Wednesday, 12 August 2015

dhammapada/pakinnakavagga/21.7/maccikasandaupasaka

ಶ್ರದ್ಧಾಶೀಲಸಂಪನ್ನನು ಸರ್ವತ್ರ ಆದರಣೀಯ
"ಯಾರು ಶ್ರದ್ಧಾ (ಪ್ರಜ್ಞಾಯುತ ಭಕ್ತಿ) ಹಾಗು ಶೀಲಸಂಪನ್ನನೋ
ಯಶಸ್ಸು ಮತ್ತು ಐಶ್ವರ್ಯಗಳಿಂದ ಕೂಡಿರುತ್ತಾನೋ,
ಆತನು ಯಾವ ಯಾವ ಪ್ರದೇಶದಲ್ಲಿ ಹೋಗುತ್ತಾನೋ
ಅಲ್ಲೆಲ್ಲಾ ಪೂಜಿತನಾಗುತ್ತಾನೆ."     (303)
ಗಾಥ ಪ್ರಸಂಗ 21:7
ಮಚ್ಚಿಕಾಸಂದದ ಉಪಾಸಕ ಚಿತ್ತನ ಶ್ರದ್ಧಾಶೀಲತೆ

            ಒಮ್ಮೆ ಮಚ್ಚಿಕಾನಂದದ ಚಿತ್ತನೆಂಬ ಗೃಹಸ್ಥನು ಸಾರಿಪುತ್ರರಿಂದ ಧಮ್ಮವನ್ನು ಆಲಿಸಿದಾಗ, ಆತನು ಅನಾಗಾಮಿ ಮಾರ್ಗ ಮತ್ತು ಫಲವನ್ನು ಪಡೆದನು. ಹೀಗಾಗಿ ಒಂದುದಿನ 500 ಬಂಡಿಗಳಷ್ಟು ಆಹಾರ ಮತ್ತಿತರ ಕೊಡುಗೆಗಳನ್ನು ಭಗವಾನರಿಗೆ ನೀಡಲು ಶ್ರಾವಸ್ತಿಗೆ ಹೊರಟನು. ಆಗ ಆತನ ಜೊತೆಗೆ 3000 ಹಿಂಬಾಲಕರೂ ಇದ್ದರೂ ಅವರೆಲ್ಲರೂ ದಿನಕ್ಕೊಂದು ಯೋಜನದಂತೆ ಶ್ರಾವಸ್ತಿಗೆ ತಲುಪುವ ಹೊತ್ತಿಗೆ ತಿಂಗಳಾಯಿತು. ನಂತರ ಚಿತ್ತನ ನಾಯಕತ್ವದಲ್ಲಿ ಜೇತವನ ವಿಹಾರಕ್ಕೆ ಹೋಗುವಾಗ ಆತನೊಡನೆ ಕೇವಲ 500 ಜನರಿದ್ದರು. ಆತನು ಭಗವಾನರಿಗೆ ವಂದಿಸಿ, ಪೂಜಿಸುವಾಗ ಹೂವಿನ ರಾಶಿಯು ಮಳೆಯಂತೆ ಅದ್ಭುತವಾಗಿ ಸುರಿಯಲ್ಪಟ್ಟಿತ್ತು. ಚಿತ್ತನು ವಿಹಾರದಲ್ಲಿ ಇಡೀ ತಿಂಗಳಿದ್ದನು. ಅಲ್ಲಿ ಆತನು ಭಗವಾನರಿಗೆ, ಭಿಕ್ಷು ಸಂಘಕ್ಕೆ ಹಾಗು ಆತನ ಜೊತೆಗಾರರಿಗೆ ಸೇರಿ 3000 ಜನರಿಗೆ ಆಹಾರ ಬಡಿಸುತ್ತಿದ್ದನು. ಪ್ರತಿಸಾರಿಯು ಆತನು ಆಹಾರ ಹಾಗು ಕೊಡುಗೆಗಳನ್ನು ನೀಡುವಾಗ ದೇವತೆಗಳು ಪುನಃ ಅವೆಲ್ಲಾ ಅಷ್ಟೇ ಇರುವಂತೆ ಭತರ್ಿ ಮಾಡಿಬಿಡುತ್ತಿದ್ದರು.
            ಆತನು ಹಿಂತಿರುಗಿ ಹೋಗುವ ದಿನದಂದು ಆತನು ತನ್ನೆಲ್ಲಾ ಆಹಾರವನ್ನು ಚೀವರ ಇತ್ಯಾದಿಗಳನ್ನು ಎಲ್ಲವನ್ನೂ ದಾನವಾಗಿ ಭಗವಾನರಿಗೆ ಮತ್ತು ಭಿಕ್ಷು ಸಂಘಕ್ಕೆ ಸಮಪರ್ಿಸಿದನು. ಆಗಲು ಸಹಾ ದೇವತೆಗಳು ಆತನ ಬರಿದಾದ ಬಂಡಿಗಳನ್ನು ಪುನಃ ಅತ್ಯಮೂಲ್ಯವಾದ ವಸ್ತುಗಳಿಂದ ತುಂಬಿಸಿದರು. ಇದನ್ನು ಪೂಜ್ಯರಾದ ಆನಂದರು ಕಂಡು, ಅವರು ಭಗವಾನರಿಗೆ ಈ ವಿಷಯವನ್ನು ತಿಳಿಸಿ ಹೀಗೆ ಪ್ರಶ್ನಿಸಿದರು. "ಭಗವಾನ್, ಚಿತ್ತನು ತಮ್ಮ ಸಾನಿಧ್ಯದಲ್ಲಿ ಹೀಗೆ ಬಂದಿರುವುದಕ್ಕೆ ಎಷ್ಟೆಲ್ಲಾ ಧನ್ಯತೆ ಪಡೆದಿದ್ದಾನೆ. ಭಗವಾನ್ ಆತನು ಬೇರೆಡೆ ಹೀಗೆ ಹೋಗಿದ್ದರೆ, ಆತನು ಇದೇರೀತಿ ಧನ್ಯತೆ ಪಡೆಯುತ್ತಿದ್ದನೆ?"

            ಆಗ ಭಗವಾನರು ಹೀಗೆ ಉತ್ತರಿಸಿದರು: "ಆನಂದ, ಯಾವ ಶಿಷ್ಯನು ಪೂರ್ಣವಾಗಿ ಶ್ರದ್ಧೆ ಮತ್ತು ಶೀಲಗಳಿಂದ ಕೂಡಿರುತ್ತಾನೆಯೋ, ದಾನಿಯಾಗಿರುತ್ತಾನೋ ಮತ್ತು ಆತನ ಖ್ಯಾತಿಯು ಎಲ್ಲೆಡೆ ಹಬ್ಬುವುದು, ಹೀಗಾಗಿ ಅಂತಹವನನ್ನು ಎಲ್ಲೆಲ್ಲಿಯೂ ಹೋಗಲಿ, ಅಲ್ಲೆಲ್ಲಾ ಆದರಕ್ಕೆ, ಗೌರವಕ್ಕೆ ಪಾತ್ರನಾಗುತ್ತಾನೆ" ಎಂದು ಹೇಳಿ ಈ ಗಾಥೆಯನ್ನು ನುಡಿದರು.

