Friday 26 June 2015

dhammapada/piyavagga/16.7/mahakassapa

ಪರಿಪೂರ್ಣ ಸುಶೀಲನು ಎಲ್ಲರಿಂದ ಸತ್ಕಾರ ಪಡೆಯುವನು
"ಶೀಲಸಂಪನ್ನನು, ದರ್ಶನ ಸಂಪನ್ನನು,
ಧಮ್ಮದಲ್ಲಿ ಸ್ಥಿರನು, ಸತ್ಯವನ್ನು ಅರಿತವನು
ಹಾಗು ಮಾಡಬೇಕಾದುದೆಲ್ಲವನ್ನು ಮಾಡಿರುವವನು ಆದ
ಆತನನ್ನು ಜನರು ಪ್ರಿಯರೆಂದು ಭಾವಿಸುವರು."             (217)

ಗಾಥ ಪ್ರಸಂಗ 16:7
ಮಹಾಕಶ್ಯಪರ ಮಹಾ ಪ್ರಭಾವ

            ಭಗವಾನರು ಒಮ್ಮೆ 80 ಆಗ್ರ ಶ್ರಾವಕರ ಸಹಿತ 500 ಭಿಕ್ಷುಗಳೊಂದಿಗೆ ರಾಜಗೃಹಕ್ಕೆ ಪ್ರವೇಶಿಸಿದರು. ಅಲ್ಲಿ ಅವರು 500 ಯುವಕರು ಸ್ವಾದಿಷ್ಟಮಯ ಆಹಾರಗಳ ಬುಟ್ಟಿಗಳನ್ನು ತಮ್ಮ ಹೆಗಲ ಮೇಲಿಟ್ಟುಕೊಂಡು ಉದ್ಯಾನದೆಡೆಗೆ ಹೊರಟರು. ಅವರು ದಾರಿಯಲ್ಲಿ ಬುದ್ಧರನ್ನು ಕಂಡು ಹಾಗೆ ಮುಂದುವರೆದುಬಿಟ್ಟರು. ಯಾರಿಗೂ ಸಹಾ ತಿಂಡಿಯನ್ನು ತಿನ್ನಿ ಎಂದು ಹೇಳಲಿಲ್ಲ. ಆಗ ಭಗವಾನರು ಭಿಕ್ಷುಗಳ ಗೊಂದಲ ನಿವಾರಿಸಲು ಹೀಗೆ ನುಡಿದರು: "ಭಿಕ್ಷುಗಳೇ, ಆ ಯುವಕರು ನಿಮಗಾಗಲೀ ಅಥವಾ ನನಗಾಗಲಿ ಆಹಾರದ ಆಮಂತ್ರಣ ನೀಡಿದಿದ್ದರೂ ನಮ್ಮ ಹಿಂದೆ ಬರುತ್ತಿರುವ ಭಿಕ್ಷುಗಳಿಗೆ ದಾನ ನೀಡುತ್ತಾರೆ, ನಂತರ ನಿಮಗೆಲ್ಲಾ ದೊರೆಯುವುದು." ನಂತರ ಅವರೆಲ್ಲಾ ಒಂದು ಮರದ ಕೆಳಗೆ ಕುಳಿತರು.

            ನಂತರ ಆ ಯುವಕರು ಪರಮಪೂಜ್ಯ ಮಹಾಕಸ್ಸಪರನ್ನು ನೋಡಿದರು. ತಕ್ಷಣ ಅವರ ಮನಸ್ಸು ಆನಂದಿತವಾಯಿತು, ಶರೀರ ಸಹಾ ಆನಂದತೆ ಮತ್ತು ಹಗುರತೆಯಿಂದ ಕೂಡಿಕೊಂಡಿತು. ತಕ್ಷಣ ಅವರು ಮಹಾಕಸ್ಸಪರಿಗೆ ವಂದಿಸಿ ಅವರಿಗೆ ಹೀಗೆ ಹೇಳಿದರು. "ಓ ಯುವಕರೇ, ನೀವು ತಪ್ಪು ಮಾಡಿದಿರಿ, ಸ್ವಲ್ಪ ದೂರದಲ್ಲಿ ಬುದ್ಧರು ಮತ್ತು ಸಂಘ ಕುಳಿತಿದ್ದಾರೆ, ನೀವು ಅವರಿಗೆ ಮೊದಲು ದಾನ ನೀಡಬೇಕಿತ್ತು. ಪರವಾಗಿಲ್ಲ, ಈಗ ತಪ್ಪದೇ ನೀವು ಅವರಲ್ಲಿಗೆ ಹೋಗಿ ಸತ್ಕರಿಸಿ" ಎಂದರು. ಅವರು "ಸರಿ ಪೂಜ್ಯರೇ" ಎಂದು ಹೇಳಿ ಅದರಂತೆಯೇ ಭಗವಾನರಿಗೆ ಮತ್ತು ಸಂಘಕ್ಕೆ ಸತ್ಕರಿಸಿದರು. ಆಗ ಭಿಕ್ಷುಗಳು ಇದು ಯುವಕರ ಪಕ್ಷಪಾತವಿರಬಹುದೇ ಎಂದು ಚಚರ್ಿಸುವಾಗ ಭಗವಾನರು ಮಹಾಕಸ್ಸಪರವರ ಸದ್ಗುಣಗಳನ್ನು ಹೊಗಳುತ್ತಾ ಈ ಮೇಲಿನ ಗಾಥೆಯನ್ನು ನುಡಿದರು. 

No comments:

Post a Comment