Friday 6 February 2015

dhammapada/puppavagga/4.9/question of ananda

ಶೀಲದ ಸುಗಂಧವು ಎಲ್ಲೆಡೆ ಪ್ರಸರಿಸುತ್ತದೆ
ಪುಷ್ಪಗಳ ಗಂಧವು ವಾಯುವಿನ ಎದುರು ದಿಕ್ಕಿನಲ್ಲಿ ಹರಡಲಾರದು, ಹಾಗೆಯೇ ಚಂದನ (ಶ್ರೀಗಂಧ), ತಗರ, ಮಲ್ಲಿಗೆಯ ಪರಿಮಳವು ಸಹಾ. ಆದರೆ ಸಂತರ ಯಶೋಗಂಧವು ವಾಯುವಿಗೆ ಎದುರಾಗಿ ಹಬ್ಬುತ್ತದೆ. ಸತ್ಪುರುಷರ ಶೀಲ ಸುಗಂದವು ಸರ್ವದಿಕ್ಕುಗಳಿಗೂ ಪ್ರಸರಿಸುತ್ತದೆ.     (54)
ಚಂದನದ (ಶ್ರೀಗಂಧ), ತಗರದ, ಉಪ್ಪಲದ (ನೀಲಿ ಕಮಲದ), ಮಲ್ಲಿಗೆಗಳ ಇವೆಲ್ಲಾ ಸುಗಂಧಗಳಿಗಿಂತ ಶೀಲ ಸುಗಂಧವು ಅನುತ್ತರವಾಗಿದೆ.      (55)
ಗಾಥ ಪ್ರಸಂಗ 4:9
ಪೂಜ್ಯ ಆನಂದರವರ ಪ್ರಶ್ನೆ

                ಒಂದುದಿನ ಪೂಜ್ಯ ಆನಂದರವರು ಭಗವಾನರ ಬಳಿಗೆ ಬಂದು ಈ ರೀತಿ ಪ್ರಶ್ನಿಸಿದರು ಭಗವಾನ್, ಮೂರು ಬಗೆಯ ಪರಿಮಳಗಳಿವೆ. ಅವೆಂದರೆ ಬೇರಿನ ಪರಿಮಳ, ಕಾಂಡದ ಪರಿಮಳ, ಹೂವಿನ ಪರಿಮಳ. ಆದರೆ ಇವೆಲ್ಲವೂ ಗಾಳಿಗೆ ಎದುರಾಗಿ ತಮ್ಮ ಪರಿಮಳ ಹಬ್ಬಿಸಲಾರವು. ಪೂಜ್ಯರಿಗೆ ಸರ್ವ ದಿಕ್ಕುಗಳಲ್ಲೂ ಪ್ರಸರಿಸುವಂತಹ ಪರಿಮಳ ಗೊತ್ತಿರಲೇಬೇಕು, ದಯವಿಟ್ಟು ತಿಳಿಸಬೇಕು.

                ಆಗ ಭಗವಾನರು ಹೀಗೆಂದರು ಆನಂದ, ಒಬ್ಬನು ತಿಸರಣು ಹೊಂದಿ ಪಂಚಶೀಲಗಳನ್ನು ಪಾಲಿಸಿ, ದಾನಿಯಾಗಿರುವಾಗ ಅಂತಹ ಮನುಷ್ಯನ ಶೀಲದ ಸುಗಂಧವು ಸರ್ವ ದಿಕ್ಕುಗಳಲ್ಲೂ ವ್ಯಾಪಿಸುತ್ತದೆ. ಎಲ್ಲರೂ ಆತನನ್ನು ಪ್ರಶಂಸಿಸುತ್ತಾರೆ ಎಂದು ಹೇಳಿ ಮೇಲಿನ ಗಾಥೆಗಳನ್ನು ನುಡಿದರು. 

No comments:

Post a Comment