Saturday 25 July 2015

dhammapada/dhammatthavagga/19.1/justice

     
       19. ಧಮ್ಮಟ್ಠ ವರ್ಗ




ನಿಷ್ಪಕ್ಷಪಾತಿಯು ಮತ್ತು ಸತ್ಯ ಪರೀಕ್ಷಕನೇ ನ್ಯಾಯಾಧೀಶ
 
"ಯಾರು ಇಚ್ಛಾನುಸಾರಿಯಾಗಿ (ನಿರಂಕುಶತ್ವದಿಂದ)
ನಿರ್ಣಯಗಳನ್ನು ನೀಡುವನೋ ಆತನು ಧಮರ್ಿಷ್ಠನಲ್ಲ,
ಯಾರು ಅರ್ಥ ಮತ್ತು ಅನರ್ಥಗಳನ್ನು (ಒಳಿತು-ಕೆಡುಕು / ಸರಿ-ತಪ್ಪು)
ಪರೀಕ್ಷಿಸಿ ಧಮರ್ಾನುಸಾರವಾಗಿ ತೀಮರ್ಾನಿಸುವನೋ
ಆತನೇ ಪಂಡಿತನಾಗಿದ್ದಾನೆ."      (256)



"ಯಾರು ನಿರಂಕುಶತ್ವದಿಂದ, ಪಕ್ಷಪಾತದಿಂದ
ನಿರ್ಣಯ ನೀಡದೆ, ಧಮರ್ಾನುಸಾರವಾಗಿ
ನ್ಯಾಯಾನುಸಾರವಾಗಿ ನಿರ್ಣಯಗಳನ್ನು
ನೀಡುವನೋ ಅಂತಹವನೇ ಧರ್ಮರಕ್ಷಕ
'ಧಮರ್ಾಥರ್ಿ' 'ಧಮರ್ಿಷ್ಠ' ಎನಿಸಿಕೊಳ್ಳುತ್ತಾನೆ."              (257)

ಗಾಥ ಪ್ರಸಂಗ 19:1
ನ್ಯಾಯಾಧೀಶನ ನ್ಯಾಯಹೀನತೆ

            ಒಮ್ಮೆ ಭಿಕ್ಷುಗಳು ಶ್ರಾವಸ್ಥಿಯಲ್ಲಿ ಆಹಾರಕ್ಕಾಗಿ ಹೊರಟಿರುವಾಗ ಉತ್ತರ ಭಾಗದ ಹೆಬ್ಬಾಗಿಲಿನ ಬಳಿ ನ್ಯಾಯವೊಂದು ತೀಮರ್ಾನವಾಗುತ್ತಿತ್ತು. ಭಿಕ್ಷುಗಳು ವಿಹಾರಕ್ಕೆ ಹಿಂತಿರುಗುತ್ತಿರುವಾಗ ಮಳೆಯು ಆರಂಭವಾಯಿತು. ಆಗ ಅವರು ಮಳೆ ರಕ್ಷಣೆಗಾಗಿ ನ್ಯಾಯ ನಡೆಯುತ್ತಿದ್ದ ಸಭಾಂಗಣಕ್ಕೆ ಬಂದರು. ಅವರು ಅಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ನೋಡಿದರು. ಅದೇನೆಂದರೆ, ಸ್ವತಃ ನ್ಯಾಯಾಧೀಶರೇ ಲಂಚ ತೆಗೆದುಕೊಂಡು, ನಿಜವಾಗಿಯೂ ನ್ಯಾಯ ಹಾಗು ಆಸ್ತಿ ಸಿಗಬೇಕಾಗಿದ್ದವರಿಗೆ ಅನ್ಯಾಯವೆಸಗಿದರು. ಆಗ ಅವರು ಈ ವಿಷಯವನ್ನು ಭಗವಾನರಿಗೆ ತಿಳಿಸಬೇಕೆಂದುಕೊಂಡರು. ಮಳೆ ನಿಂತ ನಂತರ ಅವರು ವಿಹಾರಕ್ಕೆ ಮರಳಿ ಭಗವಾನರಿಗೆ ಈ ವಿಷಯವೆಲ್ಲಾ ತಿಳಿಸಿದರು. ಆಗ ಭಗವಾನರು ಹೀಗೆ ನುಡಿದರು: "ಭಿಕ್ಷುಗಳೇ, ಯಾರು ಪಾಪೀಚ್ಛೆಗಳಿಂದ ಕೂಡಿ, ನ್ಯಾಯ ತೀಮರ್ಾನಿಸುವರೋ ಅವರು ನ್ಯಾಯಾಧೀಶರಲ್ಲ. ಬದಲಾಗಿ ಯಾರು ಸಾಕ್ಷಿಯನ್ನು ಬುದ್ಧಿವಂತಿಕೆಯಿಂದ ತೂಗಿ, ನಿಷ್ಪಕ್ಷಪಾತವಾಗಿ ನಿರ್ಣಯಿಸುವರೋ ಅವರು ನ್ಯಾಯಾಧೀಶರು ಆಗುವರು" ಎಂದು ನುಡಿದು ಈ ಮೇಲಿನ ಗಾಥೆ ನುಡಿದರು.

No comments:

Post a Comment