dhammapada/pakinnakavagga/21.6/bhikkhusfromvajjis

ಗೃಹಸ್ಥ ಜೀವನ ದುಃಖಕರ; ಸಮಣ ಜೀವನ ಕಷ್ಟಕರ

"ಪಬ್ಬಜ್ಜನಾಗುವಿಕೆ ಕಷ್ಟಕರ,
ಅದರಲ್ಲಿಯೇ ಆನಂದಿಸುವುದು ಕಷ್ಟಕರ,
ಗೃಹಸ್ಥರ ಜೀವನ ಕಷ್ಟಕರ ಹಾಗು ದುಃಖಕರ,
ಅಸಮಾನ ದೃಷ್ಟಿಕೋನ ಹೊಂದಿರುವವರೊಂದಿಗೆ ವಾಸಿಸುವಿಕೆ ದುಃಖಕರ,
ಸಂಸಾರದಲ್ಲಿ ಸುತ್ತಾಡುವಿಕೆ ದುಃಖಕರ,
ಆದ್ದರಿಂದ ಸಂಸಾರದ, ಸಂಚಾರಿಯಾಗದಿರು, ದುಃಖಕ್ಕೆ ಗುರಿಯಾಗದರು."        (302)

ಗಾಥ ಪ್ರಸಂಗ 21:6
ವಜ್ಜಿಗಳ ರಾಜ್ಯದ ಭಿಕ್ಷುವಿನ ಕೊರಗು

            ಕಾತರ್ಿಕ ಪೂರ್ಣಮಿಯ ರಾತ್ರಿಯಂದು ವೈಶಾಲಿಯ ನಾಗರಿಕರು ನಕ್ಷತ್ರ ಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಆಗ ಇಡೀ ನಗರವೇ ಬೆಳಕಿನಿಂದ ತುಂಬಿತ್ತು. ಆಗ ಇಡೀ ನಗರದ ವಾಸಿಗಳು ಪ್ರಾಪಂಚಿಕ ಆನಂದಗಳಾದ ಹಾಸ್ಯ, ಸಂಗೀತ, ನೃತ್ಯ, ಗಾಯನ ಇತ್ಯಾದಿಗಳಿಂದ ನಲಿದಾಡುತ್ತಿದ್ದರು. ಈ ದೃಶ್ಯವನ್ನು ವಿಹಾರದಿಂದ ಗಮನಿಸಿದ ಭಿಕ್ಷುವೊಬ್ಬನು ತನಗೆತಾನೇ ಒಂಟಿಯೆಂದು ಭಾವಿಸತೊಡಗಿದನು. ತನ್ನ ಬಗ್ಗೆಯೇ ಅತೃಪ್ತಿಯನ್ನು ಹೊಂದಿದನು. ಆಗ ಆತನು ಹೀಗೆ ಗೊಣಗಿಕೊಂಡನು "ನನಗಾಗಿರುವಷ್ಟು ದುದರ್ೆಶೆ ಬೇರೆ ಯಾರಿಗೂ ಆಗಿಲ್ಲವೇನೋ?" ಆತನ ಈ ಹತಾಶೇ ಕೇಳಿಸಿಕೊಂಡ ವನದೇವತೆ ಆತನಿಗೆ ಕಾಣಿಸಿಕೊಂಡು ಹೀಗೆ ಹೇಳಿತು: "ನಿರಯದಲ್ಲಿರುವವರು ಸಹಾ ದೇವತೆಗಳೊಂದಿಗೆ ಈಷರ್ೆಪಡುವರು, ಹಾಗೆಯೇ ಜನರೂ ಸಹಾ ಅರಣ್ಯವಾಸಿಯ ಏಕಾಂಗಿಯೊಂದಿಗೂ ಈಷರ್ೆಪಡುವರು."
            ಇದನ್ನು ಆಲಿಸಿದ ಆ ಭಿಕ್ಷುವಿಗೆ ತಕ್ಷಣ ಪುಟ್ಟ ಜ್ಞಾನೋದಯವಾಗಿ ಹಾಗೇ ಯೋಚಿಸಿದ್ದು ಹಾಗು ಈ ರೀತಿಯ ಅತೃಪ್ತಿಯ ಹೇಳಿಕೆಗೂ ಪಶ್ಚಾತ್ತಾಪಪಟ್ಟನು.

            ಮಾರನೆಯ ದಿನ ಮುಂಜಾನೆಯೇ ಆತನು ಭಗವಾನರನ್ನು ಭೇಟಿಮಾಡಿ ಈ ವಿಷಯವೆಲ್ಲಾ ತಿಳಿಸಿದನು. ಆಗ ಭಗವಾನರು ಈ ಮೇಲಿನ ಗಾಥೆಗಳನ್ನು ನುಡಿದರು.

dhammapada/pakinnakavagga/21.5/powerofbuddhanusati

ಬುದ್ಧಾನುಸತಿ ಮಾಡುವವ ಸದಾ ರಕ್ಷಿತ
 
"ಯಾರು ನಿತ್ಯವೂ ದಿನ-ರಾತ್ರಿ
ಬುದ್ದಾನುಸತಿಯಲ್ಲಿ (ಬುದ್ಧರ ಮೇಲೆ ಧ್ಯಾನ)
ತಲ್ಲೀನರೋ ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರು ಆಗಿರುತ್ತಾರೆ."     (296)

"ಯಾರು ನಿತ್ಯವೂ ದಿನ-ರಾತ್ರಿ
ಧಮ್ಮಾಗತಾಸತಿಯಲ್ಲಿ (ಧಮ್ಮದ ಅನುಸ್ಮರಣೆ)
ತಲ್ಲೀನರೋ ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ."    (297)

"ಯಾರು ನಿತ್ಯವೂ ದಿನ-ರಾತ್ರಿ
ಸಂಘಾನುಸತಿ (ಸಂಘದ ಶ್ರೇಷ್ಣ ಗುಣಗಳ ಮೇಲೆ ಧ್ಯಾನ)ಯಲ್ಲಿ
ತಲ್ಲೀನರೋ ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ."    (298)

"ಯಾರು ನಿತ್ಯವೂ ದಿನ-ರಾತ್ರಿ
ಕಾಯಗತಾಸತಿ (ದೇಹದ ಕಲ್ಮಶಗಳ ಮೇಲೆ ಧ್ಯಾನ) ಯಲ್ಲಿ
ತಲ್ಲೀನರೋ ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ."    (299)

"ಯಾರು ನಿತ್ಯವೂ ದಿನ-ರಾತ್ರಿ
ಅಹಿಂಸೆಯಲ್ಲಿ ರತರಾಗಿರುವರೋ
ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ."    (300)


"ಯಾರು ನಿತ್ಯವೂ ದಿನ-ರಾತ್ರಿ
ಚಿತ್ತಾಭಿವೃದ್ಧಿಯಲ್ಲಿ (ಧ್ಯಾನದಲ್ಲಿ) ರತರಾಗಿರುವರೋ
ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ."    (301)

