Friday 9 October 2015

dhammapada/brahmanavagga/26.35/nataputta

ಸರ್ವಬಂಧನ ಮುಕ್ತನೇ ಬ್ರಾಹ್ಮಣ
ಯಾರು ಮನುಷ್ಯ ಲೋಕದ ಬಂಧನಗಳನ್ನು ತ್ಯಜಿಸಿ,
ದಿವ್ಯಲೋಕಗಳ ಬಂಧನಗಳಿಂದಲೂ ಮೀರಿ ಹೋಗಿರುವನೋ,
ಪ್ರತಿ ಬಂಧನಗಳಿಂದಲೂ ಪೂರ್ಣ ಮುಕ್ತನೋ
ಅಂಥವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.  (417)

ಗಾಥ ಪ್ರಸಂಗ 26.35
ನಾಟ್ಯಪುತ್ತ (ನಾಟಪುತ್ತ) ಅರಹಂತನಾದನು

                ಒಮ್ಮೆ ನಾಟಪುತ್ತನೆಂಬ ನೃತ್ಯಗಾರನು, ತನ್ನ ಪ್ರದರ್ಶನಗಳನ್ನು ಸ್ಥಳದಿಂದ ಸ್ಥಳಕ್ಕೆ ತೋರಿಸುತ್ತಾ ಬರುತ್ತಿರುವಾಗ, ಭಗವಾನರ ಬೋಧನೆ ಆಲಿಸಿದನು. ತಕ್ಷಣ ಲೌಕಿಕ ಜೀವನ ವಜರ್ಿಸಿ ಭಿಕ್ಷುವಾಗಿ, ಕೆಲಕಾಲದ ನಂತರ ಅರಹಂತನೂ ಆಗಿಬಿಟ್ಟನು.
                ಒಂದುದಿನ ಒಂದು ಹಳ್ಳಿಯಲ್ಲಿ ಆಹಾರಕ್ಕಾಗಿ ಭಿಕ್ಷುಗಳೊಂದಿಗೆ ಹೋಗುತ್ತಿರುವಾಗ, ಅಲ್ಲಿ ಒಬ್ಬನು ನೃತ್ಯವನ್ನು ಪ್ರದಶರ್ಿಸುತ್ತಿದ್ದನು. ಅದನ್ನು ಕಂಡಂತಹ ಭಿಕ್ಷುಗಳು ಆತನಿಗೆ ಹೀಗೆ ಕೇಳಿದರು: ಸೋದರ, ನೀನು ಸಹಾ ಹೀಗೆಯೇ ಇಂತಹ ನೃತ್ಯದ, ನಾಟಕಗಳ ಪ್ರದರ್ಶನ ನೀಡುತ್ತಿದ್ದೆ. ಈಗಲೂ ಸಹಾ ಅಂತಹ ವಿಷಯಗಳಲ್ಲಿ ನೀನು ಆನಂದಪಡುತ್ತಿಯಲ್ಲವೇ?
                ಇಲ್ಲ, ಖಂಡಿತವಾಗಿಯೂ ಇಲ್ಲ.

                ಆಗ ಭಿಕ್ಷು ಈತನ ಮಾತನ್ನು ನಂಬದೆ ಭಗವಾನರಲ್ಲಿ ಈತನು ಸುಳ್ಳು ನುಡಿಯುತ್ತಿದ್ದಾನೆ ಎಂದು ದೂರು ನೀಡಿದರು. ಆಗ ಭಗವಾನರು ನನ್ನ ಪುತ್ರ ಸರ್ವ ಬಂಧನಗಳಿಗೆ ಅತೀತನಾಗಿದ್ದಾನೆ ಎಂದು ತಿಳಿಸಿ ಈ ಮೇಲಿನ ಗಾಥೆಯನ್ನು ನುಡಿದರು. 

No comments:

Post a Comment