Saturday 25 July 2015

dhammapada/dhammatthavagga/19.2/sixbhikkhus

ಬಹುವಾಗಿ ಮಾತನಾಡಿದ ಮಾತ್ರಕ್ಕೆ ಜ್ಞಾನಿಯಲ್ಲ

"ಬಹುವಾಗಿ ಮಾತನಾಡಿದ ಮಾತ್ರಕ್ಕೆ ಪಂಡಿತನಾಗುವುದಿಲ್ಲ,
ಕ್ಷೇಮಿಯು (ಮನಸ್ಸಿನ ಶಾಂತತೆಯ ರಕ್ಷಿಸಿದವನು)
ವೈರರಹಿತನೂ, ಭಯರಹಿತನೂ (ಅಭಯನು)
ಪಂಡಿತನೆಂದು ಕರೆಯಲ್ಪಡುತ್ತಾನೆ."             (258)

ಗಾಥ ಪ್ರಸಂಗ 19:2
ಆರು ಭಿಕ್ಷುಗಳ ಅವಿಧೇಯತೆ ಹಾಗು ಅಜ್ಞಾನ


            ಶ್ರಾವಸ್ತಿಯಲ್ಲಿ ಆರು ಭಿಕ್ಷುಗಳ ಒಂದು ಗುಂಪು ಇತ್ತು. ಅವರು ಹಳ್ಳಿಯಲ್ಲೇ ಇರಲಿ ಅಥವಾ ವಿಹಾರದಲ್ಲೇ ಇರಲಿ, ಸದಾ ತೊಂದರೆ ನೀಡುವವರು ಆಗಿದ್ದರು. ಒಂದುದಿನ ಕೆಲವು ಸಾಮಣೇರರು ಊಟ ಮಾಡುತ್ತಿರುವಾಗ ಈ ಆರು ಜನರ ಗುಂಪಿನ ಭಿಕ್ಷುಗಳು ಬಂದು ತಮ್ಮ ಕುಕೃತ್ಯದ ಬಗ್ಗೆ ಪ್ರಶಂಸಿಸಿಕೊಳ್ಳುತ್ತಾ ಹೀಗೆ ಹೇಳಿಕೊಂಡರು. "ನೋಡಿ ನಾವೇ ಪಂಡಿತರು (ಬುದ್ಧಿವಂತರು), ನಂತರ ಅವರು ಅಷ್ಟಕ್ಕೇ ಸುಮ್ಮನಾಗದೆ ವಸ್ತುಗಳನ್ನು ಎಸೆಯಲಾರಂಭಿಸಿದರು. ಇದರಿಂದಾಗಿ ಗದ್ದಲವುಂಟಾಯಿತು. ಆಹಾರ ಸೇವಿಸುವ ಸ್ಥಳ ಅಸ್ತವ್ಯಸ್ತವಾಯಿತು. ನಂತರ ಈ ವಿಷಯವನ್ನು ಭಗವಾನರಿಗೆ ತಿಳಿಸಲಾಯಿತು. ಆಗ ಭಗವಾನರು ಹೀಗೆ ನುಡಿದರು: "ಭಿಕ್ಷುಗಳೇ, ಒಬ್ಬನು ಬಹುವಾಗಿ ಮಾತನಾಡುವುದರಿಂದಲೇ ಪಂಡಿತನಾಗುವುದಿಲ್ಲ (ಜ್ಞಾನಿ), ಹಾಗೆಯೇ ನಿಂದಿಸುವವನು ಮತ್ತು ಪರರನ್ನು ಪೀಡಿಸುವವನು ಸಹಾ ಜ್ಞಾನಿಯಲ್ಲ. ಯಾರು ವೈರರಹಿತನೋ, ಹಿಂಸಾರಹಿತನೋ ಆತನೇ ಪಂಡಿತ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು. 

No comments:

Post a Comment