ಗಾಥ ಪ್ರಸಂಗ 21:5
ಬಾಲಕ ಮತ್ತು ರಕ್ಷಣೆ ನೀಡುವ ಧ್ಯಾನಗಳು

            ಒಮ್ಮೆ ಮರ ಕತ್ತರಿಸುವವನು ತನ್ನ ಮಗನೊಂದಿಗೆ ರಾಜಗೃಹದ ಕಾಡಿನೊಳಕ್ಕೆ ಹೋದನು. ಅಲ್ಲಿ ಒಣ ಮರಗಳನ್ನು ಸಂಗ್ರಹಿಸಿಕೊಂಡು ಸಂಜೆಯ ವೇಳೆಗೆ ಮನೆಗೆ ಹಿಂತಿರುಗುತ್ತಿದ್ದನು. ಸಂಜೆಯ ವೇಳೆ ಅವರು ಸ್ಮಶಾನದ ಹತ್ತಿರ ಊಟ ಮಾಡುವುದಕ್ಕೋಸ್ಕರವಾಗಿ ಬಂಡಿಯನ್ನು ನಿಲ್ಲಿಸಿದರು. ಆಗ ಅವರು ಎತ್ತುಗಳು ಮೇಯಲೆಂದು ನೊಗವನ್ನು ಬಿಚ್ಚಿದರು. ಆದರೆ ಆ ಎತ್ತುಗಳು ಮೇಯುತ್ತಲೇ ಅವರ ಗೋಚರಕ್ಕೆ ಬರದಷ್ಟು ದೂರ ಹೋಗಿಬಿಟ್ಟವು. ಸ್ವಲ್ಪ ಸಮಯದ ನಂತರ ಅವರಿಗೆ ಎತ್ತುಗಳು ಪರಾರಿಯಾಗಿರುವುದು ತಿಳಿದುಬಂದಿತು. ಆಗ ಮರ ಕತ್ತರಿಸುವವ ಅವುಗಳನ್ನು ಹುಡುಕಲು ಹೊರಟನು ಹಾಗು ಬಾಲಕನನ್ನು ಕಟ್ಟಿಗೆ ಮತ್ತು ಬಂಡಿ ಕಾಯಲು ನಿಲ್ಲಿಸಿ ಹೋದನು. ತಂದೆಯು ಎತ್ತುಗಳನ್ನು ಹುಡುಕುತ್ತ ನಗರಕ್ಕೂ ಹೋಗಿಬಿಟ್ಟನು. ಆದರೆ ಹಿಂತಿರುಗಿ ಬರುವಷ್ಟರಲ್ಲಿ ನಗರ ದ್ವಾರವು ಮುಚ್ಚಿತ್ತು. ಹೀಗಾಗಿ ಆ ಬಾಲಕನು ಇಡೀ ರಾತ್ರಿ ಸ್ಮಶಾನದ ಸಮೀಪವೇ ರಾತ್ರಿ ಒಂಟಿಯಾಗಿ ಕಳೆಯಬೇಕಾಯಿತು.
            ಆ ಮರ ಕಟುಕನ ಮಗನು ಬಾಲಕನಾಗಿದ್ದರೂ ಪ್ರಾಜ್ಞನಾಗಿದ್ದನು. ಆತನಿಗೆ ಬುದ್ಧರ ಮಹೋನ್ನತ ಗುಣಗಳ ಮೇಲೆ ಸ್ಮರಣೆ ಮಾಡುವ ಉತ್ತಮ ಹವ್ಯಾಸವಿತ್ತು. ಆ ರಾತ್ರಿಯಲ್ಲಿ ಸ್ಮಶಾನದಲ್ಲಿ ವಾಸಿಸುತ್ತಿದ್ದಂತಹ ಎರಡು ಪ್ರೇತಗಳು ಆತನಿಗೆ ಹೆದರಿಸಿ ತೊಂದರೆ ನೀಡಲು ಬಂದವು. ಅವುಗಳಲ್ಲಿ ಒಂದು ಪ್ರೇತವು ಆ ಬಾಲಕನ ಕಾಲನ್ನು ಎಳೆಯಿತು. ತಕ್ಷಣ ಆ ಬಾಲಕನು ಭಗವಾನರ ರೂಪವನ್ನು ಧ್ಯಾನಿಸುತ್ತಾ "ನಮೋ ಬುದ್ಧಸ್ಸಾ" ಎಂದನು. ಆ ಶಬ್ದ ಕೇಳುತ್ತಲೇ ಆ ಪ್ರೇತಗಳಿಗೆ ಹೆದರಿಕೆಯುಂಟಾಯಿತು. ಆ ಬಾಲಕನತ್ತ ನೋಡಿದಾಗ ಆತನಲ್ಲಿ 'ಬುದ್ಧ ಧ್ಯಾನ' ಮಾಡುವಾಗಿನ ತೇಜಸ್ಸು ಅವರಿಗೆ ಕಂಡು ಆ 'ಪ್ರೇತಗಳು ಆತನಿಗೆ ಸೇವೆ ಮಾಡಲು ನಿರ್ಧರಿಸಿದವು. ಹೀಗಾಗಿ ಒಂದು ಪ್ರೇತವು ಆತನಿಗೆ ರಕ್ಷಣೆಗಾಗಿ ನಿಂತು ಎಲ್ಲಾ ರಕ್ಷಣಾ ಜವಾಬ್ದಾರಿಯನ್ನು
ಸ್ವೀಕರಿಸಿತು. ಮತ್ತೊಂದು ಪ್ರೇತವು ರಾಜ ಬಿಂಬಿಸಾರನ ಆಹಾರದ ತಟ್ಟೆಯನ್ನೇ ಅಪಹರಿಸಿ ತಂದು ಬಾಲಕನಿಗೆ ತಿನ್ನಲು ನೀಡಿತು. ಹೀಗೆ ಆ ಪ್ರೇತಗಳು ಸ್ವಂತ ಮಗನಂತೆ ಆ ಬಾಲಕನನ್ನು ನೋಡಿಕೊಂಡವು. ಹಾಗೆಯೇ ಆ ಪ್ರೇತವು ರಾಜನಿಗೆ ಮಾತ್ರ ಕಾಣಿಸುವಂತೆ ಸಂದೇಶವನ್ನು ಬರೆದುಬಿಟ್ಟಿತ್ತು. ಮಾರನೆಯ ದಿನ ರಾಜನ ಜನರು ರಾಜಯೋಗ್ಯ ತಟ್ಟೆಯು ಕಾಣೆಯಾಗಿರುವುದನ್ನು ಪತ್ತೆಹಚ್ಚಿದರು ಮತ್ತು ಅವರು ತುಂಬಾ ಹೆದರಿ ತಲೆಕೆಡಿಸಿಕೊಂಡರು. ಆದರೆ ರಾಜನಿಗೆ ಪ್ರೇತಗಳ ಸಂದೇಶ ಸಿಕ್ಕಿತು. ಹಾಗು ಭಟರಿಗೆ ಇಂತಹ ಕಡೆ ಹುಡುಕಿ ಎಂದು ಕಳುಹಿಸಿದನು. ಆಗ ರಾಜಭಟರಿಗೆ ಮರ ಕಟುಕನ ಬಳಿ ಬಂಡಿಯಲ್ಲಿ ತಟ್ಟೆಯು ಸಿಕ್ಕಿತು. ಆಗ ಆವರಿಗೆ ಬಾಲಕನು ಬಂಡಿಯ ಕೆಳಗೆ ಮಲಗಿರುವುದು ಕಾಣಿಸಿತು. ಬಾಲಕನನ್ನು ವಿಚಾರಿಸಿದಾಗ ತನ್ನ ಪೋಷಕರು ಆಹಾರ ತಿನ್ನಿಸಲು ಬಂದಿದ್ದರು ಎಂದನು. ಆ ಬಾಲಕನಿಗೆ ಅಷ್ಟೇ ಗೊತ್ತಿತ್ತು. ಆಗ ರಾಜನು ಆ ಬಾಲಕನ ತಂದೆಗೆ ಕರೆಸಿ ವಿಚಾರಿಸಿದನು. ಆದರೆ ಅದರಿಂದ ಪ್ರಯೋಜನವಾಗಲಿಲ್ಲ. ಆಗ ಬಾಲಕನಿಗೆ ಮತ್ತೊಮ್ಮೆ ಪೂರ್ಣವಾಗಿ ವಿಚಾರಿಸಿದಾಗ ಪ್ರೇತ ಕಾಲನ್ನು ಎಳೆದಿದ್ದು, ತಾನು 'ನಮೋ ಬುದ್ಧಸ್ಸ' ಎಂದು ಹೇಳಿದ್ದು ಎಲ್ಲವನ್ನು ತಿಳಿಸಿದನು.
            ಇದರಿಂದಾಗಿ ರಾಜನಿಗೆ ಆಶ್ಚರ್ಯವಾಗಿ ಭಗವಾನರಿಗೆ ಭೇಟಿ ಮಾಡಿ ಪೂರ್ಣ ವಿವರ ಪಡೆದನು. ನಂತರ ಭಗವಾನರಿಗೆ ಹೀಗೆ ಪ್ರಶ್ಸಿಸಿದನು. "ಭಗವಾನ್, ಕೇವಲ ಬುದ್ಧನುಸತಿಯು ಮಾತ್ರವೇ ಅಪಾಯದಿಂದ ರಕ್ಷಣೆ ನೀಡಬಲ್ಲದೇ ಅಥವಾ ಬೇರೆ ಅನುಸ್ಮೃತಿಗಳಾದ ಧಮ್ಮಾನುಸತಿಯು ಅಷ್ಟೇ ಬಲಯುತವಾದುದೇ ಅಥವಾ ಇಲ್ಲವೇ?"

            ಆಗ ಭಗವಾನರು ಈ ಮೇಲಿನ ಗಾಥೆಗಳನ್ನು ತಿಳಿಸಿದರು. ಈ ಗಾಥೆಗಳ ಅಂತ್ಯದಲ್ಲಿ ಆ ಬಾಲಕ ಮತ್ತು ಆತನ ತಂದೆಯು ಸೋತಪನ್ನರಾದರು. ನಂತರ ಅವರು ಸಂಘವನ್ನು ಸೇರಿ ಅರಹಂತರೂ ಆದರು.

dhammapada/pakinnakavagga/21.4/lakuntakabhaddiya

ಕ್ಲೇಷಗಳ ಕೊಂದವನೇ ಬ್ರಾಹ್ಮಣ

"ಮಾತೆಯನ್ನು (ತೃಷ್ಣೆ), ತಂದೆಯನ್ನು (ಅಹಂಕಾರ)
ಕೊಂದು, ಬಳಿಕ ದ್ವಿ-ಕ್ಷತ್ರಿಯ ರಾಜರನ್ನು (ಶಾಶ್ವತವಾದ, ಭೌತಿಕವಾದ)
ಹಾಗು ಅವರ ರಾಷ್ಟ್ರವನ್ನು (ಇಂದ್ರಿಯ ಮತ್ತು ಇಂದ್ರಿಯ ವಿಷಯಗಳನ್ನು) ಅವರ
ಅಧೀನರಾಗಿರುವವರನ್ನು (ರಾಗಾದಿಗಳು) ಕೊಂದವನೇ ನಿಜ ಬ್ರಾಹ್ಮಣನು
ಹಾಗು ಆತನು ಅಭಾದಿತನಾಗುತ್ತಾನೆ."         (294)

"ಮಾತೆಯನ್ನು (ತೃಷ್ಣೆ), ತಂದೆಯನ್ನು (ಅಹಂಕಾರ)
ಕೊಂದು, ಬಳಿಕ ದ್ವಿ-ಕ್ಷತ್ರಿಯ ರಾಜರನ್ನು (ಶಾಶ್ವತವಾದ, ಭೌತಿಕವಾದ)
ಹಾಗೆಯೇ ಪಂಚಮ ವ್ಯಾಘ್ರವನ್ನು (ಪಂಚನಿವರಣ) ಕೊಂದವನೇ
ನಿಜ ಬ್ರಾಹ್ಮಣನು ಹಾಗು ಆತನು ಅಭಾದಿತನಾಗುತ್ತಾನೆ."                (295)

ಗಾಥ ಪ್ರಸಂಗ 21:4
ಲಕುಂಟಕ ಭದ್ದಿಯನ ಅಭಾದಿತತೆ
            ಒಮ್ಮೆ ಭಗವಾನರು ಜೇತವನ ವಿಹಾರದಲ್ಲಿದ್ದರು. ಅಲ್ಲಿ ಕೆಲ ಭಿಕ್ಷುಗಳು ಭಗವಾನರಿಗೆ ವಂದಿಸಲು ಬಂದಿದ್ದರು. ಅವರೆಲ್ಲಾ ಅಲ್ಲಿದ್ದಾಗ ಲಕುಂಟಕ ಭದ್ದಿಯನು ಅಲ್ಲಿಂದ ಹಾದುಹೋದನು. ಆಗ ಭಗವಾನರು ಆ ಭಿಕ್ಷುಗಳಿಗೆ ಲಕುಂಟಕ ಭದ್ದಿಯನೆಂಬ ಕುಬ್ಜನಿಗೆ ತೋರಿಸಿ "ನೋಡಿ ಭಿಕ್ಷುಗಳೇ, ಈ ಭಿಕ್ಷುವನ್ನು, ಇವನು ಮಾತಾಪಿತರ ಹತ್ಯೆಗೈದು, ದುಃಖವಿಲ್ಲದವನಾಗಿದ್ದಾನೆ". ಆಗ ಆ ಭಿಕ್ಷುಗಳು ಆ ಮಾತಿನ ಮರ್ಮ ಅರ್ಥವಾಗದೆ ಗಲಿಬಿಲಿಗೊಂಡರು. ಆಗ ಭಗವಾನರು ಅವರಿಗೆ ಅರ್ಥ ವಿವರಿಸಿದಾಗ, ಆ ಕುಬ್ಜನ ಬಗ್ಗೆ ಗೌರವ ತಾಳಿದರು. ಇವು ಆಗ ನುಡಿದ ಗಾಥೆಗಳಾಗಿವೆ.

            ಇಲ್ಲಿ ಬ್ರಾಹ್ಮಣನೆಂದರೆ ಅರಹಂತನಾಗಿರುವಿಕೆ, ಇಲ್ಲಿ ತಂದೆ-ತಾಯಿಗಳೆಂದರೆ ನಾನು (ಅಹಂಕಾರ) ಮತ್ತು ನನ್ನದು (ತೃಷ್ಣೆ) ಇವುಗಳಿಂದಲೇ ಸರ್ವ ಕ್ಲೇಷಗಳು ಉದಯಿಸುವುದರಿಂದ ಇವನ್ನು ಜನ್ಮದಾತರು ಅಂದರೆ ತಾಯಿ-ತಂದೆಯರು ಎನ್ನುತ್ತಾರೆ. ಇಲ್ಲಿ ರಾಜರೆಂದರೆ ಪ್ರಧಾನವಾಗಿರುವ ಎರಡು ಮಿಥ್ಯಾದೃಷ್ಟಿಕೋನಗಳು. (ಶಾಶ್ವತವಾದ ಮತ್ತು ಉಚ್ಚೇದವಾದ). ರಾಜನಿಗೆ ಅಧೀನರಾಗಿರುವವರೆಂದರೆ ರಾಗಾಧಿಗಳು. ಇಲ್ಲಿ ರಾಷ್ಟ್ರವೆಂದರೆ ಆರು ಇಂದ್ರಿಯಗಳಾದ (ಕಣ್ಣು, ಕಿವಿ ಇತ್ಯಾದಿ) ಮತ್ತು ಆರು ಇಂದ್ರಿಯಗಳ ವಿಷಯಗಳೆಂದರೆ (ರೂಪ, ಶಬ್ದ, ಇತ್ಯಾದಿ). ಹಾಗು ವ್ಯಾಘ್ರವೆಂದರೆ ಐದು ನಿವರಣ (ಭೋಗಾಭಿಲಾಷೆ, ದ್ವೇಷ, ಸೋಮಾರಿತನ, ಚಿಂತೆ ಮತ್ತು ಸಂದೇಹವಾಗಿದೆ) ಗಳಾಗಿವೆ.

