Wednesday 1 April 2015

dhammapada/sahassavagga/8.7/brahman

ಪರಿಶುದ್ಧ ಪೂಜೆಯು ಪ್ರಾಣಿ ಬಲಿಗಿಂತ ಸವರ್ೊತ್ತಮವಾದುದು
ಪುಣ್ಯವನ್ನು ಅಪೇಕ್ಷಿಸುತ್ತಾ ಯಾರು ಈ ಲೋಕದಲ್ಲಿ ಸಂವತ್ಸರಕ್ಕೊಮ್ಮೆ ಯಜ್ಞಗಳನ್ನು ಮಾಡಿದರೂ ಸಹಾ, ಅವ್ಯಾವುದೂ ಸಹಾ ಋಜಗತರನ್ನು ಅಭಿವಂದಿಸುವಂತ ಶ್ರೇಯಸ್ಕರದ ಲಾಭದ ಕಾಲುಭಾಗಕ್ಕೂ ಸಮವಾಗಲಾರದು.  (108)
ಗಾಥ ಪ್ರಸಂಗ 8:7
ಬ್ರಾಹ್ಮಣನ ವ್ಯರ್ಥ ಪ್ರಾಣಿ ಬಲಿ

                ಒಮ್ಮೆ ಪೂಜ್ಯ ಸಾರಿಪುತ್ರರು ತಮ್ಮ ಗೆಳೆಯನಾಗಿರುವ ಬ್ರಾಹ್ಮಣನಿಗೆ ಹೀಗೆ ಪ್ರಶ್ನಿಸಿದರು. ಓ ಬ್ರಾಹ್ಮಣ, ನೀನು ಪುಣ್ಯಕಾರ್ಯಗಳಲ್ಲಿ ತೊಡಗಿರುವೆಯಷ್ಟೆ ?
                ಹೌದು ನಾನು ಪ್ರಾಣಿ ಬಲಿಯಂತಹ ಪುಣ್ಯ ಕಾರ್ಯದಲ್ಲಿ ತೊಡಗಿರುವೆ.
                ಓಹ್ ಅದು ಪಾಪ, ಪುಣ್ಯಕಾರ್ಯವಲ್ಲ. ನಾನು ನಿನಗೆ ಭಗವಾನರ ಬಳಿಗೆ ಕರೆದೊಯ್ಯುವೆ, ನಿನಗೆ ಕನಿಷ್ಟ ಬ್ರಹ್ಮ ಮಾರ್ಗವಾದರೂ ದೊರೆಯುತ್ತದೆ.

                ಅಲ್ಲಿಗೆ ಕರೆತಂದ ಸಂದರ್ಭದಲ್ಲಿ ಭಗವಾನರು ಬ್ರಾಹ್ಮಣನಿಗೆ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment