಕೇಳಿಸಿಕೊಂಡ ಭಿಕ್ಷುಗಳು ಆಕೆಗೆ ಮತಿ ಏನಾದರೂ ಕೆಟ್ಟಿದೆಯೇ? ಆಕೆ ಈ ರೀತಿ ಏಕೆ ಹಾಡನ್ನು ಹಾಡುತ್ತಿದ್ದಾಳೆ? ಎಂದು ಅವರು ಭಗವಾನರ ಬಳಿಗೆ ಬಂದು ಈ ವಿಷಯ ಕೇಳಿದರು.

                ಆಗ ಭಗವಾನರು ಹೀಗೆ ಹೇಳಿದರು ಭಿಕ್ಷುಗಳೇ, ಆಕೆಗೆ ಏನೂ ಆಗಿಲ್ಲ. ಆಕೆ ಸುಆರೋಗ್ಯವಾಗಿಯೇ ಇದ್ದಾಳೆ. ಆಕೆಯ ಸಕಲ ಇಚ್ಛೆಗಳು ಪೂರ್ಣವಾಗಿರುವುದರಿಂದಾಗಿ ಆಕೆಯು ಈ ರೀತಿ ಆನಂದೋದ್ಗಾರವನ್ನು ಮಾಡುತ್ತಿದ್ದಾಳೆ ಅಷ್ಟೇ. ಆಕೆ ಈಗ ಮಾತ್ರವಲ್ಲ, ಆಕೆ ಹಿಂದೆ ಪದಮೋತ್ತರ ಬುದ್ಧರ ಕಾಲದಲ್ಲಿ ವಿಸಾಖಳ ರೀತಿಯಲ್ಲಿ ದಾನಿ ಆಗಿದ್ದ ಹಿರಿಯ ದಾನಿ ಉಪಾಸಿಕೆಯನ್ನು ಕಂಡು ಆಕೆಯಂತೆ ನಾನು ಸಹಾ ಮಹಾ ದಾನಿಯಾಗಬೇಕೆಂದು ಆಕೆ ಆ ಜನ್ಮದಲ್ಲೇ ಏಳು ದಿನಗಳ ದಾನ ಮಾಡಿ ತನ್ನ ಇಚ್ಛೆಯನ್ನು ಭಗವಾನರ ಬಳಿ ಹೇಳಿಕೊಂಡಾಗ ಆಗಿನ ಪದಮೋತ್ತರ ಬುದ್ಧರು ತಮ್ಮ ಸರ್ವಜ್ಞತಾ ಚಕ್ಷುವಿನಿಂದ ಈಕೆಯ ಭವಿಷ್ಯ ನೋಡಿ ಅವರು ಸಹಾ ನನ್ನ ಕಾಲದಲ್ಲಿ (ಗೋತಮ ಬುದ್ಧರ ಕಾಲದಲ್ಲಿ) ಈಕೆಯ ಇಚ್ಛೆ ಪೂತರ್ಿಯಾಗುವುದೆಂದು ತಿಳಿಸಿದರು. ಹೀಗೆ ಆಕೆಯು ಅಂದಿನಿಂದ ಎಲ್ಲಾ ಜನ್ಮ ಜನ್ಮಗಳಲ್ಲಿ ದಾನ, ಶೀಲ ರೂಢಿಸಿಕೊಂಡು ಬಂದಿದ್ದಾಳೆ. ಹೀಗೆ ಆಕೆಯ ಹಿಂದಿನ ಮತ್ತು ಈಗಿನ ಇಚ್ಛೆ ಪೂತರ್ಿಯಾಗಿದ್ದರಿಂದ ಆಕೆ ಹಾಡನ್ನು ಹಾಡಿದ್ದಾಳೆ. ಹೂವಿನಿಂದ ಮಾಲೆಗಾರನು ವಿವಿಧರೀತಿಯ ಹೂಮಾಲೆಗಳನ್ನು ನಿಮರ್ಿಸುವಂತೆ ಆಕೆಯು ಮಾಡಿರುವ ಪುಣ್ಯಗಳು ಅನೇಕ ಎಂದು ಹೇಳಿ ಭಗವಾನರು ಮೇಲಿನ ಗಾಥೆಯನ್ನು ನುಡಿದರು. 

No comments:

Post a Comment