 

dhammapada/pakinnakavagga/21.3/bhaddiyabhikkhus

ಅಜಾಗರೂಕನ ಆಸವಗಳು ವಧರ್ಿಸುವುದು

"ಯಾವುದನ್ನು ಮಾಡಬೇಕಾಗಿದೆಯೋ
ಅವೆಲ್ಲಾ ಮಾಡದೆ ಹಾಗೇ ಉಳಿದಿದೆ,
ಯಾವುದನ್ನು ಮಾಡಬಾರದೋ ಅವೆಲ್ಲಾ ಮಾಡಲಾಗುತ್ತಿದೆ,
ಅಂತಹ ಅಹಂಕಾರಿಯ, ಅಜಾಗರೂಕನ
ಆಸವಗಳು ವಧರ್ಿಸುತ್ತವೆ."     (292)

"ಯಾರು ಕಾಯಾಗತಾಸತಿ (ದೇಹದ ಮೇಲಿನ ಧ್ಯಾನ) ಯನ್ನು
ನಿಷ್ಠೆಯಿಂದ ಅಭ್ಯಾಸಿಸುತ್ತಿರುವರೋ,
ಯಾರು ಮಾಡಬಾರದ್ದನ್ನು ಮಾಡುವುದಿಲ್ಲವೋ ಮತ್ತು
ಮಾಡಬೇಕಾಗಿರುವುದನ್ನು ನಿರಂತರ ಮಾಡುತ್ತಿರುವರೋ,
ಅಂತಹ ಸ್ಮೃತಿವಂತರ, ಜಾಗರೂಕ ಪ್ರಾಜ್ಞರ ಆಸವಗಳು ಅಂತ್ಯವಾಗುತ್ತವೆ."     (293)

ಗಾಥ ಪ್ರಸಂಗ 21:3
ಭದ್ದಿಯಾ ಭಿಕ್ಷುಗಳ ಚಿತ್ತ ಚಾಂಚಲ್ಯತೆ


            ಭದ್ದಿಯಾ ನಗರದಲ್ಲಿ ಕೆಲ ಭಿಕ್ಷುಗಳಿದ್ದರು. ಅವರು ಕೆಲವು ಬಗೆಯ ಬಳ್ಳಿಗಳಿಂದ ಹುಲ್ಲಿನಿಂದ ಚಪ್ಪಲಿ ತಯಾರಿಸಿಕೊಂಡು, ಅದನ್ನು ಅಲಂಕೃತವನ್ನಾಗಿಸುವಲ್ಲಿ ಆಸಕ್ತರಾಗಿದ್ದರು. ಅವರು ಸಹಾ ಈ ಕುರಿತೇ ಚಿಂತಿಸುತ್ತಾ ಆ ಕಾರ್ಯದಲ್ಲೇ ತಲ್ಲೀನರಾಗಿದ್ದರು. ಹೀಗಾಗಿ ಅವರು ಪರಮಾರ್ಥ ಜೀವನ ಕುಂಠಿತವಾಯಿತು. ಈ ವಿಷಯವು ಬುದ್ಧರ ಬಳಿಗೂ ತಲುಪಿತು. ಆಗ ಭಗವಾನರು ಅವರನ್ನು ಕರೆಯಿಸಿ ಹೀಗೆ ತಿದ್ದಿದರು: "ನನ್ನ ಮಕ್ಕಳೇ, ನೀವು ಸಂಘ ಸೇರಿರುವುದು ಪರಿಶುದ್ಧತೆಯ ಪ್ರಾಪ್ತಿಗಾಗಿ. ಅಂದರೆ ಅರಹಂತ ಫಲ ಪ್ರಾಪ್ತಿಗಾಗಿ, ಆದರೆ ನೀವು ಈಗ ಅಪಾರ ಪರಿಶ್ರಮಿಗಳಾಗಿರುವುದು ಚಪ್ಪಲಿ ನಿಮರ್ಾಣದಲ್ಲಿ ಹಾಗು ಅದರ ಅಲಂಕೃತತೆಯಲ್ಲಿ. ಹೀಗಿದ್ದಲ್ಲಿ ನಿಮ್ಮ ಆಸವಗಳು ಇನ್ನೂ ಹೆಚ್ಚುವುವು" ಎಂದು ಹೇಳಿ ಈ ಮೇಲಿನ ಗಾಥೆಗಳನ್ನು ನುಡಿದರು.

dhammapada/pakinnakavagga/21.2/hatredness

ಹಿಂಸೆಯಿಂದ ವೈರತ್ವವು ನಾಶವಾಗದು

"ಯಾರು ಪರರಿಗೆ ದುಃಖವನ್ನು ನೀಡಿ,
ತಾನು ಸುಖವನ್ನು ಇಚ್ಚಿಸುವನೋ,
ಆತನು ವೈರತ್ವದ ಜಾಲದಲ್ಲಿ
ಸಿಲುಕಿ ವೈರ್ಯದಿಂದ ಎಂದಿಗೂ ಮುಕ್ತನಾಗುವುದಿಲ್ಲ."     (291)
ಗಾಥ ಪ್ರಸಂಗ 21:2

ಕ್ಷಮೆಯಿಂದಲೇ ಸೇಡು ನಾಶವಾಗುವುದು

            ಶ್ರಾವಸ್ಥಿಯ ಸಮೀಪದ ಹಳ್ಳಿಯಲ್ಲಿ ಸ್ತ್ರೀಯೊಬ್ಬಳು ವಾಸವಾಗಿದ್ದಳು. ಆಕೆಯ ಬಳಿ ಕೋಳಿಯೊಂದಿತ್ತು. ಆದರೆ ಆ ಕೋಳಿಯು ಪ್ರತಿಸಾರಿ ಮೊಟ್ಟೆ ಇಟ್ಟಾಗ ಆ ಸ್ತ್ರೀಯು ಆ ಮೊಟ್ಟೆಯನ್ನು ಒಡೆದು ತಿಂದುಬಿಡುತ್ತಿದ್ದಳು. ಇದರಿಂದಾಗಿ ಆ ಕೋಳಿಗೆ ಅಪಾರ ನೋವಾಗುತ್ತಿತ್ತು. ಆಗ ಪ್ರತಿಸಾರಿಯು ಆ ಸ್ತ್ರೀಯ ಮೇಲೆ ಪ್ರತಿಕಾರ ಬಯಸಿತು. ತಾನು ಸಹಾ ಆಕೆಯ ಸಂತಾನವನ್ನು ತಿಂದುಹಾಕಲು ಪ್ರತಿಜ್ಞೆ ಮಾಡಿತು.
            ಮುಂದಿನ ಜನ್ಮದಲ್ಲಿ ಆ ಸ್ತ್ರೀಯು ಕೋಳಿಯಾಗಿ ಹುಟ್ಟಿದಳು. ಹಿಂದಿನ ಜನ್ಮದಲ್ಲಿ ಕೋಳಿಯಾಗಿದ್ದಂತಹ ಜೀವಿಯು ಈ ಜನ್ಮದಲ್ಲಿ ಬೆಕ್ಕಾಗಿ ಹುಟ್ಟಿತು. ಅವರೆಡೂ ಅದೇ ಮನೆಯಲ್ಲಿ ಹೀಗೆ ಜನಿಸಿದ್ದವು. ಈ ಬಾರಿ ಬೆಕ್ಕು ಆ ಕೋಳಿಯ ಮೊಟ್ಟೆಗಳನ್ನು ತಿಂದುಹಾಕತೊಡಗಿತು. ಆಗ ಕೋಳಿಯು ಬೆಕ್ಕಿನ ಸಂತಾನವನ್ನು ತಿನ್ನುವ ಪ್ರತಿಜ್ಞೆ ಮಾಡಿತು. ನಂತರದ ಜನ್ಮದಲ್ಲಿ ಕೋಳಿಯು ಚಿರತೆಯಾಗಿ ಜನ್ಮ ತಾಳಿತು ಹಾಗು ಬೆಕ್ಕು, ಜಿಂಕೆಯಾಗಿ ಹುಟ್ಟಿತು. ಈಗಿನ ಜನ್ಮದಲ್ಲಿ ಚಿರತೆಯು ಜಿಂಕೆಯ ಮರಿಗಳನ್ನು ತಿಂದುಹಾಕಿ, ಕೊನೆಗೆ ಜಿಂಕೆಯನ್ನು ತಿಂದುಹಾಕಿತು. ಆಗ ಜಿಂಕೆಯು ಸಾಯುವಾಗ ಪ್ರತಿಕಾರದ ಪ್ರತಿಜ್ಞೆಯಿಂದಲೇ ಸತ್ತಿತು. ಹೀಗೆಯೇ ಇವರೀರ್ವರ ಪ್ರತಿಕಾರದ ವೈರತ್ವವು ಪ್ರತಿ ಜನ್ಮದಲ್ಲೂ ಸಾಗುತ್ತಿತ್ತು.
            ಬುದ್ಧರ ಕಾಲದಲ್ಲಿ ಅವರಲ್ಲಿ ಒಬ್ಬಾಕೆ ಸ್ತ್ರೀಯಾಗಿ ಹುಟ್ಟಿದಳು. ಮತ್ತೊಬ್ಬಳು ನರಭಕ್ಷಿಸುವ ಯಕ್ಷಿಣಿಯಾಗಿ ಹುಟ್ಟಿದಳು. ಒಂದು ಸಂದರ್ಭದಲ್ಲಿ ಆ ಸ್ತ್ರೀಯು ತನ್ನ ತವರು ಮನೆಯಿಂದ ತನ್ನ ಗಂಡನ ಮನೆಗೆ ಶ್ರಾವಸ್ತಿಯ ಸಮೀಪ ಹೋಗುತ್ತಿದ್ದಳು. ಆಗ ಆಕೆಯ ಗಂಡ ಮತ್ತು ಪುಟ್ಟ ಮಗುವು ಸದಾ ಆಕೆಯ ಜೊತೆಯಲ್ಲಿತ್ತು. ಅವರು ರಸ್ತೆಯ ಬದಿಯ ಕೊಳದ ಬಳಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ ಆಕೆಯ ಗಂಡನು ಸ್ನಾನ ಮಾಡಲು ಕೊಳಕ್ಕೆ ಇಳಿದನು. ಅದೇ ಕ್ಷಣದಲ್ಲಿ ಯಕ್ಷಿಣಿಯು ಮಗುವನ್ನು ತಿನ್ನಲು ಅಲ್ಲಿಗೆ ಧಾವಿಸಿದಳು. ತಕ್ಷಣ ಸ್ತ್ರೀಯು ತನ್ನ ಶತ್ರುವನ್ನು ಗುತರ್ಿಸಿದಳು. ಆಕೆ ಮಗುವನ್ನು ಎತ್ತಿಕೊಂಡು ಓಡಿದಳು. ಸಮೀಪದಲ್ಲಿ ಆಕೆಗೆ ಜೇತವನದ ವಿಹಾರದೊಳಕ್ಕೆ ನುಗ್ಗಿದಳು. ಆಗ ಭಗವಾನರು ಧಮ್ಮವನ್ನು ಬೋಧಿಸುತ್ತಿದ್ದರು. ಆ ಸ್ತ್ರೀಯು ಭಗವಾನರ ಪಾದದ ಹತ್ತಿರ ಮಗುವನ್ನು ಇಟ್ಟು "ಭಗವಾನ್, ಕಾಪಾಡಿ, ಕಾಪಾಡಿ" ಎಂದಳು. ಆಕೆ ಅತ್ಯಂತ ಭಯಭೀತಳಾಗಿದ್ದಳು. ಭಗವಾನರು ಆಕೆಗೆ ರಕ್ಷಣೆಯ ಅಭಯ ನೀಡಿದರು.

            ಇತ್ತ ಸ್ತ್ರೀಯನ್ನು ಅಟ್ಟಿಸಿಕೊಂಡು ಬಂದಂತಹ ಯಕ್ಷಿಣಿಗೆ ವಿಹಾರಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ರಕ್ಷಣಾ ದೇವತೆಗಳು ಆಕೆಗೆ ಪ್ರವೇಶಿಸಲು ಬಿಡಲಿಲ್ಲ. ಆದರೆ ಎಲ್ಲವನ್ನು ಬಲ್ಲಂತಹ ಭಗವಾನರು ಆನಂದರಿಗೆ ಕಳುಹಿಸಿ ಆ ಯಕ್ಷಿಣಿಯನ್ನು ಕರೆತರಲು ಕಳುಹಿಸಿದರು. ಆಕೆಯು ಅಲ್ಲಿಗೆ ಬಂದಾಗ ಭಗವಾನರು ಅವರಿಬ್ಬರನ್ನು ಕುರಿತು ಹೀಗೆ ಹೇಳಿದರು: "ನೀವಿಬ್ಬರೂ ಕೇವಲ ಈಗಿನಿಂದ ಶತ್ರುತ್ವ ಹೊಂದಿಲ್ಲ. ಅನೇಕ ಜನ್ಮಗಳಿಂದ ಇದು ಸಾಗಿಬಂದಿದೆ" ಎಂದು ಅವರಿಬ್ಬರಲ್ಲಿ ನಡೆದ ಸೇಡಿನ ಸರಪಳಿ ತಿಳಿಸಿದರು. ನಂತರ ಹೀಗೆ ಹೇಳಿದರು. "ನೀವು ಇಂದು ನನ್ನಲ್ಲಿಗೆ ಬಾರದೆ ಹೋಗಿದ್ದರೆ ನಿಮ್ಮ ಶತೃತ್ವ ಅನಂತಕಾಲದವರೆಗೆ ಹೀಗೆ ಸಾಗುತ್ತಿತ್ತು. ವೈರತ್ವದಿಂದ ವೈರ್ಯವು ನಾಶವಾಗುವುದಿಲ್ಲ. ಅದು ಅವೈರ್ಯತ್ವದಿಂದಲೇ (ಮೈತ್ರಿ/ಕರುಣೆ/ಅಹಿಂಸೆ/ಕ್ಷಮೆ/ಪ್ರಜ್ಞಾ/ಶಾಂತತೆ) ನಾಶವಾಗುವುದು) ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು. ಆ ಗಾಥೆಯನ್ನು ಆಲಿಸಿ ಆ ಸ್ತ್ರೀಯು ಸೋತಪತ್ತಿ ಫಲ ಪಡೆದಳು. ಆ ಯಕ್ಷಿಣಿಯು ತ್ರಿಶರಣು ಹೊಂದಿದಳು. ಇಬ್ಬರಲ್ಲಿ ದ್ವೇಷ, ವೈರತ್ವ ನಾಶವಾಯಿತು. ಇಬ್ಬರೂ ಪರಸ್ಪರ ಮಿತ್ರರಾದರು.

dhammapada/pakinnakavagga/21.1/ratanasuttastory

        21.ಪಕಿಣ್ಣಕ ವಗ್ಗ (ಮಿಶ್ರ ವರ್ಗ)

                   ವಿಪುಲತೆಗಾಗಿ ಅಲ್ಪಸುಖ ತ್ಯಜಿಸು

"ಅಲ್ಪಮಾತ್ರ ಸುಖವನ್ನು ಪರಿತ್ಯಜಿಸಿದಾಗ
ವಿಪುಲವಾದ ಸುಖವು ಸಿಗುವುದಾದರೆ,
ಧೀಮಂತನು ವಿಪುಲವಾದ ಸುಖದೆಡೆ ಗಮನಕೊಟ್ಟು
ಅಲ್ಪಮಾತ್ರ ಸುಖವನ್ನು ತ್ಯಾಗಮಾಡಲಿ."      (290)


ಗಾಥ ಪ್ರಸಂಗ 21:1
ರತನಸುತ್ತದ ಮಹೋನ್ನತೆಯ ವಿವರ

            ಒಮ್ಮೆ ವೈಶಾಲಿಯಲ್ಲಿ ಕ್ಷಾಮ ಭೀಕರವಾಗಿ ಆಕ್ರಮಿಸಿತು. ಈ ಬರಗಾಲದಿಂದಾಗಿ ಎಲ್ಲೆಡೆಯು ಬೇಸಾಯವು ಇನ್ನಿಲ್ಲದಂತೆ ಕೈಕೊಟ್ಟಿತು. ಹಲವಾರು ಜನರು ಆಹಾರವಿಲ್ಲದೆ ಸಾಯುವಂತಾಯಿತು. ಸಾವಿನ ಜೊತೆಗೆ ಸಾಂಕ್ರಾಮಿಕ ರೋಗಗಳು ಸಹಾ ಹರಟಿಕೊಂಡವು. ಎಲ್ಲೆಡೆ ಹೆಣಗಳ ವಾಸನೆಯು ಹಬ್ಬಿತು. ಈ ವಾಸನೆಯಿಂದಾಗಿ ಅಮನುಷ್ಯರಾದ ನರಭಕ್ಷಕ ಯಕ್ಷ ಪಿಶಾಚಿಗಳ ಆಗಮನವಾಯಿತು. ಹೀಗಾಗಿ ವೈಶಾಲಿ ನಗರ ನಿವಾಸಿಗಳು ಬರ, ರೋಗ ಮತ್ತು ಯಕ್ಷಗಳ ಕಾಟವನ್ನು ಏಕಕಾಲದಲ್ಲಿ ಅನುಭವಿಸುವಂತಾಯಿತು. ಹೀಗಾಗಿ ಅವರೆಲ್ಲ ರಕ್ಷಣೆಯನ್ನು ಹುಡುಕಿದರು. ಪರಮಯೋಗ್ಯ ಶರಣನ್ನು ಹೊಂದಲು ಬಯಸಿದರು. ಮೊದಮೊದಲು ಬೇರೆ ಶರಣರನ್ನು ಹೊಕ್ಕರಾದರೂ, ಕೊನೆಗೆ ಇದಕ್ಕೆ ಸೂಕ್ತರಾದವರು ಬುದ್ಧರೊಬ್ಬರೇ ಎಂದು ನಿರ್ಧರಿಸಿ, ಭಗವಾನರನ್ನು ಆಹ್ವಾನಿಸಲು ನಿರ್ಧರಿಸಿದರು. ನಂತರ ಲಿಚ್ಚವಿಗಳ ರಾಜಕುಮಾರ ಮಹಾಲಿ ಮತ್ತು ಬ್ರಾಹ್ಮಣರಲ್ಲಿ ಪ್ರಧಾನರಾಗಿದ್ದಂತಹ ರಾಜ ಬಿಂಬಿಸಾರನಲ್ಲಿ ಭಗವಾನರನ್ನು ಕಳುಹಿಸಿಕೊಡಲು ಕೋರಿಕೊಂಡರು. ಅದೇ ಸಮಯದಲ್ಲಿ ಭಗವಾನರಿಗೂ ವೈಶಾಲಿ ನಗರಕ್ಕೆ ಬೇಟಿ ನೀಡಿ ಅವರನ್ನು ಕಾಪಾಡಬೇಕೆಂದು ನಿರ್ಧರಿಸಿದರು. ಹಾಗೆಯೇ ರಾಜ ಬಿಂಬಿಸಾರನು ಭಗವಾನರಿಗೆ ವೈಶಾಲಿ ನಗರಕ್ಕೆ ಹೋಗಬೇಕೆಂದು ಕೋರಿಕೊಂಡನು. ಅಷ್ಟೇ ಅಲ್ಲ, ಆತನು ಭಗವಾನರಿಗೆ ಮಾರ್ಗ ಮಧ್ಯದಲ್ಲಿ ತಂಗಲು ಪ್ರತಿ ಯೋಜನದಲ್ಲೂ ವ್ಯವಸ್ಥೆಯೆಲ್ಲ ಮಾಡಿದನು. ಆಹಾರ ಪಾನಿಯ ಇನ್ನಿತರ ವ್ಯವಸ್ಥೆ ಮಾಡಿದನು. ಹಾಗು ದಾರಿಯಲ್ಲಿ ಗಂಗಾನದಿಯ ಹಾಗು ರಾಜಗೃಹದ ನಡುವೆ ರಸ್ತೆಯನ್ನು ಅತಿ ಸುವ್ಯವಸ್ಥಿತವನ್ನಾಗಿಸಿದನು. ಭಗವಾನರು ನಿರ್ಧರಿಸಿದಂತೆ 500 ಭಿಕ್ಷುಗಳು ಸಹಿತ ನಡೆದರು. ಆಗ ರಾಜ ಬಿಂಬಿಸಾರನು ಸಹಾ ಭಗವಾನರ ಜೊತೆಗೆ ಕೂಡಿಕೊಂಡನು. 5ನೇ ದಿನದಂದು ಗಂಗಾನದಿಯ ದಡದಲ್ಲಿ ನಿಂತು ಲಿಚ್ಚವಿಗಳಿಗೆ ಸಂದೇಶವನ್ನು ಬಿಂಬಿಸಾರನು ಕಳುಹಿಸಿದನು. ಆ ಕಡೆ ದಡದಲ್ಲಿ ಲಿಚ್ಚವಿಗಳು ಸಹಾ ನದಿ ದಡದಿಂದ ತಮ್ಮ ವೈಶಾಲಿ ನಗರದವರೆಗೂ ರಸ್ತೆಯನ್ನು ಸುವ್ಯವಸ್ಥಿತಗೊಳಿಸಿದ್ದರು. ಗಡಿಯಲ್ಲಿ ಲಿಚ್ಚವಿ ರಾಜಕುಮಾರರು ಅಹ್ವಾನಿಸಲು ಬಂದಿದ್ದರು. ಆಗ ಭಗವಾನರು ಮತ್ತು ಭಿಕ್ಷುಗಳು ವೈಶಾಲಿನ ನಗರದ ಕಡೆಗೆ ಹೊರಟರು. ಆದರೆ ರಾಜ ಬಿಂಬಿಸಾರನು ಗಡಿಯಲ್ಲೇ ಉಳಿದನು. ಭಗವಾನರು ನದಿಯ ಆ ಬದಿಗೆ ಪಾದ ಇಡುತ್ತಿದ್ದಂತೆಯೇ ಪ್ರಬಲವಾದ ಮಳೆಯು ಆರಂಭವಾಯಿತು. ಅ ಮಳೆಯು ಪ್ರವಾಹದಂತೆ  ಬಿದ್ದು ಹರಿಯಿತು. ಹೀಗೆ ವೈಶಾಲಿಯೆಲ್ಲಾ ಸ್ವಚ್ಛವಾಯಿತು. ಸ್ವಚ್ಛವಾದಂತೆ ವಾಸನೆ ಇಲ್ಲದಂತಾಯಿತು, ರೋಗಗಳು ಕ್ಷೀಣವಾದವು. ಭಗವಾನರಿಗೆ ವೈಶಾಲಿಯಲ್ಲಿ ನಗರದ ಮಧ್ಯೆ ವಿಶ್ರಾಂತಿಗೃಹ ನೀಡಲಾಯಿತು. ಅದೇ ಸಮಯದಲ್ಲಿ ದೇವತೆಗಳ ಒಡೆಯ ಸಕ್ಕ ತನ್ನ ದೇವಗಣದೊಂದಿಗೆ ಅಲ್ಲಿ ಭಗವಾನರನ್ನು ಭೇಟಿ ಮಾಡಿದನು. ದೇವಗಣವು ವೈಶಾಲಿಯಲ್ಲಿ ಪ್ರತ್ಯಕ್ಷವಾದ ತಕ್ಷಣ ವೈಶಾಲಿಯಲ್ಲಿ ನೆಲೆಸಿದ್ದಂತಹ ನರಭಕ್ಷಕ ಯಕ್ಷ ಪಿಶಾಚಿಗಳೆಲ್ಲಾ ಅಲ್ಲಿಂದ ಪರಾರಿಯಾದವು.
            ಅಂದು ಸಂಜೆ ಭಗವಾನರು ರತನಸುತ್ತವನ್ನು ಪ್ರವಚಿಸಿದರು. ನಂತರ ಪೂಜ್ಯ ಆನಂದರಿಗೆ ಅದನ್ನು ನಗರದ ತಿವಿಧ ಗೋಡೆಗಳ ಮಧ್ಯೆ ಲಿಚ್ಚವಿ ಕುಮಾರರೊಂದಿಗೆ ಪಠಿಸಲು ನುಡಿದರು. ಪೂಜ್ಯ ಆನಂದರು ಹಾಗೇ ಮಾಡಿದರು. ಆಗ ರತನಸುತ್ತದ ಪರಿತ್ತವನ್ನು ಪಠಿಸುತ್ತಿದ್ದಂತೆಯೇ ರೋಗದಲ್ಲಿದ್ದವರೆಲ್ಲಾ ಗುಣಮುಖವಾಗತೊಡಗಿದರು. ಅವರೆಲ್ಲ ಕ್ಷಣಗಳಲ್ಲೇ ಆರೋಗ್ಯಭರಿತರಾದರು. ನಂತರ ಅವರೆಲ್ಲ ಭಗವಾನರನ್ನು ಭೇಟಿ ಮಾಡಿದರು. ಭಗವಾನರು ರತನಸುತ್ತವನ್ನೇ ಏಳು ದಿನಗಳು ಬೋಧಿಸಿದರು. ಏಳನೆಯ ದಿನದ ಅಂತ್ಯಕ್ಕೆ ಇಡೀ ವೈಶಾಲಿಯು ಸಹಜ ಸ್ಥಿತಿಗೆ ಮರಳಿತು. ಆಗ ಲಿಚ್ಚವಿ ರಾಜಕುಮಾರರು ಮತ್ತು ಲಿಚ್ಚವಿ ನಿವಾಸಿಗಳು ಸಾಂತ್ವನ ಪಡೆದರು. ಅವರೆಲ್ಲರಿಗೂ ಅತೀವ ಆನಂದ ಉಂಟಾಯಿತು. ಅವರೆಲ್ಲರೂ ಭಗವಾನರಿಗೆ ಕೃತಜ್ಞತೆ ಸಲ್ಲಿಸಿದರು. ಭಗವಾನರ ದರ್ಶನ ಪಡೆಯಲಾರಂಭಿಸಿದರು. ಭಗವಾನರಿಗೆ ಭಾರಿ ದಾನ, ಸತ್ಕಾರ, ಪೂಜೆ ಸಲ್ಲಿಸತೊಡಗಿದರು. ಅವರೆಲ್ಲ ಸೇರಿ ಗಂಗಾನದಿಯ ದಡದಲ್ಲಿಯೇ ಭಗವಾನರನ್ನು ಬೀಳ್ಕೊಡಲು ಬಂದಿದ್ದರು.
            ನದಿಯ ಈ ದಡದಲ್ಲಿ ರಾಜ ಬಿಂಬಿಸಾರನು ಭಗವಾನರಿಗೆ ಕಾಯುತ್ತಿದ್ದನು. ಆತನಷ್ಟೇ ಅಲ್ಲ, ದೇವದೇವತೆಗಳು, ಬ್ರಹ್ಮರು, ನಾಗರಾಜರು ತಮ್ಮ ಗಣಗಳೊಂದಿಗೆ ಬಂದಿದ್ದರು. ಅವರೆಲ್ಲರೂ ಭಗವಾನರಿಗೆ ವಂದಿಸಿ ತಮ್ಮ ದಾನ ಉಡುಗೊರೆಗಳನ್ನು ನೀಡತೊಡಗಿದರು. ದೇವ ಬ್ರಹ್ಮರುಗಳೆಲ್ಲಾ ಶ್ರೇಷ್ಠ ಛತ್ರಿಗಳೊಂದಿಗೆ, ಪುಷ್ಪಗಳೊಂದಿಗೆ ಇತ್ಯಾದಿ ವಿಧಗಳಿಂದ ಗೌರವ ಅಪರ್ಿಸಿದರು. ಆಗ ನಾಗಗಳು ಸಹಾ ಆಪಾರ ಚಿನ್ನ, ಬೆಳ್ಳಿ, ಮಾಣಿಕ್ಯಗಳು ತುಂಬಿದ ದೋಣಿಗಳಿಂದ ಬಂದು ಭಗವಾನರಿಗೆ ನಾಗಲೋಕಕ್ಕೆ ಆಹ್ವಾನಿಸಿದರು. ಅವರು 500 ವಿಧದ ಕಮಲ ಪುಷ್ಪಗಳಿಂದ ನೀರನ್ನು ಸಿಂಪಡಿಸಿ ಆರಾಧಿಸಿದರು.

            ಇದು ಭಗವಾನರ ಜೀವನದಲ್ಲಿ ಮೂರನೆಯ ವಿಶೇಷ ಸಂದರ್ಭವಾಗಿದ್ದು, ಆ ಸಂದರ್ಭದಲ್ಲಿ ಮಾನವರು ಮಾತ್ರವಲ್ಲದೆ, ದೇವತೆಗಳು ಇದ್ದರೂ ಸಹ ಭಗವಾನರಲ್ಲಿಗೆ ಬಂದು ಪೂಜಿಸುತ್ತಾರೆ. ಮೊದಲ ಸಂದರ್ಭ ಯಾವುದೆಂದರೆ ಭಗವಾನರು 'ಯಮಕಪರಿಯಾಯ' ಅತೀಂದ್ರಿಯ ಸಾಮಥ್ರ್ಯ ತೋರಿದಾಗ, ಅವರ ದೇಹದಿಂದ ಬೆಳಕಿನ ವಿವಿಧ ಪ್ರಭೆಗಳು ಮೇಲ್ಮುಖವಾಗಿ ಪ್ರಖರವಾಗಿ ಬೀರುತ್ತಿದ್ದರೆ ಕೆಳಮುಖವಾಗಿ ನೀರಿನ ತುಂತುರನ್ನು ಪ್ರೋಕ್ಷಿಸಿದರು. ಎರಡನೆಯ ಸಂದರ್ಭ ಯಾವುದೆಂದರೆ ಅವರು ತಾವತಿಂಸ ದೇವಲೋಕದಿಂದ ಅಭಿಧಮ್ಮವು ಉಪದೇಶಿಸಿ ಹಿಂತಿರುಗಿ ಬಂದಾಗ. ಮತ್ತು ಇದು ಮೂರನೆಯ ವಿಶೇಷ ಸಂದರ್ಭವಾಗಿತ್ತು.